ಬೆಳಗಾವಿಯ ಈ ಮನೆ ರವಿ ಹೊಂಗಲ್ ಅವರ ಫೋಟೊಗ್ರಫಿ ಪ್ರೀತಿಗೆ ಸಾಕ್ಷಿಯಾಗಿದೆ. ಈ ಮನೆ ಫೋಟೊ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಕ್ಯಾಮೆರಾ ಬಗೆಗಿನ ತಮ್ಮ ಒಲವನ್ನು ಈ ರೀತಿ ಸೃಜನಾತ್ಮಕ ಶೈಲಿಯಲ್ಲಿ ವ್ಯಕ್ತಪಡಿಸಿದ ಹೊಂಗಲ್ ಕ್ಯಾಮೆರಾ ಪ್ರೀತಿಯನ್ನು ಸಾವಿರಾರು ಜನ ಪ್ರಶಂಸಿದ್ದಾರೆ.

ಬೆಳಗಾವಿ: ಈ ಮನೆ ನೋಡಿ, ಥೇಟು ಕ್ಯಾಮೆರಾ ತರಹ ಇದೆ.  ಮನೆ ಹೊರಭಾಗ ಡಿಟ್ಟೋ ಕ್ಯಾಮೆರಾ. ಕ್ಯಾಮೆರಾದ ಭಾಗಗಳನ್ನು ನೀವಿಲ್ಲಿ ನೋಡಬಹುದು. ಲೆನ್ಸ್, ಲೆನ್ಸ್ ಹುಡ್, ಫ್ಲ್ಯಾಶ್, ಫಿಲ್ಮ್  ರೋಲ್ ಇತ್ಯಾದಿ. ಮನೆಯ ಒಳಗೂ ಕ್ಯಾಮೆರಾ, ಫೋಟೊಗ್ರಫಿಗೆ ಸಂಬಂಧಿಸಿದ ಸಂಗತಿಗಳನ್ನು ನಿರ್ಮಿಸಲಾಗಿದೆ. ಈ ಮನೆಯ ಹೆಸರೇ ‘ಕ್ಲಿಕ್’.

ಬೆಳಗಾವಿಯ ಫೋಟೊಗ್ರಾಫರ್ ರವಿ ಹೊಂಗಲ್ ಅವರ ಫೋಟೊಗ್ರಫಿ ಪ್ರೀತಿಗೆ ಈ ಅನನ್ಯ ಮನೆ ಸಾಕ್ಷಿಯಾಗಿದೆ. ಈ ಮನೆ ಫೋಟೊ ಈಗ ವೈರಲ್ ಆಗಿದ್ದು ವಿಶ್ವದ ವಿವಿಧ ಕಡೆಯ ಜನರು ಮೆಚ್ಚಿಕೊಂಡಿದ್ದಾರೆ. ಒಂದು ವೃತ್ತಿ, ಹವ್ಯಾಸವನ್ನು ಗಾಢವಾಗಿ ಪ್ರೀತಿಸಿದಾಗ ಅದು ಬದುಕಿನ ಭಾಗವೇ ಆಗಿಬಿಡುತ್ತದೆ. ಕ್ಯಾಮೆರಾ ರವಿ ಹೊಂಗಲ್ ಕುಟುಂಬದ ಸದಸ್ಯನೇ ಆಗಿಬಿಟ್ಟಿದೆ.

ಅಂದಂತೆ ಹೊಂಗಲ್ ಅವರು ತಮ್ಮ ಮೂವರು ಮಕ್ಕಳಿಗೆ ಕ್ಯಾಮೆರಾ ಕಂಪನಿಗಳ ಹೆಸರನ್ನೇ ಇಟ್ಟಿದ್ದಾರೆ: ನಿಕಾನ್, ಕ್ಯಾನಾನ್, ಎಪ್ಸಾನ್.

‘ನನಗೆ ಫೋಟೊಗ್ರಫಿ ಎಂದರೆ ಹವ್ಯಾಸವಷ್ಟೇ ಅಲ್ಲ, ಅದು ಒಂದು ರೀತಿಯಲ್ಲಿ ನನ್ನ ಜೀವ, ಅಂತರಾಳ. ಫೋಟೊಗ್ರಫಿ, ಕ್ಯಾಮೆರಾ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲದರ ಜೊತೆಗೂ ನನಗೆ ಭಾವನಾತ್ಮಕ ಸಂಬಂಧವಿದೆ.’

