ಗದಗ: ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ, ಗದಗ ಜಿಲ್ಲಾ ಪಂಚಾಯತಿ ಗಜೇಂದ್ರಗಡ, ಲಕ್ಷ್ಮೇಶ್ವರ ತಾಲೂಕು ಪಂಚಾಯತಿಗಳಲ್ಲಿನ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಹೊರಸಂಪನ್ಮೂಲ ಎಜೆನ್ಸಿ ಯಿಂದ ಭರ್ತಿ ಮಾಡಿಕೊಳ್ಳಲು ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆವ್ಹಾನಿಸಲಾಗಿದೆ.

ಅರ್ಜಿಯನ್ನು https://gadag.nic.in ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-08-2020 ರವರೆಗೆ ಅವಕಾಶ ಇರುತ್ತದೆ. ಮಾಹಿತಿಗಾಗಿ 08372-235947 ಸಂಪರ್ಕಿಸಬಹುದು.

ಹುದ್ದೆಗಳ ವಿವರ

1) ತಾಲೂಕು ತಾಂತ್ರಿಕ ಸಂಯೋಜಕರು
ಹುದ್ದೆಗಳ ಸಂಖ್ಯೆ-02
ವಿದ್ಯಾರ್ಹತೆ: ಬಿಇ/ಬಿಟೆಕ್(ಇನ್ ಸಿವಿಲ್ ಇಂಜನೀಯರಿಂಗ್ ಮತ್ತು ಗಣಕ ಯಂತ್ರದ ಬಗ್ಗೆ ಜ್ಞಾನ ಹೊಂದಿರಬೇಕು) ಡಿಪ್ಲೋಮಾ ವಿದ್ಯಾರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಗರೀಷ್ಟ ವಯೋಮಿತಿ: 45 ವರ್ಷ ಹಾಗೂ 36 ತಿಂಗಳ ಕೆಲಸದ ಅನುಭವ ಹೊಂದಿರಬೇಕು. ಪ್ರಸ್ತುತ ಈ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವವರಿಗೆ ವಯೋಮಿತ 4 ವರ್ಷ ಸಡಿಲಿಕೆ ಇರುತ್ತದೆ.

2) ತಾಲೂಕು ಎಮ್.ಐ.ಎಸ್ ಸಂಯೋಜಕರು

ಹುದ್ದೆಗಳು: 02
ವಿದ್ಯಾರ್ಹತೆ: ಎಮ್.ಸಿ.ಎ ಅಥವಾ ಕಂಪ್ಯೂಟರ್, ಎಲೇಕ್ಟ್ರಾನಿಕ್ಸ್ ಇಂಜನೀಯರಿಂಗ್ ಪದವಿಧರರು ಜೊತೆಗೆ ಪಿಜಿ ಡಿಸಿಎ ಪದವಿಧರರು ಅರ್ಹರಿರುತ್ತಾರೆ.
ಗರೀಷ್ಟ ವಯೋಮಿತಿ: 40 ವರ್ಷ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರಿಗೆ ವಯೋಮಿತಿಯಲ್ಲಿ 4 ವರ್ಷ ಸಡಲಿಕೆ ಇದೆ.

3) ತಾಲೂಕು ಐಇಸಿ ಸಂಯೋಜಕರು
ವಿದ್ಯಾರ್ಹತೆ: ಮಾಸ್ ಕಮ್ಯೂನಿಕೇಶನ್ ನಲ್ಲಿ ಪದವಿ ಅಥವಾ ಯಾವುದೇ ಸ್ನಾತಕೋತ್ತರ ಪದವಿಧರ ಕನಿಷ್ಟ ಮಾಸ್ ಕಮ್ಯೂನಿಕೇಶನ್ ನಲ್ಲಿ ಡಿಪ್ಲೋಮಾ ಮುಗಿಸಿರಬೇಕು. ಕಂಪ್ಯೂಟರ್ ಜ್ಞಾನ ಕಡ್ಡಾಯ. ಗರೀಷ್ಟ ವಯೋಮಿತಿ : 45 ವರ್ಷ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರಿಗೆ 4 ವರ್ಷ ವಯೋಮಿತಿ‌ ಸಡಿಲಿಕೆ. ಹಾಗೂ 36 ತಿಂಗಳ ಅನುಭವ ಹೊಂದಿದವರು ಅರ್ಹರು.

