ಮೂರು ಕವನ ಸಂಕಲನಗಳನ್ನು ಸಾಹಿತ್ಯ ಸಾರಸ್ವತ ಲೋಕಕ್ಕೆ ನೀಡಿದವರು ಶಿಕ್ಷಕಿ ಶಿಲ್ಪಾ ಮ್ಯಾಗೇರಿ. ಹವ್ಯಾಸ ಬರಹದ ಮೂಲಕ ಕಾವ್ಯ ಕಟ್ಟುವ ಕಸೂತಿಯನ್ನು ಕರಗತ ಮಾಡಿಕೊಂಡ ಶಿಕ್ಷಕಿ ಶಿಲ್ಪಾ ಎಮ್.ಎ, ಬಿಇಡಿ ಪದವಿ ಪಡೆದಿದ್ದಾರೆ. ಇವರು ಭಾರತಾಂಬೆ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಪಡೆದರು. ಮಾತು ಮೌನದ ನಡುವೆ ಕವನ ಸಂಕಲನ ಹಾಗೂ ಆಕಾಶಕ್ಕೊಂದು ಏಣಿ ಚುಟುಕು ಸಂಕಲನ ಇವರ ಇನ್ನೆರಡು ಸಂಕಲನಗಳು. ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ ನೀಡುವ ರಾಷ್ಟ್ರ ಕೂಟ ಸಾಹಿತ್ಯಶ್ರೀ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಕೊರೊ ನಾ

ಮರೆತಂತಿದೆ ಘಳಿಗೆ, ವಾರ, ತಿಥಿ

ನಿಧಾನ ಗೆದ್ದಿಲು ತಿನ್ನುತ್ತಿದೆ ಮಿತಿ.

ದುಡಿದಾಡಿದ ಕೈಗಳಿಗೀಗ ಕೆಲಸವಿಲ್ಲ.

ಅಡುಗೆ ಮನೆಯ ದೀಪ, ಒಲೆ ಗುಂಡಿನ  ಬಿಸಿ ಆರಿದಂತಿಲ್ಲ.

ಪೈಪೊಟಿಗೆ ಬಿದ್ದು ಮೇಲಕ್ಕೆ ಬೆಳೆಯುತ್ತಿದ್ದವರೆಲ್ಲ

ಈಗ ಅಡ್ಡಕ್ಕೆ ತಿರುಗಿದ್ದಾರೆ.

ಅನುಭವದ ವ್ಯಾಪ್ತಿ ಹೆಚ್ಚಿಸಲೆಂದು ಕಸರತ್ತು ನಡೆಸಿದವರೀಗ

ಬದಲಾಗುತ್ತಿರುವ ತಮ್ಮದೆ ಅಳತೆಯ ವ್ಯಾಪ್ತಿ ನೋಡಿಕೊಳ್ಳುತ್ತಿದ್ದಾರೆ.

ಅಪ್ಪನಿಗೆ ಬರಿದಾಗುತ್ತಿರುವ ದಿನಸಿಯ ಚಿಂತೆ

ಮಗನಿಗೆ ಪೋಲಿಸ್ ರ ಲಾಟಿ ಏಟಿಗೆ ಕುಣಿವವರ ನೋಡುವುದೆ ಮೋಜು.

ಏನು ನಿಂತರೂ ತಾನು ನಿಲ್ಲದ ಹಸಿವಿಗೆ

ಹೊತ್ತು ಹೊತ್ತಿಗೆ ಹೊಂದಿಸಲೇನೆಂದು ಅಮ್ಮಗೂ ದಿಗಿಲು.

ಕುಳಿತಲ್ಲೇ ಜಗದ ದೋಷ ಹುಡುಕಿ ಮಹಾ ಉಪದೇಶ ಕೊಡುವುದು ಈ ಮಕ್ಕಳಿಗೊಂದು ಅಮಲು.

ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ….

ನನ್ನವರು ನಿನ್ನವರೂ ಎಂದು ಯಾರಿಗೂ ಭೇದವಿಲ್ಲ

ಹಣದ ರಕ್ಷೆಯಲಿ.

