ಗದಗ: 8 ದಿನದಿಂದ ಅಗತ್ಯ ವಸ್ತು ಸಿಗದೇ ಕಂಗಾಲಾಗಿದ್ದ ಸೀಲ್ ಡೌನ್ ಪ್ರದೇಶದ ಜನರ ಎದುರು ತಹಸೀಲ್ದಾರ್ ಪ್ರತ್ಯಕ್ಷರಾದರು. ಅಸಮರ್ಪಕ ಸೀಲ್ ಡೌನ್ ನಿರ್ವಹಣೆಯಿಂದ ಸಿಟ್ಟಾಗಿದ್ದ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರಿನ ಜನರು ಶನಿವಾರ ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿಯವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಶನಿವಾರ ಮುಂಜಾನೆ ಬಾಲೇಹೊಸೂರಿನ ಜನರು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನ್ನು ‘ಉತ್ತರಪ್ರಭ’ ವರದಿ ಮಾಡಿತ್ತು.

ಮಧ್ಯಾಹ್ನದ ಹೊತ್ತಿಗೆ ಸೀಲ್ ಡೌನ್ ಪ್ರದೇಶಕ್ಕೆ ತಹಸೀಲ್ದಾರ್ ಭ್ರಮರಾಂಬ ಅವರು ಭೇಟಿ ಕೊಟ್ಟಾಗ ಅಲ್ಲಿನ ಮಹಿಳೆಯರು, ಯುವಕರು ಮೇಡಂರನ್ನು ತರಾಟೆಗೆ ತೆಗೆದುಕೊಂಡರು.

‘ಅಲ್ರಿ ಮೇಡಂ, 8 ದಿನಾ ಒಬ್ಬರು ಇತ್ತಾಗ ಬಂದಿಲ್ಲ. ಇಲ್ಲಿ ಎಲ್ಲ ಬಂದ್ ಮಾಡ್ಯಾರ. ಆದ್ರ ಪಂಚಾಯತಿ ಕಾರ್ಯದರ್ಶಿ ಮುಂದ್ ನಿಂತು 80 ರೂಪಾಯಕ್ಕೆ ಕೆಜಿ ಟೊಮೆಟೊ ಮಾರಿಸ್ತಾನ. ವಿಡಿಯೋ ಮಾಡಿದ್ರ ಯಾಕ್ ಮಾಡ್ತೀರಿ ಅಂತಾನ. ಇಲ್ಲಿ ನೋಡಿದ್ರ ದುಡಿಮಿ ಇಲ್ಲ, ಅಕ್ಕಿನೂ ಕೊಟ್ಟಿಲ್ಲ’ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಮೌನವೇ ಉತ್ತರ ಎಂಬಂತಿದ್ದ ಭ್ರಮರಾಂಬರಿಗೆ ಭ್ರಮನಿರಶನದಲ್ಲಿದ್ದ ಜನರ ಎದುರು ಉತ್ತರಿಸಲಾಗಲಿಲ್ಲ.

8 ದಿನದ ನಂತರ ಬಂದ ಮೇಡಂ ಪ್ರತಿ ಮನೆಗೆ ಎರಡು ಕೆಜಿ ಅಕ್ಕಿ, ಎರಡು ಕೆಜಿ ಸಕ್ಕರಿ ಕೊಟ್ಟರಷ್ಟೇ. ಜನ ಗುಬ್ಬಿಗಳಂತೆ ಈಟೀಟು ತಿನ್ನಲು ಆಗುತ್ತಾ ಎಂಬ ಪ್ರಶ್ನೆ ಕೇಳಿ ಬಂದಿತು.

ಈಗ ಎಲ್ಲ ಒದಗಿಸುವ ಭರವಸೆಯ ಸಿಹಿಮಾತು ಹೇಳಿ ಹೋಗಿದ್ದಾರೆ. ತಮ್ಮ ಆಡಳಿತದ ತಪ್ಪು ನೋಡಿ ಭ್ರಮರಾಂಬರೇ ಭ್ರಮನಿರಶರಾಗಿರಬಹುದು ಎಂದು ಜನ ಮಾತಾಡಿಕೊಳ್ಳುವಂತಿತ್ತು ತಹಸೀಲ್ದಾರರ ವರ್ತನೆ.

Leave a Reply

Your email address will not be published. Required fields are marked *

You May Also Like

ವಿದ್ಯಾರ್ಥಿಗಳು ಒತ್ತಡ ನಿರ್ವಹಿಸುವ ಕಲೆ ರೂಢಿಸಿಕೊಳ್ಳಬೇಕು

ವಿದ್ಯಾರ್ಥಿಗಳು ಜೀವನದಲ್ಲಿ ಒತ್ತಡ ನಿರ್ವಹಿಸುವ ಕಲೆ ರೂಢಿಸಿಕೊಳ್ಳಬೇಕು. ಕೇವಲ ಪರೀಕ್ಷೆಯಲ್ಲಿ ಪಾಸಾದರೆ ಸಾಲದು, ಜೀವನದ ಪರೀಕ್ಷೆಯಲ್ಲಿ ಯಶಸ್ಸು ಕಾಣಬೇಕು ಎಂದು ಪ್ರಾಚಾರ್ಯ ಎಸ್.ಎಸ್.ಕೆಂಚನಗೌಡರ ಹೇಳಿದರು.

ಕೇರಳದಲ್ಲಿ ಕೊರೊನಾ ಪ್ರಮಾಣ ಇಳಿಕೆ: ಪಿಣರಾಯಿ ವಿಜಯನ್

ಇಂದು ಕೇರಳದಲ್ಲಿ ಹೊಸದಾಗಿ ಕೊರೊನಾದ 40 ಪ್ರಕರಣಗಳು ದಾಖಲಾಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

ಆಸ್ಪತ್ರೆಯಲ್ಲಿನ ಬಹುತೇಕ ಸಿಬ್ಬಂದಿಗೆ ಕೊರೊನಾ!

ಮುಂಬಯಿ: ಇಲ್ಲಿಯ ಮಹಾನಗರ ಪಾಲಿಕೆಯ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಲ್ಲಿಯ ಸಾಯನ್‌ ತಿಲಕ್‌ ಆಸ್ಪತ್ರೆಯ 92 ಜನ ವೈದ್ಯರು ಹಾಗೂ ಏಳು ಜನ ತರಬೇತಿ ಪಡೆಯುತ್ತಿದ್ದ ವೈದ್ಯರಿಗೆ ಸೋಂಕು ತಗುಲಿದೆ.

ಮೆಕ್ಕೆಜೋಳ ರೈತರಿಗೆ ಪರಿಹಾರ: ಇದರಲ್ಲಿ ಸಂಶಯ ಬೇಡ

ಕೊಪ್ಪಳ: ಸರ್ಕಾರ ಇಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ರೈತರನ್ನು ಎಂದಿಗೂ ಕೈಬಿಡುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ…