ಮುಂಡರಗಿ: ಸಾಧೆನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸಾಧಿಸಬೇಕು ಎನ್ನುವ ಛಲವೊಂದಿದ್ದರೆ, ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಅಗರಬತ್ತಿ ಮಾರುವ ಕುಟುಂಬವೊಂದವರ ಕುವರನ ಕಥೆ ತಾಜಾ ಉದಾಹರಣೆ.

ಸಾಧನೆ ಮಾಡಲು ಸತತವಾದ ಪ್ರಯತ್ನ ಬೇಕು. ಜೊತೆಗೆ ತಾಳ್ಮೆ ಬೇಕು. ಈ ನಿಟ್ಟಿನಲ್ಲಿ ಮುಂಡರಗಿ ಪಟ್ಟಣದ ಸಾಗರ್ ಎನ್ನುವ ಯುವಕನ ಸಾಧನೆಯ ಹಾದಿಯ ಕಥೆ ಮಾತ್ರ ಪ್ರತಿಯೊಬ್ಬ ಯುವಕರಿಗೆ ಸ್ಪೂರ್ತಿದಾಯಕ.

ಇತ್ತಿಚೆಗೆ ಪ್ರಕಟವಾದ ಪಿಎಸ್ಐ ಪರೀಕ್ಷೆ ಫಲಿತಾಂಶದಲ್ಲಿ ಸಾಗರ್ ರಾಜ್ಯಕ್ಕೆ 173ನೇ ರ‌್ಯಾಂಕ್ ಪಡೆಯುವ ಮೂಲಕ ಬಡತನದಲ್ಲಿ ಅರಳಿದ ಗುಲಾಬಿಯಾಗಿದ್ದಾನೆ.

ಕನ್ನಡ ಮಾದ್ಯಮದಲ್ಲಿ ಓದು

ಸಾಗರ್, ಕನ್ನಡ ಮಾಧ್ಯಮದಲ್ಲಿಯೇ ಪ್ರಾಥಮಿಕ, ಪ್ರೌಢ, ಹಾಗೂ ಪದವಿ ಶಿಕ್ಷಣವನ್ನು ಪಡೆದಿದ್ದಾನೆ. ಯಾವುದೇ ಕೋಚಿಂಗ್ ಇಲ್ಲದೆ ಸತತ ಪರಿಶ್ರಮದಿಂದ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿರುವುದು ವಿಶೇಷವೇ ಸರಿ.

ಆನ್ ಲೈನ್ ಶಿಕ್ಷಣವೇ ಆಧಾರ

ಆನ್ ಲೈನ್ ಮೂಲಕ ಪಠ್ಯ ಪುಸ್ತಕ ಹಾಗೂ ಹಳೆ ಪ್ರಶ್ನೆಪತ್ರಿಕೆಯನ್ನು ಮೊಬೈಲ್ ಸಹಾಯದಿಂದ ತಗೆದುಕೊಂಡು ನಿರಂತವಾಗಿ ಅಭ್ಯಾಸಮಾಡಿ ಪಿಎಸ್ಐ ಹುದ್ದೆಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ. ಇವರು ಮೊದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲ ತಿಂಗಳ ಕಾರ್ಯ ನಿರ್ವಹಿಸಿದ್ದಾರೆ.

ಅಗರಬತ್ತಿ ಮಾರಾಟವೇ ಕುಟುಂಬಕ್ಕೆ ಆಧಾರ

ಸಾಗರ್ ಕುಟುಂಬಕ್ಕೆ ಅಗರಬತ್ತಿ ವ್ಯಾಪಾರವೇ ಮೂಲ ವೃತ್ತಿ. ಕುಟುಂಬದ ಜೊತೆಗೆ ತಾನೂ ಕೂಡ ಅಗರಬತ್ತಿ ತಯಾರಿಕೆಯ ಕಾಯಕದಲ್ಲಿ ಸಾಗರ್ ಕೈ ಜೋಡಿಸುತ್ತಿದ್ದ. ಬಡತನದ ಬೇಗೆಯಲ್ಲಿಯೇ ಛಲ ಬಿಡದೇ ಓದಿದ ಪರಿಣಾಮ ಈಗ ಪಿಎಸ್ಐ ಆಗಿ ಆಯ್ಕೆಯಾಗುವಂತೆ ಮಾಡಿತು. ಈ ಮೂಲಕ ಮುಂಡರಗಿ ಜನರಿಂದ ಸಾಗರ್ ಸೈ ಎನಿಸಿಕೊಂಡಿದ್ದಾರೆ.

