ಮುಂಬಯಿ : ಭಾರತ ತಂಡದ ಪ್ರತಿಭಾವಂತೆ ಹಾಗೂ ಸ್ಟೈಲಿಷ್ಟ್ ಆಟಗಾರ್ತಿ ಸ್ಮೃತಿ ಮಂಧನಾ ಅವರು ಶನಿವಾರ ತಮ್ಮ 24ನೇ ಹುಟ್ಟು ಹಬ್ಬದ ಸಂಭ್ರಮ ಆಚರಿಸಿಕೊಂಡಿದ್ದಾರೆ. ಅವರಿಗೆ ಖ್ಯಾತ ಆಟಗಾರರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ನಿಮ್ಮ ಅದ್ಭುತ ಪ್ರದರ್ಶನ ಹೀಗೆ ಮುಂದುವರೆಸಿ ಭಾರತದ ತ್ರಿವರ್ಣ ಧ್ವಜವನ್ನು ಮೇಲೆಕ್ಕೆತ್ತಿರಿ. ಟೀಮ್ ಇಂಡಿಯಾದಲ್ಲಿ ಎಡಗೈ ಆಟಗಾರರು ಪ್ರತಿಭಾವಂತರೆಂಬ ಖ್ಯಾತಿ ಹೊಂದಿದ್ದಾರೆ. ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿರಿ ಎಂದು ಬಹುತೇಕರು ಶುಭ ಹಾರೈಸಿದ್ದಾರೆ.

ಇಲ್ಲಿ ಟೀಮ್ ಇಂಡಿಯಾ ಮಾಜಿ ಆಲ್ರೌಂಡ್ ಯುವರಾಜ್ ಸಿಂಗ್ ಕೂಡ ಎಡಗೈ ದಾಂಡಿಗ. ಹಾಗೆಯೇ ಸ್ಪೋಟಕ ಇನಿಂಗ್ಸ್ ಮೂಲಕ ಮನೆಮಾತಾಗಿರುವ ಸೃತಿ ಮಂಧನಾ ಸಹ ಲೆಫ್ಟ್ ಬ್ಯಾಟ್ಸ್ವುಮೆನ್. ಹೀಗಾಗಿ ಯುವಿಯ ಟ್ವೀಟ್ ಎಲ್ಲರ ಗಮನ ಸೆಳೆಯಿತು.

ಹಾಗೆಯೇ ಸೃತಿ ಕೂಡ ಯುವರಾಜ್ ಸಿಂಗ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಸಿಕ್ಸರ್ ಸಿಂಗ್ ಅವರ ಆಟವೇ ನನಗೆ ಸ್ಫೂರ್ತಿ ಎಂದಿದ್ದರು.

24ರ ಹರೆಯದ ಸೃತಿ ಮಂಧನಾ ಟೀಮ್ ಇಂಡಿಯಾ ಪರ 51 ಏಕದಿನ ಪಂದ್ಯಗಳಿಂದ 2025 ರನ್ಗಳಿಸಿದ್ದಾರೆ. ಇದರಲ್ಲಿ 17 ಅರ್ಧಶತಕಗಳು ಹಾಗೂ 4 ಶತಕಗಳು ಮೂಡಿ ಬಂದಿವೆ.

2 ಟೆಸ್ಟ್ ಪಂದ್ಯಗಳನ್ನಾಡಿರುವ ಸೃತಿ, 1 ಅರ್ಧಶತಕದೊಂದಿಗೆ 81 ರನ್ಗಳಿಸಿದ್ದಾರೆ. ಇನ್ನು 75 ಟಿ20 ಪಂದ್ಯಗಳಿಂದ 1716 ರನ್ ಕಲೆಹಾಕಿರುವ ಟೀಮ್ ಇಂಡಿಯಾ ಆರಂಭಿಕ ಆಟಗಾರ್ತಿ ಸ್ಪೋಟಕ 12 ಅರ್ಧಶತಕಗಳನ್ನು ಬಾರಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮಗುವನ್ನು ಕದ್ದೋಯ್ದ ಕೋತಿಗಳು

ತಮಿಳುನಾಡಿನ ತನ್ನ ಮನೆಯಯೊಂದರಲ್ಲಿ ಕೋತಿಗಳ ಗುಂಪೊAದು ತನ್ನ ಮಗುವನ್ನು ಕದ್ದೋಯ್ದ ಕೋತಿಗಳು ಸಾಯಿಸಿರುವ ಘಟನೆ ನಡೆದಿದೆ ಎನ್ನಲಾಗಿದೆ. ಶನಿವಾರ ಈ ಘಟನೆ ನಡೆದಿದ್ದು ಮಗುವಿನ ತಾಯಿ ಹೇಳುವ ಪ್ರಕಾರ, ಕೋತಿಗಳು ಮನೆಯ ಛಾವಣಿಯ ಹೆಂಚುಗಳನ್ನು ತೆಗೆದು, ಮಲಗಿದ್ದ ಶಿಶುಗಳನ್ನು ಕರೆದುಕೊಂಡು ಹೋದವು ಅಂತ ತಿಳಿಸಿದ್ದಾರೆ.

ಅಬುದಾಬಿಯಿಂದ ರಾಜ್ಯಕ್ಕೆ ಬಂದ 179 ಜನ – ಬೆಂಗಳೂರಿಗರಲ್ಲಿ ಆತಂಕ!

ಕೊರೊನಾ ಲಾಕ್ ಡೌನ್ ನಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುದಾಬಿಯಿಂದ 179 ಜನ ಭಾರತೀಯರು ಬೆಂಗಳೂರಿಗೆ ಬಂದಿದ್ದಾರೆ.

‘ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ, ಶ್ರೀರಾಮ ಭಾರತೀಯನಲ್ಲ, ನೇಪಾಳಿ’ : ನೇಪಾಳ ಪ್ರಧಾನಿ ಕಿಡಿ

‘ನಿಜವಾದ ಅಯೋಧ್ಯೆ ಇರುವುದು ಭಾರತದಲ್ಲಲ್ಲ ನೇಪಾಳದಲ್ಲಿ. ದೇವರು ರಾಮ ಭಾರತೀಯನಲ್ಲ, ನೇಪಾಳಿ’ ಎಂದು ನೇಪಾಳ ಪ್ರಧಾನಿ ಪ್ರತಿಪಾದಿಸಿದ್ದಾರೆ.

ಸ್ವಪ್ನ ಸುಂದರಿ ಸಾಗಿಸಿದ್ದು 30 ಅಲ್ಲ, 180 ಕೆಜಿ ಚಿನ್ನವಂತೆ!

ಯುಎಇಯಿಂದ 30 ಕೆಜಿ ಚಿನ್ನ ಸಾಗಿಸಿದ ಆರೋಪ ಎದುರಿಸುತ್ತಿರುವ ಸ್ವಪ್ನ ಟೀಮ್ ಇದೇ ಮಾದರಿಯಲ್ಲಿ ಒಟ್ಟು 180 ಕೆಜಿ ಚಿನ್ನ ಸಾಗಿಸಿದೆ ಎನ್ನಲಾಗಿದೆ.ಯುಎಇಯಿಂದ ಕೇರಳಕ್ಕೆ 30 ಕೆಜಿ ಚಿನ್ನವನ್ನು