ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ಸಂದರ್ಭದಲ್ಲಿ ನಮ್ಮ ಆಹಾರ ಪದ್ಧತಿ ಹೇಗಿರಬೇಕು ಎಂದು ಟಿಪ್ಸ್ ನೀಡುತ್ತ ಬಂದಿದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇವು ಸಹಾಯಕಾರಿ. ಈ ಟಿಪ್ಸ್ ಎಲ್ಲ ಕಾಲಕ್ಕೂ ಅನ್ವಯ ಆಗುವಂತಹವೇ ಆಗಿವೆ.

1) ಕೊಬ್ಬು ಮತ್ತು ಎಣ್ಣೆ ಪದಾರ್ಥಗಳ ಸೇವನೆ ಕಡಿಮೆ ಮಾಡಿ.

2) ಅಡುಗೆ ತಯಾರಿಕೆಯಲ್ಲಿ ಬೆಣ್ಣೆ, ತುಪ್ಪ ಬಳಕೆಯನ್ನು ಮಿತಗೊಳಿಸಿ. ಸೋಯಾ, ಸೂರ್ಯಕಾಂತಿ ಅಡುಗೆ ಎಣ್ಣೆ ಬಳಕೆಗೆ ಆದ್ಯತೆ ನೀಡಿ.

3) ಮಾಂಸಾಹಾರ ಸೇವಿಸುತ್ತಿದ್ದರೆ ಆದಷ್ಟು ಕೆಂಪು ಮಾಂಸಕ್ಕಿಂತ ಬಿಳಿ ಮಾಂಸ ಸೇವಿಸಿ. ಅಂದರೆ, ಕೋಳಿ ಅಥವಾ ಮೀನು ಆಹಾರ ಒಳ್ಳೆಯದು.

4) ಜಾಸ್ತಿ ಕೊಬ್ಬು ಇರುವ ಹಾಲು ಮತ್ತು ಇತರ ಡೈರಿ ಪದಾರ್ಥಗಳ ಅವಲಂಬನೆ ಕಡಿಮೆ ಇರಲಿ.

5) ಸಂಸ್ಕರಿತ ಸಿದ್ಧ ಆಹಾರದ ಬಳಕೆ ಕಡಿಮೆ ಮಾಡಿ.

6) ಅಡುಗೆ ತಯಾರಿಸುವಾಗ ಹುರಿಯುವುದಕ್ಕಿಂತ, ಕುದಿಸುವ ಅಥವಾ ಸ್ಟೀಮ್ (ಕುಕರ್) ಪದ್ಧತಿಗೆ ಆದ್ಯತೆ ನೀಡಿ.

7) ಸಿಹಿ ಪದಾರ್ಥ ಸೇವನೆ ತುಂಬ ಕಡಿಮೆ ಮಾಡಿ.

8) ಸಕ್ಕರೆ ಪದಾರ್ಥ ಮತ್ತು ಸಕ್ಕರೆ ಪ್ರಮಾಣ ಹೆಚ್ಚಿರುವ ಸಾಫ್ಟ್ ಡ್ರಿಂಕ್ಸ್ ಸೇವನೆ ಮಿತಗೊಳಿಸಿ.

9) ಕೇಕ್, ಚಾಕೊಲೇಟ್ ಸೇವನೆ ಕಡಿಮೆ ಮಾಡಿ. ಅದರ ಬದಲು ತಾಜಾ ಹಣ್ಣುಗಳಿಗೆ ಆದ್ಯತೆ ನೀಡಿ.

10) ಮಕ್ಕಳಿಗೆ ಆದಷ್ಟು ಸಕ್ಕರೆ ಹೆಚ್ಚಿರುವ ಸಿಹಿ ತಿಂಡಿ ಕೊಡುವುದನ್ನು ಕಡಿಮೆ ಮಾಡಿ. 2 ವರ್ಷದ ಒಳಗಿನ ಮಕ್ಕಳಿಗೆ ಸಕ್ಕರೆ ಮತ್ತು ಉಪ್ಪು ಬೆರೆತ ಆಹಾರ ನೀಡಬೇಡಿ. 2 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಉಪ್ಪು ಬೆರೆತ ಆಹಾರ ನೀಡಿ.