4) ಗಣಕಯಂತ್ರ ನಿರ್ವಾಹಕರು(ಡೆಟಾ ಎಂಟ್ರಿ ಆಪರೇಟರ್)
ಹುದ್ದೆಗಳು :02
ವಿದ್ಯಾರ್ಹತೆ: ಪಿಯುಸಿ ಯಲ್ಲಿ ಶೇ.40 ರಷ್ಟು ಅಂಕ ಹಾಗೂ ಕಂಪ್ಯೂಟರ್ ಜ್ಞಾನ ಕಡ್ಡಾಯ. ಕಂಪ್ಯೂಟರ್ ನಲ್ಲಿ ಕನ್ನಡ ಮತ್ತು ಇಂಗ್ಲೀಷ್ ನಿಮಿಷಕ್ಕೆ 35 ಶಬ್ದಗಳನ್ನು ಟೈಪ್ ಮಾಡುವ ಸಾಮಾರ್ಥ್ಯ ಹೊಂದಿರಬೇಕು. 36 ತಿಂಗಳ ಅನುಭವ ಉಳ್ಳವರಾಗಿರಬೇಕು.

1 comment
Leave a Reply

Your email address will not be published. Required fields are marked *

You May Also Like

ಗದಗ, ನರಗುಂದ, ರೋಣ, ಮುಂಡರಗಿ ತಾಲೂಕಿನಲ್ಲಿಂದು ಸೋಂಕಿರು ಪತ್ತೆ

ಗದಗ: ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ರೋಣ ತಾಲೂಕಿನ ಮದೆನಗುಡಿ ಗ್ರಾಮದ ನಿವಾಸಿ 35 ವರ್ಷದ ಪುರುಷ(ಪಿ-23121)…

ನಿಡಗುಂದಿಯಲ್ಲಿ ಬಿ.ಇಡಿ.ಪ್ರಶಿಕ್ಷಣಾಥಿ೯ಗಳಿಗೆ ಸ್ವಾಗತ- ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪ

ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ…

ಕಪ್ಪತ್ತಗುಡ್ಡ ವನ್ಯಜೀವಿಧಾಮ: ಕೈಬಿಡಲು ಒತ್ತಾಯಿಸಿ ಮನವಿ

ಸರ್ಕಾರ ಅವೈಜ್ಞಾನಿಕವಾಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಿಸಿದ್ದು, ಶಿರಹಟ್ಟಿ ತಾಲೂಕಿನ‌ ಬ್ಲಾಕ್ ನಂ 3 ಮತ್ತು 4 ರ ಅರಣ್ಯ ಕ್ಷೇತ್ರವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ಅಹಿಂದ್ ಸಂಘ ಹಾಗೂ‌ ಕ್ರಷರ್ ಮತ್ತು‌ ಕಲ್ಲು ಗಣಿಗಾರಿಕೆ ಕಾರ್ಮಿಕ ಒಕ್ಕೂಟ ಸಂಘದ ವತಿಯಿಂದ ಬುಧವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ‌ ಮನವಿ‌ ಸಲ್ಲಿಸಲಾಯಿತು.

ಲಕ್ಷ್ಮೇಶ್ವರ ಬಳಿ ಟ್ರ್ಯಾಕ್ಟರ್ ಪಲ್ಟಿ: ಸ್ಥಳದಲ್ಲಿಯೇ ಇಬ್ಬರ ಸಾವು

ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಸ್ಥಳಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಏಳು ಜನ ಗಾಯ‌ಗೊಂಡ ಘಟನೆ ಲಕ್ಷೇಶ್ವರ ತಾಲೂಕಿನ ಗುಂಜಳ ರಸ್ತೆಯಲ್ಲಿ ನಡೆದಿದೆ.