ಚಡ್ಡಿ ಗಿಡ್ ಆತಂತ, ತಾನ್ ಕೊಟ್ ಅಳತಿಗೆ ಚಡ್ಡಿ ಹೊಲದ ಕೊಡಲಿಲ್ಲಾ ಅಂತ, ಟೇಲರ್ ವಿರುದ್ಧ ಚಡ್ಡಿ ಹೊಲಿಸಿಕೊಂಡಾವ ಕಂಪ್ಲೆಂಟ್ ಕೊಟ್ಟಾನಂತ. ಅಂದ್ಹಂಗ ಈ ಚಡ್ಡಿ ಜಗಳ ಈಗ ಕೋರ್ಟ್ ಅಂಗಳಕ್ಕೂ ಬಂದೈತಿ ನೋಡ್ರಿ.

ಭೋಪಾಲ್: ಚಡ್ಯಾರಾ ಆಗಲಿ, ಪ್ಯಾಂಟರಾ ಆಗಲಿ, ಒಳ ಅಂಗ್ಯಾರ ಆಗಲಿ, ಮೇಲಂಗ್ಯಾರ ಆಗಲಿ, ಏನಾರ ಆಗಲಿ ನಾವು ಹ್ಯಾಂಗ್ ಅಳತಿ ಕೊಟ್ಟಿರತಿವಿ ಹಂಗ ಹೊಲದ್ ಕೊಡೊ ಕೆಲ್ಸಾ ಟೈಲರ್ದು. ಆದ್ರ ನಾನು ‘ಚಂದನ್ ಬಟ್ಟಿ ಕೊಟ್ಟೀನಿ. ಆದ್ರ ಟೇಲರ್ ಗಿಡ್ ಗಿಡ್ ಅಂಡರ್ ವೇರ್ ಹೊಲದಾನ. ಅರೆಸ್ಟು ಮಾಡಿ ಒಗಿರಿ ಅವನ್ನ ಅಂತ ಭೋಪಾಲಿನ್ಯಾಗ ಒಬ್ಬಾಂವ ಪೊಲೀಸರ ಠಾಣಾ ಕಟ್ಟಿ ಹತ್ಯಾನ.

ಈ ಪೊಲೀಸ್ರು ಚಡ್ಡಿ ಸಲುವಾಗಿ ಯಾಕ್ ಜಗಳಾಡ್ತಿರಿ ಬರ್ರಿಲ್ಲಿ ಅಂತ ಕರದು ಜಗಳ ಬಗಿ ಹರಿಸಿ ಕಳಿಸಿ ಬಿಟ್ಟಿದ್ರ ನಡಿತ್ತಿತ್ತೇನೋ? ಒಂದ್ ವ್ಯಾಳೆ ಪೊಲೀಸ್ರಿಗೂ ಈ ಚಡ್ಡಿ ಜಗಳ ತಲಿ ಚಿಟ್ ಹಿಡಿಸಿತ್ತೋ ಏನೋ? ಏನಾರಾ ಆಗ್ಲಿಪಾ ಚಡ್ಡಿ ಗಿಡ್ ಹೊಲದಾನೋ ಉದ್ ಹೊಲದಾನೋ ಈ ಜಗಳಾ ಕೋರ್ಟ್ ನ್ಯಾಗ ಬಗೀ ಹರಿಸ್ಕೋ ಹೋಗ್ರಿ ಅಂತ ಸಾಗ ಹಾಕ್ಯಾರ.

