ಪುಣೆಯಲ್ಲಿ ಶಂಕರ್ ಕುರಾಡೆ ಎನ್ನುವಾತ 2.80 ಲಕ್ಷ ರೂ. ಮೌಲ್ಯದ ಚಿನ್ನದ ಮಾಸ್ಕ್ ಧರಿಸಿದ್ದನ್ನು ನೋಡಿ ಪ್ರೇರಣೆ ಪಡೆದ ಒರಿಸ್ಸಾದ ಚಿನ್ನ ಪ್ರಿಯನೊಬ್ಬ 3.6 ಲಕ್ಷ ರೂ ಮಾಸ್ಕ್ ಮಾಡಿಸಿಕೊಂಡಿದ್ದಾನೆ.

ಕಟಕ್( ಒರಿಸ್ಸಾ): ಪುಣೆಯ ಶಂಕರ್ ಕರಾಡೆಯ ಚಿನ್ನದ ಮಾಸ್ಕ್ ನಿಂದ ಸ್ಪೂರ್ತಿ ಪಡೆದ ಕಟಕ್ ನಗರದ ಉದ್ಯಮಿ ಅಲೋಕ್ ಮೊಹಂತಿ ಎಂಬಾತ 3.5 ಲಕ್ಷ ರೂ ಮೌಲ್ಯದ ಚಿನ್ನದ ಮಾಸ್ಕ್ ಮಾಡಿಸಿಕೊಂಡು, ಅದನ್ನು ಧರಿಸಿ ಮೆರೆಯುತ್ತಿದ್ದಾನೆ.

 ಆನ್ ಲೈನ್ ಆರ್ಡರ್ ಕೊಟ್ಟು ಮುಂಬೈನಿಂದ ಇದನ್ನು ತರಿಸಿಕೊಂಡಿದ್ದಾನಂತೆ! ಅಂದರೆ ಚಿನ್ನದ ಮಾಸ್ಕ್ ತಯಾರಿಸುವುದು ಈಗ ಲಾಭದಾಯಕ ವ್ಯಾಪಾರ ಆಗಿದೆ ಎಂದಾಯಿತು.

‘ಮೊದಲಿನಿಂದಲೂ ನನಗೆ ಬಂಗಾರ ಎಂದರೆ ಪ್ರೀತಿ. ಜನ ನನ್ನನ್ನು ಬಂಗಾರದ ಮನುಷ್ಯ ಎಂತಲೇ ಕರೆಯುತ್ತಾರೆ. ಪುಣೆ ವ್ಯಕ್ತಿಯ ಮಾಸ್ಕ್ ಬಗ್ಗೆ ಓದಿದಾಗ ನನಗೂ ಆಸೆಯಾಯಿತು’ ಎಂದು ಮೊಹಂತಿ ಹೇಳಿದ್ದಾನೆ.

ಎನ್-95 ಮಾಸ್ಕಿಗೆ ಚಿನ್ನದ ಎಳೆಗಳನ್ನು ಪೋಣಿಸಿ ಈ ಮಾಸ್ಕ್ ಮಾಡಲಾಗಿದೆಯಂತೆ. ಈ ಬಂಗಾರದ ಮಾಸ್ಕಿನ ಟ್ರೆಂಡ್ ಅನ್ನು ತೆವಲು ಅನ್ನುವುದೋ, ಮೂರ್ಖತನ ಎಂದು ಕರೆಯುವುದೋ?

Leave a Reply

Your email address will not be published. Required fields are marked *

You May Also Like

ಜಗತ್ತಿನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 2.33 ಲಕ್ಷ

ಲಂಡನ್ : ಜಗತ್ತಿನಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಈ ಮಹಾಮಾರಿಗೆ 2.33 ಲಕ್ಷ ಜನ ಬಲಿಯಾಗಿದ್ದಾರೆ.…

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ.

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…

ಬಿಟ್ ಕಾಯಿನ್ ಸದ್ದು: ಬಿಟ್ ಕಾಯಿನ್ ಎಂದರೇನು ? ಕ್ರಿಪ್ಟೋಕರೆನ್ಸಿಯಲ್ಲಿ ಹಲವು ವಿಧ..!

ಜನಪ್ರಿಯವಾಗಿದೆ. ಹಾಗಾದ್ರೆ ಏನಿದು ಕ್ರಿಪ್ಟೋ ಕರೆನ್ಸಿ? ಸಾಮಾನ್ಯ ಹಣಕ್ಕೂ ಇದಕ್ಕೂ ಏನು ವ್ಯತ್ಯಾಸ..? ಸಾಮಾನ್ಯ ನೋಟಿನ ಬದಲು ಕ್ರಿಪ್ಟೋ ಕರೆನ್ಸಿ ಬಳಕೆ ಮಾಡಿದರೆ ಲಾಭ ಏನು..? ಈ ಹಣಕಾಸು ವಹಿವಾಟು ಸುರಕ್ಷಿತವೇ..? ಸಾಮಾನ್ಯ ಹಣಕಾಸು ವ್ಯವಹಾರ, ಬ್ಯಾಂಕಿoಗ್ ವ್ಯವಹಾರಕ್ಕಿಂತಾ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ..? ಇದರ ಸಂಕ್ಷೀಪ್ತ ಮಾಹಿತಿ ನಿಮಗಾಗಿ

ಕೋವಿಡ್ ನಿಂದ ಮೃತ ಪಟ್ಟ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ಪರಿಹಾರ

ಲಖನೌ: ಕೋವಿಡ್-19 ವೇಳೆ ಕರ್ತವ್ಯ ನಿಷ್ಠೆ ಮೆರೆದು ಪ್ರಾಣ ಕಳೆದುಕೊಂಡ ಪತ್ರಕರ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.