ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಸಂದರ್ಭದಲ್ಲಿ ನಮ್ಮ ಆಹಾರ ಪದ್ಧತಿ ಹೇಗಿರಬೇಕು ಎಂದು ಟಿಪ್ಸ್ ನೀಡುತ್ತ ಬಂದಿದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇವು ಸಹಾಯಕಾರಿ. ಈ ಟಿಪ್ಸ್ ಎಲ್ಲ ಕಾಲಕ್ಕೂ ಅನ್ವಯ ಆಗುವಂತಹವೇ ಆಗಿವೆ.

1) ಕೊಬ್ಬು ಮತ್ತು ಎಣ್ಣೆ ಪದಾರ್ಥಗಳ ಸೇವನೆ ಕಡಿಮೆ ಮಾಡಿ.

2) ಅಡುಗೆ ತಯಾರಿಕೆಯಲ್ಲಿ ಬೆಣ್ಣೆ, ತುಪ್ಪ ಬಳಕೆಯನ್ನು ಮಿತಗೊಳಿಸಿ. ಸೋಯಾ, ಸೂರ್ಯಕಾಂತಿ ಅಡುಗೆ ಎಣ್ಣೆ ಬಳಕೆಗೆ ಆದ್ಯತೆ ನೀಡಿ.

3) ಮಾಂಸಾಹಾರ ಸೇವಿಸುತ್ತಿದ್ದರೆ ಆದಷ್ಟು ಕೆಂಪು ಮಾಂಸಕ್ಕಿಂತ ಬಿಳಿ ಮಾಂಸ ಸೇವಿಸಿ. ಅಂದರೆ, ಕೋಳಿ ಅಥವಾ ಮೀನು ಆಹಾರ ಒಳ್ಳೆಯದು.

4) ಜಾಸ್ತಿ ಕೊಬ್ಬು ಇರುವ ಹಾಲು ಮತ್ತು ಇತರ ಡೈರಿ ಪದಾರ್ಥಗಳ ಅವಲಂಬನೆ ಕಡಿಮೆ ಇರಲಿ.

5) ಸಂಸ್ಕರಿತ ಸಿದ್ಧ ಆಹಾರದ ಬಳಕೆ ಕಡಿಮೆ ಮಾಡಿ.

6) ಅಡುಗೆ ತಯಾರಿಸುವಾಗ ಹುರಿಯುವುದಕ್ಕಿಂತ, ಕುದಿಸುವ ಅಥವಾ ಸ್ಟೀಮ್ (ಕುಕರ್) ಪದ್ಧತಿಗೆ ಆದ್ಯತೆ ನೀಡಿ.

7) ಸಿಹಿ ಪದಾರ್ಥ ಸೇವನೆ ತುಂಬ ಕಡಿಮೆ ಮಾಡಿ.

8) ಸಕ್ಕರೆ ಪದಾರ್ಥ ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುವ ಸಾಫ್ಟ್ ಡ್ರಿಂಕ್ಸ್ ಸೇವನೆ ಮಿತಗೊಳಿಸಿ.

9) ಕೇಕ್, ಚಾಕೊಲೇಟ್ ಸೇವನೆ ಕಡಿಮೆ ಮಾಡಿ. ಅದರ ಬದಲು ತಾಜಾ ಹಣ್ಣುಗಳಿಗೆ ಆದ್ಯತೆ ನೀಡಿ.

10) ಮಕ್ಕಳಿಗೆ ಆದಷ್ಟು ಸಕ್ಕರೆ ಹೆಚ್ಚಿರುವ ಸಿಹಿ ತಿಂಡಿ ಕೊಡುವುದನ್ನು ಕಡಿಮೆ ಮಾಡಿ. 2 ವರ್ಷದ ಒಳಗಿನ ಮಕ್ಕಳಿಗೆ ಸಕ್ಕರೆ ಮತ್ತು ಉಪ್ಪು ಬೆರೆತ ಆಹಾರ ನೀಡಬೇಡಿ. 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಉಪ್ಪು ಬೆರೆತ ಆಹಾರ ನೀಡಿ.

