ಮುಂಡರಗಿ: ಸಾಧೆನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸಾಧಿಸಬೇಕು ಎನ್ನುವ ಛಲವೊಂದಿದ್ದರೆ, ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಗರಬತ್ತಿ ಮಾರುವ ಕುಟುಂಬವೊಂದವರ ಕುವರನ ಕಥೆ ತಾಜಾ ಉದಾಹರಣೆ.

ಸಾಧನೆ ಮಾಡಲು ಸತತವಾದ ಪ್ರಯತ್ನ ಬೇಕು. ಜೊತೆಗೆ ತಾಳ್ಮೆ ಬೇಕು. ಈ ನಿಟ್ಟಿನಲ್ಲಿ ಮುಂಡರಗಿ ಪಟ್ಟಣದ ಸಾಗರ್ ಎನ್ನುವ ಯುವಕನ ಸಾಧನೆಯ ಹಾದಿಯ ಕಥೆ ಮಾತ್ರ ಪ್ರತಿಯೊಬ್ಬ ಯುವಕರಿಗೆ ಸ್ಪೂರ್ತಿದಾಯಕ.

ಇತ್ತಿಚೆಗೆ ಪ್ರಕಟವಾದ ಪಿಎಸ್ಐ ಪರೀಕ್ಷೆ ಫಲಿತಾಂಶದಲ್ಲಿ ಸಾಗರ್ ರಾಜ್ಯಕ್ಕೆ 173ನೇ ರ‌್ಯಾಂಕ್ ಪಡೆಯುವ ಮೂಲಕ ಬಡತನದಲ್ಲಿ ಅರಳಿದ ಗುಲಾಬಿಯಾಗಿದ್ದಾನೆ.

ಕನ್ನಡ ಮಾದ್ಯಮದಲ್ಲಿ ಓದು

ಸಾಗರ್, ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ, ಪ್ರೌಢ, ಹಾಗೂ ಪದವಿ ಶಿಕ್ಷಣವನ್ನು ಪಡೆದಿದ್ದಾನೆ. ಯಾವುದೇ ಕೋಚಿಂಗ್ ಇಲ್ಲದೆ ಸತತ ಪರಿಶ್ರಮದಿಂದ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವುದು ವಿಶೇಷವೇ ಸರಿ.

ಆನ್ ಲೈನ್ ಶಿಕ್ಷಣವೇ ಆಧಾರ

ಆನ್ ಲೈನ್ ಮೂಲಕ ಪಠ್ಯ ಪುಸ್ತಕ ಹಾಗೂ ಹಳೆ ಪ್ರಶ್ನೆಪತ್ರಿಕೆಯನ್ನು ಮೊಬೈಲ್ ಸಹಾಯದಿಂದ ತಗೆದುಕೊಂಡು ನಿರಂತವಾಗಿ ಅಭ್ಯಾಸಮಾಡಿ ಪಿಎಸ್ಐ ಹುದ್ದೆಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಇವರು ಮೊದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲ ತಿಂಗಳ ಕಾರ್ಯ ನಿರ್ವಹಿಸಿದ್ದಾರೆ.

ಅಗರಬತ್ತಿ ಮಾರಾಟವೇ ಕುಟುಂಬಕ್ಕೆ ಆಧಾರ

ಸಾಗರ್ ಕುಟುಂಬಕ್ಕೆ ಅಗರಬತ್ತಿ ವ್ಯಾಪಾರವೇ ಮೂಲ ವೃತ್ತಿ. ಕುಟುಂಬದ ಜೊತೆಗೆ ತಾನೂ ಕೂಡ ಅಗರಬತ್ತಿ ತಯಾರಿಕೆಯ ಕಾಯಕದಲ್ಲಿ ಸಾಗರ್ ಕೈ ಜೋಡಿಸುತ್ತಿದ್ದ. ಬಡತನದ ಬೇಗೆಯಲ್ಲಿಯೇ ಛಲ ಬಿಡದೇ ಓದಿದ ಪರಿಣಾಮ ಈಗ ಪಿಎಸ್ಐ ಆಗಿ ಆಯ್ಕೆಯಾಗುವಂತೆ ಮಾಡಿತು. ಈ ಮೂಲಕ ಮುಂಡರಗಿ ಜನರಿಂದ ಸಾಗರ್ ಸೈ ಎನಿಸಿಕೊಂಡಿದ್ದಾರೆ.

ತಂದೆ ವಾಸುಜಿ ತಾಯಿ ಲಕ್ಷ್ಮೀ ಅವರು ಕೂಡ ಮಗನ ಬಗ್ಗೆ ಅಪಾರ ಕನಸು ಕಟ್ಟಿಕೊಂಡಿದ್ದರು. ಆದರೆ ಈಗ ಮಗನ ಸಾಧನೆಯಿಂದ ತಂದೆ-ತಾಯಿ, ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಸಾಗರ ಸಾಧನೆಯ ಹಾದಿ ಹೀಗೆ ಸಾಗಲಿ ಎಂಬುದು ಉತ್ತರಪ್ರಭದ ಹಾರೈಕೆ.

Leave a Reply

Your email address will not be published. Required fields are marked *

You May Also Like

ಅಶ್ಲೀಲ ಪೋಟೋ ನೋಡು, ವರದಕ್ಷಿಣೆ ತರುವಂತೆ ಪತಿಯಿಂದ ವೈದ್ಯೆಗೆ ಕಿರುಕುಳ!

ಬೆಂಗಳೂರು : ಪತಿಯು ಅಶ್ಲೀಲ ವಿಡಿಯೋ ನೋಡುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ ಪತ್ನಿ ದೂರು ದಾಖಲಿಸಿರುವ ಘಟನೆ ನಡೆದಿದೆ.

ಗದಗ ಜಿಲ್ಲೆಯಲ್ಲಿಂದು ನಿಲ್ಲದ ಕೊರೊನಾ ಸಂಚಾರ: ಇಂದು ಮತ್ತೆ 61 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಕೂಡ 61 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 1004 ಸೋಂಕಿತರು ಪತ್ತೆಯಾದಂತಾಗಿದೆ. ಇಂದು 26 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡ

ಕೊರೊನಾ ಪಿಪಿಇ ಕಿಟ್ ನದಿಯಲ್ಲಿ ಪತ್ತೆ: ಗ್ರಾಮಸ್ಥರ ಆತಂಕ

ಕೊರೊನಾ ವೈದ್ಯಕೀಯ ಸಿಬ್ಬಂದಿ ಬಳಸುವ ವೈಯಕ್ತಿಕ ಸುರಕ್ಷ ಸಾಧನ(ಪಿಪಿಇ), ನದಿಯಲ್ಲಿ ಪತ್ತೆಯಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಗದಗ ಜಿಲ್ಲೆಯಲ್ಲಿ ವಿವಿದೆಡೆ 66400 ರೂ, ಮೌಲ್ಯದ ಅಕ್ರಮ ಮದ್ಯ ವಶ: ಆರೋಪಿಗಳ ಬಂಧನ

ಗದಗ: ಕೋವಿಡ್ 19 ಮಾರ್ಗಸೂಚಿಗಳನ್ನು ಹಾಗೂ ಕಾನೂನು ಉಲ್ಲಂಘನೆ ಮಾಡಿ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ 15 ಜನ ಆರೋಪಿತರಿಗಳನ್ನು ಬಂಧಿಸಿ , ಅವರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿ, ಬಂಧಿತರಿಂದ 66400 ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