11) ನೀರು ಸೇವನೆ ಹೆಚ್ಚಿರಲಿ. ಸಹಜವಾಗಿ ಬಳಸುವ ನಲ್ಲಿ ನೀರು ಕುಡಿದರೂ ಸಾಕು.

12) ಶಿಶುಗಳಿಗೆ ಆದಷ್ಟು ಎದೆಹಾಲು ಉಣ್ಣಿಸಿ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 178 ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ಇಂದು ರಾಜ್ಯದಲ್ಲಿ ಮತ್ತೆ 178 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು…

ಕೊರೊನಾ ಸೋಂಕು: ಗದಗನಲ್ಲಿಂದು ಇಬ್ಬರು ಬಿಡುಗಡೆ

ಗದಗ: ಜಿಲ್ಲೆಯಲ್ಲಿ ಕೊವಿಡ್-19 ಸೋಂಕಿನಿಂದ ಗುಣಮುಖರಾಗಿ ಇಂದು ಮತ್ತಿಬ್ಬರು ಬಿಡುಗಡೆ ಹೊಂದಿದರು. ಪಿ-1745(17 ವರ್ಷ), ಪಿ-1795 (16 ವರ್ಷ) ಇಬ್ಬರು ಯುವಕರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ನರೇಗಲ್ಲ್ ನಲ್ಲಿ ರಾಷ್ಟ್ರೀಯ ಪಲ್ಸ್ ಪೊಲೀಯೊ ಕಾರ್ಯಕ್ರಮ

ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಹಾಗು ದೇಶದ ಬಹುದೊಡ್ಡ ಆಸ್ತಿ ಎಂದು ನರೆಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷೆ ಅಕ್ಕಮ್ಮ ಯ ಮಣೋಡ್ಡರ ಹೇಳಿದರು.

ಕೊರೋನಾ ಸಂಕಷ್ಟ ವಲಸಿಗರ ವಿಚಾರದಲ್ಲೂ ರಾಜಕಾರಣ..!

ಅಣ್ಣಾ ನಾನು ಊರಿಗೆ ಬರ್ತಿನಿ, ಬೇಕಾದ್ರೆ ಕ್ವಾರೈಂಟೈನ್ ನಲ್ಲಾದ್ರು ಇರ್ತಿನಿ ಆದ್ರೆ ಊರಿಗೆ ಬಂದ್ರೆ ಸಾಕು ಅನ್ನಿಸ್ತಿದೆ, ಹೇಗಾದ್ರು ಮಾಡಿ ನನ್ನನ್ನು ಕರಿಸಿಕೋ ಎನ್ನುವ ಮೊಬೈಲ್ ಕರೆಗಳೀಗ ಸಾಮಾನ್ಯವಾಗಿವೆ. ನಮಗೆ ಒಂದೊತ್ತಿನ ಊಟಕ್ಕೂ ಪರದಾಟವಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದೇ ನಾವು ಪರದಾಡುತ್ತಿದ್ದೇವೆ ಬೇಗ ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಎನ್ನುವ ಅಂಗಲಾಚುವ ಧ್ವನಿ. ಒಂದೆಡೆ ಕಾರ್ಮಿಕರ ಗೋಳು ಮತ್ತೊಂದೆಡೆ ತಮ್ಮ ದೇಹವನ್ನೆ ಬಂಡವಾಳವಾಗಿಸಿಕೊಂಡು ಮುಂಬೈ-ಪುಣೆಯನ್ನೆ ಆಶ್ರಯಿಸಿಕೊಂಡಿದ್ದ ಲೈಂಗಿಕ ಕಾರ್ಯಕರ್ತೆಯರು ಒಪ್ಪತ್ತಿನೂಟಕ್ಕೆ ಪಡುತ್ತಿರುವ ಗೋಳಾಟ ಅಷ್ಟಿಷ್ಟಲ್ಲ.