ಮಾಸ್ಕೋದ ಸೆಚೆನೆವ್ ವಿವಿಯ ಪ್ರಕಟಣೆ ಆಧರಿಸಿ ಬಂದಿರುವ ವರದಿಗಳ ಪ್ರಕಾರ, ವಿಶ್ವದ ಮೊದಲ ಕೋರೊನಾ ಲಸಿಕೆ ಸದ್ಯದಲ್ಲೇ ಸಿಗಲಿದೆ ಎಂಬ ಭಾವ ಮೂಡುತ್ತದೆ. ಆದರೆ ಅದಿನ್ನೂ ಮೊದಲ ಹಂತವನ್ನು ಪರಿಪೂರ್ಣಗೊಳಿಸಿಲ್ಲ.

ನವನಗರ: ರಷ್ಯಾದ ತಾಸ್ ನ್ಯೂಸ್ ಏಜೆನ್ಸಿಯ ಜುಲೈ 10 ರ ವರದಿ ಪ್ರಕಾರ, ಮೊದಲ ಹಂತದ ಕ್ಲಿನಿಕಲ್ ಟ್ರಯಲ್ಸ್ ಜುಲೈ 15ರಂದು ಮುಗಿಯುತ್ತವೆ. ಎರಡನೇ ಹಂತ ಜುಲ್ಐ 13ಕ್ಕೆ( ಇಂದು ಸೋಮವಾರ) ಆರಂಭಗೊಳ್ಳಲಿದೆ.

ಮಾನವ ಕ್ಲಿನಿಕಲ್ ಟ್ರಯಲ್ ಹಂತ ತಲುಪಿದ ಒಂದು ಲಸಿಕೆ ಕ್ಯಾಂಡಿಡೇಟ್ ಅನ್ನು ಮಾತ್ರ ಸದ್ಯಕ್ಕೆ ಸಂಶೋಧಿಸಲಾಗಿದೆ. ಈ ಲಸಿಕೆಯನ್ನು ಜೂನ್ 18ರಿಂದ ರಷ್ಯಾ ಸೇನೆಯ 18 ಜನರ ಮೇಲೆ ಟ್ರಯಲ್ ಮಾಡುತ್ತ ಬರಲಾಗಿದೆ.

ಲಸಿಕೆಯ ‘ಸುರಕ್ಷತೆ ಮತ್ತು ತಾಳಿಕೆ’ ತಿಳಿಯಲು ನಡೆಸಿರುವ ಮೊದಲ ಹಂತದ ಪ್ರಯೋಗ ಜುಲೈ 15ಕ್ಕೆ ಕೊನೆಗೊಳ್ಳಲಿದೆ. ಇಂದಿನಿಂದ( ಜುಲೈ13) ಎರಡನೆ ಸ್ವಯಂಸೇವಕರ ತಂಡದ ಮೇಲೆ ಲಸಿಕೆ ಪ್ರಯೋಗ ನಡೆಯಲಿದ್ದು ಇದರಲ್ಲಿ ಲಸಿಕೆ ಒದಗಿಸಬಹುದಾದ ನಿರೋಧಕ ಶಕ್ತಿಯನ್ನು ಪರೀಕ್ಷಿಸಲಾಗುತ್ತದೆ.

ಲಸಿಕೆ ಅಭಿವೃದ್ಧಿ ಸಾಮಾನ್ಯವಾಗಿ 3 ಹಂತಗಳನ್ನು ಒಳಗೊಂಡಿರುತ್ತದೆ. ಮೂರನೆ ಹಂತದಲ್ಲಿ ಸಾವಿರಾರು ಜನರ ಮೇಲೆ ಇದರ ಪ್ರಯೋಗ ಮಾಡಲಾಗುತ್ತದೆ. ಕೆಲವೊಮ್ಮೆ ಎರಡನೆ ಹಂತದ ನಂತರವೂ ಲಸಿಕೆಗೆ ಅಪ್ರೂವಲ್ ಸಿಗಬಹುದು. ಮೂರನೆ ಹಂತ ಅಗತ್ಯವೇ ಇಲ್ಲವೇ ಎಂಬುದನ್ನು ರಷ್ಯಾದ ಅಧಿಕೃತ ಮಾನ್ಯತಾ ಸಂಸ್ಥೆ ನಿರ್ಧರಿಸಲಿದೆ.