ಮೌನ ತಾಳಿದ ಶ್ರಮಿಕ ವರ್ಗ…

ಮೂಕ ಸಾಕ್ಷಿಯಾಗಿದೆ ಚಿಂತಕ ವರ್ಗ….

ಹೊಸಿಲ ದಾಟದೆ ಆಜ್ಞೆ ಪಾಲಿಸುತಿದೆ

ಪ್ರಜ್ಞಾವಂತ ಬಳಗ.

ಕೊರೊನಾ ಪಿಡಿನೆಗೊಳಗಾದವರದೊಂದು ಸಂಖ್ಯೆಯಾದರೆ

ಕೇಳಿ ಕೇಳಿ ಭಯ ಬಿದ್ದು ಜಂಗಾಬಲ ಕಳೆದುಕೊಂಡವರೇ ಅಸಂಖ್ಯಾತರು

ಕರ್ಮ ಭೂಮಿಯೂ ಅಪ್ಪಿದೆ…..

ಜನ್ಮ ಭೂಮಿಯನು

ತಲುಪದ ಜೀವ ಸಂಕಟವ‌ ಕೇಳುವವರಾರು……

        ಶಿಲ್ಪಾ ಮ್ಯಾಗೇರಿ

Leave a Reply

Your email address will not be published. Required fields are marked *

You May Also Like

ಸಿಎಂ ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ನೀಡಿದ ಸಲಹೆ ಏನು?

ಗ್ರೀನ್ ಝೋನ್‌ಗಳಲ್ಲಿಯೂ ಕೊರೊನಾ ಪ್ರಕರಣಗಳು ಕಂಡು ಬರುತ್ತಿದ್ದು, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ವಿಧಿಸಲಾಗಿರುವ ನಿಯಮಗಳೇ ಮೇ 17ರ ನಂತರವೂ ಮುಂದುವರಿಯಲಿ ಎಂದು ಸಿಎಂ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಯಪ್ಪಾ..!, ಗಂಡ ತನ್ನ ಜೊತಿ ಜಗಳಾ ಆಡಂಗಿಲ್ಲಾ ಅಂತ ಡಿವೋರ್ಸ್ ಕೇಳ್ಯಾಳಂತ!

ಗಂಡ-ಹೆಂಡರ ಜಗಳ ಗಂಧ ತೀಡಿದಂಗ ಅಂತಾರ. ಅಷ್ಟ ಯಾಕ, ಗಂಡ-ಹೆಂಡರ ಜಗಳ ಉಂಡು ಮಲಗೋ ತನಕ ಅಂತಾನೂ ಅಂತಾರ. ಆದ್ರ ಗಂಡ ತನ್ನ ಜೊತಿಗೆ ಜಗಳಾನ ಆಡವಲ್ಲಾ, ತನಗ ಭಾಳ್ ಪ್ರೀತಿ ಮಾಡ್ತಾನಾ ಅಂತ ಹೆಣ್ಮಗಳ ಒಬ್ಬಾಕಿ ಕೋರ್ಟ್ ಕಟ್ಟಿ ಹತ್ತಿದ ಕತಿ ಇದು..

ಹಸಿರು ವಲಯಕ್ಕೂ ವಕ್ಕರಿಸಿದ ಕೊರೊನಾ!

ಕರ್ನಾಟಕಕ್ಕೆ ಕೊರೊನಾ ಎಂಟ್ರಿ ಕೊಟ್ಟರೂ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಅದರ ಆಟ ನಡೆದಿರಲಿಲ್ಲ. ಆದರೆ, ಒಂದೇ ದಿನ 8 ಪ್ರಕರಣಗಳು ದಾಖಲಾಗಿದ್ದು, ಜನರು ಆತಂಕದಲ್ಲಿ ಇದ್ದಾರೆ.

ಗದಗಿನ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಮೂರು ಸಿ.ಬಿ.ಎಸ್.ಇ ಶಾಲೆಗಳ ಫಲಿತಾಂಶ ಶೇ.100 ಕ್ಕೆ 100 ರಷ್ಟು

ಗದಗ : ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ವತಿಯಿಂದ ಗದಗ, ಮುಂಡರಗಿ ಹಾಗು ಗಜೇಂದ್ರಗಡ ಪಟ್ಟಣದಲ್ಲಿ…