ಗದಗ: ನಮ್ಮ ಜನ ನಮ್ಮ ಕಣ್ಣೆದುರಿಗೆಯೇ ವೆಂಟಿಲೇಟರ್ ಸಮಸ್ಯೆಯಿಂದ ಜೀವ ಕಳೆದುಕೊಳ್ಳವ ಸ್ಥಿತಿ ಬಂದಿರುವುದನ್ನು ಗಮನಿಸಿ ಸಾಲದ ಆಧಾರದ ಮೇಲೆ ಕೊಲ್ಹಾಪುರದ ಡಿ.ವೈ.ಪಾಟೀಲ್ ಟ್ರಸ್ಟ್ 25 ವೆಂಟಿಲೇಟರ್ ಕೊಡಮಾಡುತ್ತಿರುವುದು ಸಂತಸದ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಎಚ್.ಕೆ.ಪಾಟೀಲ್ ಹೇಳಿದರು.
ಅವರು ಈ ಕುರಿತು ಗದಗ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ವೈ,ಪಾಟೀಲ್ ಟ್ರಸ್ಟ್ ನ ಭಂಟಿ ಪಾಟೀಲ ಅವರು ನಮ್ಮ ಮನವಿಗೆ ಸ್ಪಂದಿಸಿ, ಗದಗ ಜಿಲ್ಲೆಗೆ 25 ವೆಂಟಿಲೇಟರ್ ಕಳುಹಿಸಿಕೊಡುವ ಭರವಸೆ ನೀಡಿದ್ದರು. ಇದರಲ್ಲಿ ಈಗಾಗಲೇ 15 ವೆಂಟಿಲೇಟರ್ ತಲುಪಿದ್ದು, ಇನ್ನು ಐದು ವೆಂಟಿಲೇಟರ್ ಸೋಮವಾರದೊಳಗೆ ತಲುಪುವ ಸಾಧ್ಯತೆ ಇದೆ. ಈಗಾಗಲೇ ಬಂದಿರುವ 13 ವೆಂಟಿಲೇಟರ್ ಗಳನ್ನು ಜಿಮ್ಸ್ ಗೆ, 2 ವೆಂಟಿಲೇಟರ್ ಗಳನ್ನು ರೋಣದ ರಾಜೀವ್ ಗಾಂಧಿ ಆಸ್ಪತ್ರೆಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸರ್ಕಾರದ ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಜಿಮ್ಸ್ ಸೇರಿದಂತೆ ಬಹಳಷ್ಟು ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇರುವುದು ಗಮನಿಸುತ್ತಿದ್ದೇವೆ. ಜಿಮ್ಸ್ ನಲ್ಲಿ 10-15 ಬೆಡ್ ಗಳು ಖಾಲಿ ಇವೆ. ಆದರೆ ವೆಂಟಿಲೇಟರ್ ಬೇಡಿಕೆ ಮತ್ತು ಅಗತ್ಯತೆ ಹೆಚ್ಚಿದೆ. ವೆಂಟಿಲೇಟರ್ ಅನಿವಾರ್ಯತೆ ಗಮನಕ್ಕೆ ಬಂದಿದೆ. ಜಿಮ್ಸ್ ನಲ್ಲಿ ಈಗಾಗಲೇ 74 ವೆಂಟಿಲೇಟರ್ ಅಳವಡಿಸಲಾಗಿದ್ದು, ಮೇ.27 ರಂದು 28 ವೆಂಟಿಲೇಟರ್ ಗಾಗಿ ರೋಗಿಗಳು ಹೆಚ್ಚುವರಿಯಾಗಿದ್ದರು. ಮೇ.28 ರಂದು 41 ರೋಗಿಗಳು ವೇಟಿಂಗ್ ಗಾಗಿ ಸರತಿಯಲ್ಲಿದ್ದರು. ಮೇ.29 ರಂದು 40 ಜನ ಹಾಗೂ 30 ರಂದು 42 ಜನ ವೇಟಿಂಗ್ ನಲ್ಲಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್ ಗಾಗಿ ಸರತಿಯಲ್ಲಿ ಕಾಯುವಂತಾಗಿದೆ. ವೆಂಟಿಲೇಟರ್ ಗಾಗಿ ವೇಟಿಂಗ್ ನಲ್ಲಿರುವವರ ಸರತಿ ಬರುವಷ್ಟರಲ್ಲಿ ಅವರ ಜೀವದ ಗತಿ ಏನು? ಈ ಕಾರಣದಿಂದ ನಾನು ವೆಂಟಿಲೇಟರ್ ಗಳ ಬಗ್ಗೆ ಗಂಭೀರ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಹ್ಯಾಂಡ್ ಸಾನಿಟೈಸರ್ ಸ್ಪೋಟವಾಗುವುದು ನಿಜನಾ..?

ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಸ್ವಯಂಪ್ರೇರಿತ ದಹನಕ್ಕೆ ಸಮರ್ಥವಾಗಿರುವುದಿಲ್ಲ ಎಂದು ತಿಳಿದುಬಂದಿದೆ.

ಧ್ವಜಾರೋಹಣ ನೆರವೇರಿಸಿದ ಸಚಿವ ಸಿ.ಸಿ.ಪಾಟೀಲ ನೀಡಿದ ಮಾಹಿತಿ

ಇಂದು ಸ್ವಾಂತಂತ್ರ್ಯ ದಿನಾಚರಣೆ ನಿಮಿತ್ಯ, ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವ…

ಸಂಕನೂರ್ ಅಂದಪ್ಪ ಅವರ ಸಮಾಜ ಸೇವೆ ಇತರರಿಗೂ ಆದರ್ಶ

ನಿಸ್ವಾರ್ಥ ಸಮಾಜ ಸೇವಕರ ಪೈಕಿ ಗಜೇಂದ್ರಗಡದ ಹೆಮ್ಮೆಯ ಸರಳ ಸಜ್ಜನಿಕೆಯ ಯುವಕ ಅಂದಪ್ಪ ಕಳಕಪ್ಪ ಸಂಕನೂರ ಕೂಡ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು. ಶಿಕ್ಷಣ ಪ್ರೇಮಿ ಅಂದಪ್ಪ ಅವರು, ಶ್ರೇಷ್ಠ ವರ್ತಕ ದಿ. ಬಂಗಾರಬಸಪ್ಪ ಸಂಕನೂರ ಅವರ ಮೊಮ್ಮಗನಾಗಿದ್ದು, ಸಂಕನೂರ ಅಂದಪ್ಪ ಎಂದೇ ಚಿರಪರಿಚಿತರು.

ಆನ್‍ ಲೈನ್ ಪರೀಕ್ಷೆಗಳು ಬೇಡ: ಶಿಕ್ಷಣದಲ್ಲಿ ಡಿಜಿಟಲ್ ವಿಭಜನೆ ಬರಬಾರದು

ವಿದ್ಯಾರ್ಥಿಗಳಿಗೆ ಇಂಟರ್ನೆಟ್‍ ಲಭ್ಯತೆ ಇರುವುದಿಲ್ಲ ಮತ್ತು ಅವರು ಆನ್‍ ಲೈನ್‍ ಶಿಕ್ಷಣ/ ಪರೀಕ್ಷೆಗಳಲ್ಲಿ ಭಾಗವಹಿಸುವುದು ಸಾಧ್ಯವಾಗುವುದಿಲ್ಲ ಎಸ್ಎಫ್ಐ ಕೇಂದ್ರ ಸಮಿತಿ ತಿಸ್ಕರಿಸಿದೆ.