ಪುಣೆಯಲ್ಲಿ ಶಂಕರ್ ಕುರಾಡೆ ಎನ್ನುವಾತ 2.80 ಲಕ್ಷ ರೂ. ಮೌಲ್ಯದ ಚಿನ್ನದ ಮಾಸ್ಕ್ ಧರಿಸಿದ್ದನ್ನು ನೋಡಿ ಪ್ರೇರಣೆ ಪಡೆದ ಒರಿಸ್ಸಾದ ಚಿನ್ನ ಪ್ರಿಯನೊಬ್ಬ 3.6 ಲಕ್ಷ ರೂ ಮಾಸ್ಕ್ ಮಾಡಿಸಿಕೊಂಡಿದ್ದಾನೆ.

ಕಟಕ್( ಒರಿಸ್ಸಾ): ಪುಣೆಯ ಶಂಕರ್ ಕರಾಡೆಯ ಚಿನ್ನದ ಮಾಸ್ಕ್ ನಿಂದ ಸ್ಪೂರ್ತಿ ಪಡೆದ ಕಟಕ್ ನಗರದ ಉದ್ಯಮಿ ಅಲೋಕ್ ಮೊಹಂತಿ ಎಂಬಾತ 3.5 ಲಕ್ಷ ರೂ ಮೌಲ್ಯದ ಚಿನ್ನದ ಮಾಸ್ಕ್ ಮಾಡಿಸಿಕೊಂಡು, ಅದನ್ನು ಧರಿಸಿ ಮೆರೆಯುತ್ತಿದ್ದಾನೆ.

 ಆನ್ ಲೈನ್ ಆರ್ಡರ್ ಕೊಟ್ಟು ಮುಂಬೈನಿಂದ ಇದನ್ನು ತರಿಸಿಕೊಂಡಿದ್ದಾನಂತೆ! ಅಂದರೆ ಚಿನ್ನದ ಮಾಸ್ಕ್ ತಯಾರಿಸುವುದು ಈಗ ಲಾಭದಾಯಕ ವ್ಯಾಪಾರ ಆಗಿದೆ ಎಂದಾಯಿತು.

‘ಮೊದಲಿನಿಂದಲೂ ನನಗೆ ಬಂಗಾರ ಎಂದರೆ ಪ್ರೀತಿ. ಜನ ನನ್ನನ್ನು ಬಂಗಾರದ ಮನುಷ್ಯ ಎಂತಲೇ ಕರೆಯುತ್ತಾರೆ. ಪುಣೆ ವ್ಯಕ್ತಿಯ ಮಾಸ್ಕ್ ಬಗ್ಗೆ ಓದಿದಾಗ ನನಗೂ ಆಸೆಯಾಯಿತು’ ಎಂದು ಮೊಹಂತಿ ಹೇಳಿದ್ದಾನೆ.

ಎನ್-95 ಮಾಸ್ಕಿಗೆ ಚಿನ್ನದ ಎಳೆಗಳನ್ನು ಪೋಣಿಸಿ ಈ ಮಾಸ್ಕ್ ಮಾಡಲಾಗಿದೆಯಂತೆ. ಈ ಬಂಗಾರದ ಮಾಸ್ಕಿನ ಟ್ರೆಂಡ್ ಅನ್ನು ತೆವಲು ಅನ್ನುವುದೋ, ಮೂರ್ಖತನ ಎಂದು ಕರೆಯುವುದೋ?

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಕೊರೋನಾ ಭೀತಿ..!

ಗದಗ ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲೂ ಕೊರೋನಾ ಭೀತಿ..! ಗದಗ: ಪಕ್ಕದ ಬಾಗಲಕೋಟೆ ಜಿಲ್ಲೆಯಿಂದ ಗದಗ ಜಿಲ್ಲೆಯ…

ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರನ್ನು ಕೆರಳಿಸಿದ ಮಹಾರಾಷ್ಟ್ರ ಸಚಿವ!

ಔರಂಗಾಬಾದ್ : ಗಡಿ ಹಾಗೂ ಭಾಷೆಯ ವಿಷಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದರ ಮೂಲಕ ಮಹಾರಾಷ್ಟ್ರದ ಸಚಿವ ಜಯಂತ್ ಪಾಟೀಲ್, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಪ್ರಧಾನಿ ಕಚೇರಿಯ ಆದೇಶಕ್ಕೂ ಇಲ್ಲಿ ಸಿಗುತ್ತಿಲ್ಲ ಗೌರವ!

ಚಿತ್ರದುರ್ಗ : ರಾಜ್ಯ ಸೇರಿದಂತೆ ದೇಶದಲ್ಲಿನ ಇನ್ನೂ ಹಲವು ಗ್ರಾಮಗಳು ಅಭಿವೃದ್ಧಿಯಿಂದ ಹಿಂದೆ ಉಳಿದಿವೆ. ಕೆಲವು ಗ್ರಾಮಗಳಲ್ಲಿನ ಪರಿಸ್ಥಿತಿಗಳಂತೂ ಹೇಳತೀರದಾಗಿದೆ.

ಸಿಎಂ ಗೆಹ್ಲೋಟ್ V/s ಡಿಸಿಎಂ ಪೈಲಟ್: ರಾಜಸ್ತಾನ ಸರ್ಕಾರ ಕೆಡವಲು ಆಪರೇಷನ್ ಕಮಲ

ರಾಜಸ್ತಾನದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ ದೊಡ್ಡ ಆಫರ್ ನೀಡಿತ್ತು ಎಂದು 20 ಕಾಂಗ್ರೆಸ್ ಶಾಸಕರು ಆರೋಪಿಸಿದ್ದಾರೆ. ಡಿಸಿಎಂ ಸಚೀನ್ ಪೈಲಟ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.