ತಂದೆ ವಾಸುಜಿ ತಾಯಿ ಲಕ್ಷ್ಮೀ ಅವರು ಕೂಡ ಮಗನ ಬಗ್ಗೆ ಅಪಾರ ಕನಸು ಕಟ್ಟಿಕೊಂಡಿದ್ದರು. ಆದರೆ ಈಗ ಮಗನ ಸಾಧನೆಯಿಂದ ತಂದೆ-ತಾಯಿ, ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಸಾಗರ ಸಾಧನೆಯ ಹಾದಿ ಹೀಗೆ ಸಾಗಲಿ ಎಂಬುದು ಉತ್ತರಪ್ರಭದ ಹಾರೈಕೆ.

Leave a Reply

Your email address will not be published. Required fields are marked *

You May Also Like

ಭಾನುವಾರ ಮದುವೆಗೆ ಅವಕಾಶ ರಾಜ್ಯ ಸರ್ಕಾರದ ಆದೇಶ

ರಾಜ್ಯಾಧ್ಯಂತ ಪ್ರತಿ ಭಾನುವಾರದಂದು ಬೆಳಿಗ್ಗೆ 7ಗಂಟೆಯಿಂದ ಸಂಜೆಯ 7 ಗಂಟೆಯವರೆಗೆ ಕರ್ಪ್ಯೂ ಜಾರಿ ಮಾಡಿದ್ದರಿಂದಾಗಿ, ಮದುವೆ ಸಮಾರಂಭ ಕೂಡ ನಡೆಸಬಾರದಾ ಎಂಬ ಗೊಂದಲಕ್ಕೆ ರಾಜ್ಯದ ಜನತೆ ಒಳಗಾಗಿದ್ದರು. ಇದೀಗ ಮದುವೆ ಸಮಾರಂಭವನ್ನು ನಡೆಸುವುದಕ್ಕೆ ಅವಕಾಶ ನೀಡಿ, ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.

ಇಂದು 69 ಕೊರೋನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?

ಇಂದು ರಾಜ್ಯಲ್ಲಿ ಒಟ್ಟು 69 ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಈ ಕುರಿತು ಆರೋಗ್ಯ ಇಲಾಖೆ ಹೆಲ್ತ್ ಬುಲಿಟಿನ್ ಬಿಡುಗಡೆ ಮಾಡಿದೆ.

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ರಾಜ್ಯಕ್ಕೆ ಎಷ್ಟನೇ ಸ್ಥಾನ ಗೊತ್ತಾ..?

ನಿನ್ನೆ ಮಧ್ಯಾಹ್ನದವರೆಗೂ ಕರ್ನಾಟಕ ರಾಜ್ಯವು 12ನೇ ಸ್ಥಾನದಲ್ಲಿತ್ತು, ಆದರೆ, ಪ್ರತಿ ದಿನ ರಾಜ್ಯದಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿರುವುದರಿಂದಾಗಿ ಒಂದು ಸ್ಥಾನ ಮೇಲೆ ಏರಿದೆ.

ಅಪಾಯ ಮಟ್ಟ ಹರಿಯುತ್ತಿರುವ ಭೀಮಾ….ಜನರ ರಕ್ಷಣೆಗೆ ಬಂದ ಸೇನೆ!

ಕಲಬುರಗಿ : ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯ ಜನರ ಬದುಕು ಮೂರಾಬಟ್ಟೆಯಾಗಿದೆ. ಈ ನಿಟ್ಟಿನಲ್ಲಿ ರಕ್ಷಣಾ ಕಾರ್ಯಕ್ಕೆ ಸೇನೆ ನಿಯೋಜನೆ ಮಾಡಲಾಗಿದೆ.