ಮೂರನೆ ಹಂತ ಬಿಟ್ಟರೂ ಕೂಡ, ಎರಡನೆ ಹಂತದ ನಂತರ ಸಾಕಷ್ಟು ವಿಧಿ ವಿಧಾನಗಳನ್ನು ಪೂರೈಸಲು ಸಾಕಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ ರಷ್ಯಾ ಲಸಿಕೆ ಸದ್ಯಕ್ಕೆ ಸಿಗುವ ಸಾಧ್ಯತೆ ಇಲ್ಲ.

Leave a Reply

Your email address will not be published. Required fields are marked *

You May Also Like

ದೇಶದಲ್ಲಿ ಇಳಿಮುಖ ಕಾಣುತ್ತಿದೆ ಸೋಂಕು!

ನವದೆಹಲಿ : ದೇಶದಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದ್ದು, ಗುಣಮುಖರಾದವರ ಸಂಖ್ಯೆ ಏರಿಕೆಯಾಗುತ್ತಿದೆ. ದೇಶದಲ್ಲಿ ಸದ್ಯ ಸೋಂಕಿತರ ಸಂಖ್ಯೆ 69 ಲಕ್ಷದ ಗಡಿ ದಾಟಿದೆ.

ಒಂದು ಮಶಿನ್ ಹೊತ್ತ ಟ್ರಕ್: ಮಹಾರಾಷ್ಟ್ರದಿಂದ ಕೇರಳ ತಲುಪಲು ಒಂದು ವರ್ಷ!

ಎಷ್ಟೊತ್ತೋ ಬರಾದು? ನಡಕೊಂಡ್ ಬರಾಕ್ ಹತ್ತೀಯನು?’ ಅಂತೀವಲ್ಲ ಹಂಗಾತಿದು. ಕೇರಳದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬೃಹತ್ ಯಂತ್ರವೊಂದನ್ನು ಮಹಾರಾಷ್ಟ್ರದ ನಾಸಿಕ್ ನಲ್ಲಿ ತಯಾರಿಸಲಾಯಿತು. ಅದರ ತೂಕ, ಎತ್ತರ ಮತ್ತು ಅಗಲದ ಕಾರಣದಿಂದ ಅದನ್ನು ಕೇರಳಕ್ಕೆ ಸಾಗಿಸುವುದೇ ಇಂದು ದೊಡ್ಡ ಸವಾಲಾಗಿತ್ತು. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ಸೂಕ್ಷ್ಮ ಭಾಗಗಳನ್ನು ಒಳಗೊಂಡಿದ್ದರಿಂದ ಹುಷಾರಾಗಿ ಮತ್ತು ನಾಜೂಕಾಗಿ ಅದನ್ನು ಸಾಗಿಸಿ ತರಲಾಗಿದೆ.

ಕೊರೊನಾ ಸಂಕಷ್ಟ ಪರಿಹಾರಕ್ಕೆ ಸಿರಿವಂತರ ಮೇಲೆ ತೆರಿಗೆ ವಿಧಿಸಿ

ಬೆಂಗಳೂರು: ಸಾಹಿತಿ, ಕಲಾವಿದರು, ಜನಪರ ಹೋರಾಟಗಾರರು ಕೊರೊನಾ ಸಂಕಷ್ಟ ಪರಿಹಾರಕ್ಕಾಗಿ ಸಿರಿವಂತರ ಮೇಲೆ ಹೆಚ್ಚಿನ ತೆರಿಗೆ…

ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ಚರ್ಚಿಸಿದ ಮೋದಿ – ಯಾವೆಲ್ಲ ಚರ್ಚೆಗಳಾದವು?

ಕಂಟೈನ್ ಮೆಂಟ್ ತಂತ್ರ ಬಲಪಡಿಸುವ ಕುರಿತು ಮತ್ತು ಆರ್ಥಿಕ ಚಟುವಚಿಕೆ ಆರಂಭಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚಿಸಿದರು.