ಕಂಕಣ ಗ್ರಹಣಕ್ಕೂ ಮೊದಲು ಒಟ್ಟು ಸೋಂಕಿನ ಪ್ರಕರಣ 60 ಇದ್ದದ್ದು 23 ದಿನದಲ್ಲಿ 5 ಪಟ್ಟು ಹೆಚ್ಚಿದೆ, ಸಾವಿನ ಪ್ರಮಾಣದಲ್ಲೂ 5 ಪಟ್ಟು ಹೆಚ್ಚಳವಾಗಿದೆ.

ಗದಗ: ಜುಲೈ 13ರ ಸೋಮವಾರದಂದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 322 ತಲುಪಿದೆ. ಈ 322 ರಲ್ಲಿ ಕಳೆದ 23 ದಿನಗಳಲ್ಲಿ 262 ಹೊಸ ಪ್ರಕರಣಗಳು ದಾಖಲಾಗಿವೆ.

ಅಮಾವಾಸ್ಯೆ ಕಂಕಣ ಗ್ರಹಣದ  ಹಿಂದಿನ ದಿನ (ಜೂನ್ 20) ಒಟ್ಟು ಸೋಂಕಿತರ ಸಂಖ್ಯೆ 60 ಇತ್ತು. ಕಂಕಣ ಗ್ರಹಣ ದಿನ ಜೂನ್ 21ರಂದು  ಒಮ್ಮೆಲೇ 18 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿನ ಪಯಣ ವೇಗ ಪಡೆದುಕೊಂಡಿತು. ಅಂದಿನಿಂದ ಜುಲೈ13ರ ಸೋಮವಾರದ ಅವಧಿಯಲ್ಲಿ 23 ದಿನದಲ್ಲಿ  262  ಹೊಸ ಪ್ರಕರಣ ದಾಖಲಾಗಿ ಒಟ್ಟು ಸೋಂಕಿತರ ಸಂಖ್ಯೆ 322 ಕ್ಕೆ ಏರಿದೆ.

 ಒಟ್ಟು ಸೋಂಕಿತರುಸಕ್ರಿಯ ಕೇಸ್ಗುಣಮುಖರ ಸಂಖ್ಯೆಸಾವು  
ಜೂನ್ 20   60    19   39   02
ಜುಲೈ 13  322   134   178   10
23 ದಿನದಲ್ಲಿ ಹೆಚ್ಚಳ  262   115   139   08
23 ದಿನದಲ್ಲಿ ಶೇ. ಹೆಚ್ಚಳ   81,3 %    85.82 %   78 %   80 %
ಅಂಕಿ ಸಂಖ್ಯೆಗಳ ವಿವರ

ಜೂನ್ 20ರಂದು 19 ಇದ್ದ ಸಕ್ರಿಯ ಕೇಸುಗಳ ಸಂಖ್ಯೆ ಜುಲೈ 13 ಕ್ಕೆ 134ಕ್ಕೆ ತಲುಪಿದೆ.  ಸಕ್ರಿಯ ಕೇಸುಗಳ ಸಂಖ್ಯೆಯಲ್ಲಿ 23 ದಿನಗಳಲ್ಲಿ 7 ಪಟ್ಟು ನೆಗೆತವಾಗಿದೆ. ಎರಡು ಇದ್ದ ಸಾವಿನ ಸಂಖ್ಯೆ ಸುಮಾರು 5 ಪಟ್ಟು ಹೆಚ್ಚಿ 10 ಕ್ಕೆ ತಲುಪಿದೆ.

                       ಶೇಕಡಾವಾರು ಲೆಕ್ಕದಲ್ಲಿ

ಈ 23 ದಿನಗಳಲ್ಲಿ, (ಜೂನ್ 20-ಜುಲೈ 13)

·       ಒಟ್ಟು ಸೋಂಕಿತರ ಪೈಕಿ ಶೇ. 81.3  ಪ್ರಕರಣ ಈ 23 ದಿನದಲ್ಲಿ ದಾಖಲಾಗಿವೆ.

·       ಒಟ್ಟು ಸಕ್ರಿಯ ಕೇಸುಗಳ ಪೈಕಿ ಶೇ. 85.82 ರಷ್ಟು ಈ 23 ದಿನದಲ್ಲಿ ದಾಖಲಾಗಿವೆ..

·       ಒಟ್ಟು ಸಾವುಗಳ ಪೈಕಿ ಶೇ. 80 ರಷ್ಟು ಈ 23 ದಿನದಲ್ಲಿ ಸಂಭವಿಸಿವೆ.

·       ಒಟ್ಟು ಗುಣಮುಖರ ಪೈಕಿ ಶೇ. 78 ಜನ ಈ 23 ದಿನದಲ್ಲಿ ಗುಣಮುಖರಾಗಿದ್ದಾರೆ

Leave a Reply

Your email address will not be published. Required fields are marked *

You May Also Like

ಲಿಂ, ತೋಂಟದ ಸಿದ್ದಲಿಂಗ ಶ್ರೀ ಆದರ್ಶಗಳ ಮೇರು ಪರ್ವತ – ಡಾ.ಸಿದ್ದರಾಮ ಸ್ವಾಮೀಜಿ ಅಭಿಮತ

ಸಚಿತ್ರ ವರದಿ : ಗುಲಾಬಚಂದ ಜಾಧವ ಗದಗ : ಕ್ರಿಯಾಶೀಲತೆಯ ಮಾತೃ ಹೃದಯಿ ಲಿಂಗೈಕ್ಯ ಡಾ.ತೋಂಟದ…

ಯುವಜನ ಸಂಕಲ್ಪ ಯಾತ್ರೆಗೆ ಅದ್ದೂರಿ ಚಾಲನೆ ಯುವಜನತೆಯಲ್ಲಿ ಉಕ್ಕಿದ ದೇಶ ಭಕ್ತಿ

ಆಲಮಟ್ಟಿ : ರಾಷ್ಟ್ರಧರ್ಮ ದೃಷ್ಟಾರ,ನೈಷ್ಟಿಕ ಬ್ರಮ್ಮಚಾರಿ,ಸಮಾಜಮುಖಿಯ ಅದಮ್ಯ ಚೇತನ, ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪನವರ ಕರ್ಮಭೂಮಿಯಲ್ಲಿಂದು…

ಹೀರೋ ಚಿತ್ರದ ಮತ್ತೊಂದು ಹಾಡು ಪ್ರೇಕ್ಷಕರೆದರು

ರಿಷಬ್ ಶೆಟ್ಟಿ ನಟನೆಯ ಹೀರೋ ಚಿತ್ರದ ಹೀರೋ ಚಿತ್ರದ ಎದೆಯಿಂದ ದೂರವಾಗಿ ವಿಡಿಯೋ ಸಾಂಗ್ ರಿಷಬ್ ಶೆಟ್ಟಿ ಫಿಲ್ಮ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದ್ದು, ಈ ಹಾಡು ಕಡಿಮೆ ಸಮಯದಲ್ಲಿ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ.

ಮದ್ಯಕ್ಕೆ ಕೊಡುವ ಪ್ರೋತ್ಸಾಹ ವಿದ್ಯೆಗೆ ನೀಡಿ- ಗುರುಶಾಂತ ಸ್ವಾಮೀಜಿ

ವರದಿ: ಗುಲಾಬಚಂದ ಜಾಧವ ಆಲಮಟ್ಟಿ : ಬಹಳಷ್ಟು ಯುವಕರ ಮನಸ್ಥಿತಿಯಿಂದು ಕೆಟ್ಟು ಹೋಗುತ್ತಲ್ಲಿದೆ. ದುಷ್ಚಟಗಳ ದಾಸರಾಗಿ…