11) ನೀರು ಸೇವನೆ ಹೆಚ್ಚಿರಲಿ. ಸಹಜವಾಗಿ ಬಳಸುವ ನಲ್ಲಿ ನೀರು ಕುಡಿದರೂ ಸಾಕು.

12) ಶಿಶುಗಳಿಗೆ ಆದಷ್ಟು ಎದೆಹಾಲು ಉಣ್ಣಿಸಿ.

Leave a Reply

Your email address will not be published. Required fields are marked *

You May Also Like

ಪಿಎಲ್‍ಡಿ, ಕಸ್ಕಾರ್ಡ್ ಬ್ಯಾಂಕ್‍ನ ಸುಸ್ತಿ ಸಾಲದ ಅಸಲು ಪಾವತಿಸಲು ಸೂಚನೆ

ಜಿಲ್ಲೆಯ ಪಿಎಲ್‍ಡಿ/ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ ಎಲ್ಲ ಸುಸ್ತಿ ಸಾಲಗಾರರು ಜೂ.30ರೊಳಗೆ ಸುಸ್ತಿ ಸಾಲದ ಅಸಲು ಪಾವತಿಸಿ ಬಡ್ಡಿ ಮನ್ನಾ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ಪಿ.ಕೆ.ರಾಯನಗೌಡ್ರ ತಿಳಿಸಿದರು.

ಕೊರೋನಾ ನಂತರ ಚೀನಾದಲ್ಲೀಗ ಬ್ಯುಬೊನಿಕ್ ಪ್ಲೇಗ್!

ನವದೆಹಲಿ: ಕೊರೊನಾದಿಂದ ಹೆಚ್ಚು ಬಾಧಿತ ನಂಬರ್ 1 ದೇಶ ಎನಿಸಿದ್ದ ಚೀನಾ ನಂತರದಲ್ಲಿ ಸಾಕಷ್ಟು ಚೇತರಿಸಿಕೊಂಡು…

ಪತ್ರ ಚಳುವಳಿಗೆ ಕರೆ ನೀಡಿದ ಭೋವಿ ಶ್ರೀಗಳು

ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರ ಈ ಸಮುದಾಯಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ರಾಜ್ಯ ಸರ್ಕಾರದ ವಿವರಣೆ ಹೀಗಿದೆ: “ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವ ವಿಚಾರವಾಗಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ, ‘ಸೂಕ್ತ ಪ್ರಾಧಿಕಾರದ (NCSC) ಮುಂದೆ ಹಾಜರಾಗಲು’ ಸೂಚನೆ ನೀಡಿ, ಸರ್ವೋಚ್ಛ ನ್ಯಾಯಾಲಯ ಸದರಿ ಅರ್ಜಿಯನ್ನು 14-2-2020ರಂದು ವಿಲೇವಾರಿ ಮಾಡಿದೆ” ಎಂದು ಹೇಳಲಾಗಿದೆ. ಜೊತೆಗೆ, “ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ, ದೆಹಲಿ, ಇವರ ಅರ್ಜಿಯನ್ನು ಸ್ವೀಕರಿಸಿ, NCSC ಇಂದ, ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಬೆಂಗಳೂರು. ಇವರಿಗೆ ಬರೆದ ಪತ್ರ ಸಂಖ್ಯೆ 36/inclusion & exclusion-3/2020/ssw ದಿನಾಂಕ:12-3-2020ರಲ್ಲಿ ಎಲ್ಲಿಯೂ ಕರ್ನಾಟಕ ರಾಜ್ಯದ ಭೋವಿ, ಲಂಬಾಣಿ, ಕೊರಮ ಹಾಗೂ ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ತಿಳಿಸಿಲ್ಲ” ಎಂದು ಹೇಳಿದೆ.

ಗದಗ ಜಿಲ್ಲೆಯಲ್ಲಿಂದು 5 ಕೊರೊನಾ ಪಾಸಿಟಿವ್..!

ಗದಗ: ಜಿಲ್ಲೆಯಲ್ಲಿಂದು 5 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 58 ಕ್ಕೆ ಏರಿಕೆಯಾದಂತಾಗಿದೆ.ಪಿ-7830(37), ಪಿ-7831(23),ಪಿ-7833(45),…