  -ರವಿ ಹೊಂಗಲ್

                                        

‘ಮನೆ ಕಟ್ಟಿಸಿದರೆ ಅದು ಫೋಟೊಗ್ರಫಿಗೆ ಸಲ್ಲಿಸುವ ಕೃತಜ್ಞತೆ ಆಗುವಂತಿರಬೇಕು ಅಂದುಕೊಂಡಿದ್ದೆ. ಮನೆ ಹೀಗಿರಬೇಕು ಎಂಬ ಕನಸಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಐಡಿಯಾ ಇರಲಿಲ್ಲ. ಬೆಳಗಾವಿಯ ‘ಕೀ ಕನ್ಸೆಪ್ಟ್ ಇಂಟಿರೀಯರ್ಸ್ ಕಂಪನಿಯವರು ನನ್ನ  ಆಶಯಗಳನ್ನು ಮೂರ್ತರೂಪಕ್ಕೆ ಇಳಿಸುವಲ್ಲಿ ನೆರವಾಗಿದ್ದಾರೆ’ ಎನ್ನುತ್ತಾರೆ ಹೊಂಗಲ್.

Leave a Reply

Your email address will not be published. Required fields are marked *

You May Also Like

ಅಮ್ಮನ ಕೂಗು ನಾವೆಷ್ಟು ಜವಾಬ್ದಾರರು..?

ಕೊರೋನಾ ಎಲ್ಲಡೆ ತನ್ನ ಕರಿನೆರಳು ಚಾಚುತ್ತಾ ಹೊರಟಿದೆ . ಈ ನಡುವೆಯೂ ಇಲ್ಲಿಯವರೆಗೂ ಪತ್ತೆಯೇ ಇಲ್ಲದ ವೈರಸ್ ಗಳು ದೇಶ ಎಲ್ಲಡೆ ಪಾದಾರ್ಪಣೆ ಮಾಡುತ್ತಿವೆ. ವಿಪರ್ಯಾಸವೆಂದರೆ ನಮ್ಮ ಜನತೆ ಅನುಭವವಾಗದೆ ಎಚ್ಚೆತ್ತುಕೊಳ್ಳೆವು ಎನ್ನುವ ಹಾಗೆ ವರ್ತಿಸುತ್ತಿರುವುದು ವಿಷಾಧನಿಯ. ದೇಶದ ಕಂಟಕಕ್ಕೆ ಕಾರಣಗಳ ನಿಡುತ್ತಾ, ಸರ್ಕಾರದ ನಿಯಮಗಳ ವಿರುದ್ಧವಾಗಿ ಹೊರಟ ಜನರಿಗೆ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ದಂಪತಿಗಳು ಮತ್ತು ಅನ್ ನವನ್ ಕ್ರಿಯೇಶನ್ ತಂಡದ ಸಂಯೋಗದಲ್ಲಿ ಧರ್ಮಸ್ಥಳದ

ತಬ್ಲಿಘಿ ಪರ ಮಾತನಾಡಿದ ಐಎಎಸ್ ಅಧಿಕಾರಿಗೆ ಸರ್ಕಾರ ಏನು ಹೇಳಿತು?

ತಬ್ಲಿಘಿ ಪರ ಮಾತನಾಡಿದ ಐಎಎಸ್ ಅಧಿಕಾರಿಗೆ ಸರ್ಕಾರ ಏನು ಹೇಳಿತು? ಬೆಂಗಳೂರು : ತಬ್ಲಿಘಿ ಪರ…

ಹೆಡಗಿಬಾಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ 50 ಬಡ ಕುಟಂಬಗಳಿಗೆ ಆಹಾರ ಕಿಟ್ ವಿತರಣೆ

ಒಂದು ತಿಂಗಳ ಮಟ್ಟಿಗೆ ಕುಟುಂಬಗಳಿಗೆ ತಗಲುವ ಆಹಾರ ಧಾನ್ಯದ ಕಿಟ್ ಗಳನ್ನೂ ಮಸ್ಕಿಯ ಸೇಂಟ್ ಜಾನ್ಸ್ ಚರ್ಚ್ ಶಾಲೆಯ ಆವರಣದಲ್ಲಿ ಹಿಂದು, ಮುಸ್ಲಿಂ ಕ್ರೈಸ್ತ ಹಾಗೆಯೇ ವಿವಿಧ ಧರ್ಮದ ಮುಖಂಡರ ನೇತೃತ್ವದಲ್ಲಿ ವಿತರಿಸಲಾಯಿತು.

ಜಕ್ಕಲಿಯಲ್ಲಿ ಹೀಗೊಂದು ವಿಶಿಷ್ಟ ಹೋಳಿ ಹುಣ್ಣಿಮೆ ಆಚರಣೆ

ವಸಂತ ಋತುವಿನ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣುಮೆ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ಹಿಂದೂ ಧರ್ಮದ ಪ್ರಕಾರ ಹೋಳಿ ಒಂದು ಮಹತ್ವಪೂರ್ಣ ಮಹಾಪರ್ವ ಎಂದು ಭಾವಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮಾ.29 ಸೋಮವಾರ ಹೋಳಿ ಹಬ್ಬವನ್ನು ಹಾಗೂ ಕಾಮ ದಹನವನ್ನು ಮಾ.28 ಆಚರಿಸಲಾಗುತ್ತದೆ.