ಬೆಂಗಳೂರು: “ಅಭಿಮಾನಿಗಳೇ ದೇವರು” ಎಂದ ಅಣ್ಣಾವ್ರ ಮಾತು ಅಕ್ಷರಶಃ ಸತ್ಯ, ಪ್ರತಿದಿನ ಎಷ್ಟೋ ಅಭಿಮಾನಿಗಳು ಸೋಷಿಯಲ್ ಮೀಡಿಯಾದ ಮುಖಾಂತರ ಅಭಿಮಾನವನ್ನ ವ್ಯಕ್ತ ಪಡಿಸುತ್ತಾರೆ ತುಂಬಾ ಸಂತೋಷ ಆಗುತ್ತೆ. ಆದ್ರೆ ಇವತ್ತು ಬೆಳಗ್ಗೆ ಅಮ್ಮ ಬಂದು ‘ರಚ್ಚು ಬೆಳಿಗ್ಗೆ ಬೆಳಿಗ್ಗೆ ಯಾರೋ ಮನೆ ಮುಂದೆ ಕಾಯ್ತಿದಾರೆ ನೋಡು ಅಂದ್ರು”, ನಾನು ಹೊರಗಡೆ ಬಂದು ನೋಡ್ದೆ. ಒಂದು ಆಟೋ ಪಕ್ಕ ಮೂರು ಜನ ನಮ್ಮ ಮನೆಯ ಕಡೆ ಮುