ಕಂಕಣ ಗ್ರಹಣಕ್ಕೂ ಮೊದಲು ಒಟ್ಟು ಸೋಂಕಿನ ಪ್ರಕರಣ 60 ಇದ್ದದ್ದು 23 ದಿನದಲ್ಲಿ 5 ಪಟ್ಟು ಹೆಚ್ಚಿದೆ, ಸಾವಿನ ಪ್ರಮಾಣದಲ್ಲೂ 5 ಪಟ್ಟು ಹೆಚ್ಚಳವಾಗಿದೆ.

ಗದಗ: ಜುಲೈ 13ರ ಸೋಮವಾರದಂದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 322 ತಲುಪಿದೆ. ಈ 322 ರಲ್ಲಿ ಕಳೆದ 23 ದಿನಗಳಲ್ಲಿ 262 ಹೊಸ ಪ್ರಕರಣಗಳು ದಾಖಲಾಗಿವೆ.

ಅಮಾವಾಸ್ಯೆ ಕಂಕಣ ಗ್ರಹಣದ  ಹಿಂದಿನ ದಿನ (ಜೂನ್ 20) ಒಟ್ಟು ಸೋಂಕಿತರ ಸಂಖ್ಯೆ 60 ಇತ್ತು. ಕಂಕಣ ಗ್ರಹಣ ದಿನ ಜೂನ್ 21ರಂದು  ಒಮ್ಮೆಲೇ 18 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನ ಪಯಣ ವೇಗ ಪಡೆದುಕೊಂಡಿತು. ಅಂದಿನಿಂದ ಜುಲೈ13ರ ಸೋಮವಾರದ ಅವಧಿಯಲ್ಲಿ 23 ದಿನದಲ್ಲಿ  262  ಹೊಸ ಪ್ರಕರಣ ದಾಖಲಾಗಿ ಒಟ್ಟು ಸೋಂಕಿತರ ಸಂಖ್ಯೆ 322 ಕ್ಕೆ ಏರಿದೆ.

 ಒಟ್ಟು ಸೋಂಕಿತರುಸಕ್ರಿಯ ಕೇಸ್ಗುಣಮುಖರ ಸಂಖ್ಯೆಸಾವು  
ಜೂನ್ 20   60    19   39   02
ಜುಲೈ 13  322   134   178   10
23 ದಿನದಲ್ಲಿ ಹೆಚ್ಚಳ  262   115   139   08
23 ದಿನದಲ್ಲಿ ಶೇ. ಹೆಚ್ಚಳ   81,3 %    85.82 %   78 %   80 %
ಅಂಕಿ ಸಂಖ್ಯೆಗಳ ವಿವರ

ಜೂನ್ 20ರಂದು 19 ಇದ್ದ ಸಕ್ರಿಯ ಕೇಸುಗಳ ಸಂಖ್ಯೆ ಜುಲೈ 13 ಕ್ಕೆ 134ಕ್ಕೆ ತಲುಪಿದೆ.  ಸಕ್ರಿಯ ಕೇಸುಗಳ ಸಂಖ್ಯೆಯಲ್ಲಿ 23 ದಿನಗಳಲ್ಲಿ 7 ಪಟ್ಟು ನೆಗೆತವಾಗಿದೆ. ಎರಡು ಇದ್ದ ಸಾವಿನ ಸಂಖ್ಯೆ ಸುಮಾರು 5 ಪಟ್ಟು ಹೆಚ್ಚಿ 10 ಕ್ಕೆ ತಲುಪಿದೆ.

                       ಶೇಕಡಾವಾರು ಲೆಕ್ಕದಲ್ಲಿ

ಈ 23 ದಿನಗಳಲ್ಲಿ, (ಜೂನ್ 20-ಜುಲೈ 13)

·       ಒಟ್ಟು ಸೋಂಕಿತರ ಪೈಕಿ ಶೇ. 81.3  ಪ್ರಕರಣ ಈ 23 ದಿನದಲ್ಲಿ ದಾಖಲಾಗಿವೆ.

·       ಒಟ್ಟು ಸಕ್ರಿಯ ಕೇಸುಗಳ ಪೈಕಿ ಶೇ. 85.82 ರಷ್ಟು ಈ 23 ದಿನದಲ್ಲಿ ದಾಖಲಾಗಿವೆ..

·       ಒಟ್ಟು ಸಾವುಗಳ ಪೈಕಿ ಶೇ. 80 ರಷ್ಟು ಈ 23 ದಿನದಲ್ಲಿ ಸಂಭವಿಸಿವೆ.

·       ಒಟ್ಟು ಗುಣಮುಖರ ಪೈಕಿ ಶೇ. 78 ಜನ ಈ 23 ದಿನದಲ್ಲಿ ಗುಣಮುಖರಾಗಿದ್ದಾರೆ

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ ಕೊರೋನಾ ಗ್ರಹಣ-2:ಈ ಕರಾಳ 24 ದಿನದ ಸರಾಸರಿ: ದಿನಕ್ಕೆ 11 ಪಾಸಿಟಿವ್, 3 ದಿನಕ್ಕೊಂದು ಸಾವು

ಮಂಗಳವಾರ ಗದಗ ಜಿಲ್ಲೆಯಲ್ಲಿ 9 ಹೊಸ ಕೋರೊನಾ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 331ಕ್ಕೆ ಏರಿದೆ. ಸಕ್ರಿಯ ಕೇಸ್ಗಳ ಸಂಖ್ಯೆ 143ಕ್ಕೆ ಏರಿದೆ. ಈ ಹಿಂದಿನ 23 ದಿನಗಳಲ್ಲಿ ಸೋಂಕು ಪ್ರಸರಣದ ತೀವ್ರತೆಯನ್ನು ಶೇಕಡಾವಾರು ಲೆಕ್ಕದಲ್ಲಿ ಸೋಮವಾರ ಪ್ರಕಟಿಸಿದ್ದೆವು.

ಯಪ್ಪ..!, ಚಡ್ಡಿ ಜಗಳ ಈಗ ಕೋರ್ಟಿಗೆ ಬಂದೈತ್ಯಂತ..!

ಚಡ್ಯಾರಾ ಆಗಲಿ, ಪ್ಯಾಂಟರಾ ಆಗಲಿ, ಒಳ ಅಂಗ್ಯಾರ ಆಗಲಿ, ಮೇಲಂಗ್ಯಾರ ಆಗಲಿ, ಏನಾರ ಆಗಲಿ ನಾವು ಹ್ಯಾಂಗ್ ಅಳತಿ ಕೊಟ್ಟಿರತಿವಿ ಹಂಗ ಹೊಲದ್ ಕೊಡೊ ಕೆಲ್ಸಾ ಟೈಲರ್ದು. ಆದ್ರ ನಾನು ‘ಚಂದನ್ ಬಟ್ಟಿ ಕೊಟ್ಟೀನಿ. ಆದ್ರ ಟೇಲರ್ ಗಿಡ್ ಗಿಡ್ ಅಂಡರ್ ವೇರ್ ಹೊಲದಾನ. ಅರೆಸ್ಟು ಮಾಡಿ ಒಗಿರಿ ಅವನ್ನ ಅಂತ ಭೋಪಾಲಿನ್ಯಾಗ ಒಬ್ಬಾಂವ ಪೊಲೀಸರ ಠಾಣಾ ಕಟ್ಟಿ ಹತ್ಯಾನ.

ಕೊರೋನಾ ಕಾವ್ಯ-2

ಶಿಕ್ಷಕಿ ಶಿಲ್ಪಾ ಮ್ಯಾಗೇರಿ. ಹವ್ಯಾಸ ಬರಹದ ಮೂಲಕ ಕಾವ್ಯ ಕಟ್ಟುವ ಕಸೂತಿಯನ್ನು ಕರಗತ ಮಾಡಿಕೊಂಡ ಶಿಕ್ಷಕಿ ಶಿಲ್ಪಾ ಎಮ್.ಎ, ಬಿಇಡಿ ಪದವಿ ಪಡೆದಿದ್ದಾರೆ. ಇವರು ಭಾರತಾಂಬೆ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಪಡೆದರು. ಮಾತು ಮೌನದ ನಡುವೆ ಕವನ ಸಂಕಲನ ಹಾಗೂ ಆಕಾಶಕ್ಕೊಂದು ಏಣಿ ಚುಟುಕು ಸಂಕಲನ ಇವರ ಇನ್ನೆರಡು ಸಂಕಲನಗಳು. ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ ನೀಡುವ ರಾಷ್ಟ್ರ ಕೂಟ ಸಾಹಿತ್ಯಶ್ರೀ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ದುಗೂಡದ ಮದ್ಯೆಯೂ ಪರೀಕ್ಷೆ ಬರೆದ ವಿದ್ಯಾರ್ಥಿಗಳು..!: ಪರೀಕ್ಷೆ ಮುಗಿಸಿದ ಸಿದ್ದಪ್ಪ ಮನೆಗೆ ಮರಳಲೇ ಇಲ್ಲ..!

ಮುಂಡರಗಿ: ಗೆಳೆಯರಿಗೆ ಅಚ್ಚುಮೆಚ್ಚಾಗಿದ್ದಾತ. ನಿನ್ನೆಯಷ್ಟೆ ಭವಿಷ್ಯದ ನಿರ್ಣಾಯಕ ಘಟ್ಟದ ಮೊದಲ ಪರೀಕ್ಷೆ ಮುಗಿಸಿದ್ದ. ಸಹಪಾಠಿಗಳೊಂದಿಗೆ ಕೂಡಿ…