ಕೃಷ್ಣಕುಮಾರ್ ದುಬೆ ಅನ್ನಾಂವ ಟೈಲರ್ ಅಣ್ಣನ ಕಡೆ ಚಡ್ಡಿ ಹೊಲಿಸಿಕೊಂಡು ಅನ್ಯಾಯಕ್ಕ ಒಳಗಾದಾಂವ ನೋಡ್ರಿ.  ‘ಬಾಳಾ ಅಂದ್ರ ಬಾಳಾ ಗಿಡ್ ಹೊಲಿದಾನ್ರಿ ಅಂವಾ ನಾನರ ಸೆಕ್ಯುರಿಟಿ ಗಾರ್ಡ್ ಅದಿನಿ, 9 ಸಾವಿರ ರೂ. ಪಗಾರ ಬರುತ್ತಿತ್ತು. ಲಾಕ್ ಡೌನ್ ಆದ್ ಕೂಡ್ಲೆ ಇದ್ ಸಣ್ ಕೆಲ್ಸಾನೂ ಹೋತು. ಊರಿಗೆ ಹೋಗುವ ಮೊದ್ಲ ಒಂದೆರಡು ಪಟ್ಟಾಪಟ್ಟಿ ಚಡ್ಡಿ ಹೊಲಿಸಿಕೊಂಡು ಹೋಗೋಣ ಅಂತ, 2 ಮೀಟರ್ ಅರಬಿ ತಂದು, ‘ಎಷ್ಟ್ ಅಕ್ಕಾವು ಅಷ್ಟ್ ಚಡ್ಡಿ ಹೊಲಿ’ ಎಂದು ಟೇಲರ್ಗೆ ಕೊಟ್ರ, 190 ರೂಕ್ಕಾ ತುಗೊಂಡ್ ಚಡ್ಡಿ ಹೊಲ್ದ್ ಕೊಟ್ಟಾನ್ರಿ. ಆದರೆ ಅವು ತೀರಾ ಅಂದ್ರ ತೀರಾ ಗಿಡ್ ಆಗ್ಯಾವ್ರಿ ಅನ್ನೋದು ದುಬೆ ವಾದ.

ಈ ಬಗ್ಗೆ ಹೇಳಿಕೆ ನೀಡಿರುವ ಹಬೀಬ್ ಗಂಜ್ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ರಾಕೇಶ್ ಶ್ರೀವಾತ್ಸವ್, ಯಾಕೋ ಈ ಚಡ್ಡಿ ಕೇಸು ಕಾಂಪ್ಲಿಕೆಟೆಡ್ ಅನಿಸ್ತು. ಅದಕ್ಕ ಕೋರ್ಟಿಗೆ ಹೋಗೋಪ’ ಅಂತಾ ಹೇಳಿದೆವು ಅಂತ ತಿಳಿಸ್ಯಾರ.

ಇದಕ್ಕ ಟೈಲರ್, ಅಂವಾ ಕೊಟ್ ಬಟ್ಟಿನಾ ಕಡಿಮಿತ್ತು, ನಾನಾರ ಏನ್ ಮಾಡ್ಲಿ ಅಂತ ಹೇಳ್ಯಾನ. ಈ ಚಡ್ಡಿ ಗಿಡ್ಡ-ಉದ್ದ ಅಂತ ದುಬೆ ಮತ್ತ ಟೈಲರ್ ನಡುವ ಮಾತಿಗೆ ಮಾತು ಬೆಳೆದೈತಿ. ತಲಿ ಕೆಟ್ಟ ದುಬೆ ಸೀದಾ ಪೊಲೀಸ್ ಠಾಣಾಕ್ ಹೋಗಿ ಕಂಪ್ಲೇಂಟ್ ಕೊಟ್ಟಾನ.

ಈ ಚಡ್ಡಿ ರಗಳೆಗೆ ಸುಸ್ತಾದ ಟೇಲರ್, ‘ಯಪ್ಪಾ, ನಿನ್ ರೊಕ್ಕ ನಿಂಗ್ ವಾಪಸ್ ಕೊಡ್ತೀನಿ. ಕೋರ್ಟು-ಗೀರ್ಟು ಬ್ಯಾಡಪೋ ಶಿವನೇ’ ಅಂದಾನಂತ. ಆದ್ರ ದುಬೆ ಏನ್ ಮಾಡ್ತಾನ ಅನ್ನೋದ ಭಾಳ್ ಕುತೂಹಲದ್ ವಿಷಯ ನೋಡ್ರಿ.

Leave a Reply

Your email address will not be published. Required fields are marked *

You May Also Like

ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಲೋಕಾರ್ಪಣೆ

ಉತ್ತರ ಪ್ರಭ ದಿನ ಪತ್ರಿಕೆ ಕಾರ್ಯಾಲಯದಲ್ಲಿ ನಡೆದ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯ ಡಾ.ಕೆ.ಯೋಗೇಶನ್ ಮಾತನಾಡಿದರು.

ಬಿಡುವೆನೆಂದರೂ ಬಿಡದಂತೆ ಕಾಡುತ್ತಿರುವ ಆಕೆ ಹೋಗಿದ್ದಾರೂ ಎಲ್ಲಿಗೆ..?

