ಬೆಂಗಳೂರು: ನಾನು ಆರೋಗ್ಯವಾಗಿರುವೆ. ಗೃಹ ಕಚೇರಿ ಕೃಷ್ಣಾದಲ್ಲಿ ಕೆಲವು ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿದೆ. ಕೆಲವು ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುವೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ, ಸೂಚನೆ ಕೊಡುವೆ ಎಂದು ಸಿಎಂ ಯಡಿಯೂರಪ್ಪ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ತಿಳಿಸಿದ್ದಾರೆ.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯವಾಗಿದ್ದರೂ, ಅವರು ಆನ್ ಲೈನ್ ಆಡಳಿತದ ಮೊರೆ ಹೋಗಿರುವುದು ವಿಚಿತ್ರವಾಗಿದೆ. ಅದರ ಬದಲು ಹೋಂ ಕ್ವಾರಂಟೈನ್ ಗೆ ಒಳಗಾಗುತ್ತಿರುವೆ ಎನ್ನಬಹುದಿತ್ತು ಅಲ್ಲವೇ? ನಮ್ಮ ನಾಯಕರೇ ಇಂತಹ ಮಡಿವಂತಿಕೆ ತೋರಿದರೆ ಜನರ ಪಾಡೇನು ಎಂಬ ಪ್ರಶ್ನೆಯೂ ಈಗ ಜನರನ್ನು ಕಾಡುತ್ತಿದೆ.