ಅದ್ಯಾಕೋ ಗೊತ್ತಿಲ್ಲ ನಾನು ಅವಳಿಗೆ ಫಿದಾ ಆಗಿಬಿಟ್ಟಿದ್ದೆ. ಕ್ಷಣವೂ ಬಿಟ್ಟಿರದಷ್ಟು ಗಾಢ ಪ್ರೀತಿ ಬೆಳೆದಿತ್ತು. ನಮ್ಮಿಬ್ಬರ ಪ್ರೀತಿಯ ಬೆಸುಗೆಗೆ ಮೂರು ವರ್ಷವಾಗಿತ್ತು. ನನ್ನ ಹೃದಯದ ಭಾಷೆ ಅವಳಿಗೆ ಗೊತ್ತು.

I Love You ಅಂತಹೇಳಿದ್ದ ಗೆಳೆಯಾಗ ಗೆಳತಿ ಕೊಟ್ಟಿದ್ದೇನು ಗೊತ್ತಾ..?

ತನ್ನ ಭಾಳ್ ದಿನದ್ ಗೆಳತಿಗೆ ಆತ, ಐಲೌಯು ಅಂತ ಹೇಳಬೇಕು ಅಂದ್ಕೊಂಡಿದ್ನಂತ. ಆದ್ರ ಅವನಿಗೊಂದು ಹುಚ್ಚು. ತಾನು ಐಲೌಯು ಅಂತ ಹೇಳಿದ್ ಕೂಡ್ಲೆ ತನ್ನ ಗೆಳತಿಗೆ ಫುಲ್ ಥ್ರಿಲ್ ಆಗಬೇಕು. ಆಕಿ ಜೀವನದಾಗ ಈ ಘಟನಾ ಮರಿಲಾರದಂತ ಅನುಭವ ಆಗಬೇಕು. ಅಂಥ ಸರ್ಪ್ರೈಜ್ ಕೊಡಬೇಕು ಅನ್ನೋ ಖಯಾಲಿಯೊಳಗ ಒಂದು ಪ್ಲ್ಯಾನ್ ಮಾಡಿದ್ನಂತ. ಐಲೌಯು ಅಂತ ಹೇಳಿದ್ ಕೂಡ್ಲೆ ಮುಂದೇನಾತು ಅನ್ನೋದಾ ಆತ ಮಾಡಿದ ಪ್ಲ್ಯಾನ್ ನ ಕಥಿ ನೋಡ್ರಿ..

ದೇಸೀ ಹುಡಗಿಯ ನಿರ್ಗಮನಕೆ ಭಾವಪೂರ್ಣ ಶ್ರದ್ಧಾಂಜಲಿ

ಪ್ರಸ್ತುತದಲ್ಲಿ ಜೀವಿಸುತ್ತಿರುವ ನಾವು ಅತ್ಯಾಧುನಿಕ ತಂತ್ರಜ್ಞಾನವನ್ನು ಅನುಭವಿಸುತ್ತಿರುವ ಅದೃಷ್ಟವಂತರು. ಆ ಕಾರಣದಿಂದಲೆ ಗೂಗಲ್ ಗೆ ಹೋಗಿ ‘ದೇಶಾಂಶ ಹುಡುಗಿ’ ಎಂದು ಟೈಪ್ ಮಾಡಿದರೆ ಸಾಕು, ಅನೇಕ ವೆಬ್ ಸೈಟ್ ಗಳು ಓಪನ್ ಆಗುತ್ತವೆ. ಕಣಜ ಡಾಟ್ ಇನ್, ನಾನುಗೌರಿ ಡಾಟ್ ಕಾಮ್, ಬುಕ್ ಬ್ರಹ್ಮ ಡಾಟ್ ಕಾಮ್, ಯಾವುದೇ ಇರಬಹುದು, ಎಲ್ಲದರಲ್ಲೂ ಈ ಹಿರಿಯ ಜೀವಿಯ ಸಾಹಿತ್ಯ, ಸಾಧನೆ ಅಪ್ ಲೋಡ್ ಆಗಿದೆ. ಬೆಳೆದು ನಿಂತ ಈ ಪೈರು ನೀಡಿದ ಫಸಲು ಅಪಾರ, ಅನನ್ಯ, ಅದ್ಭುತ.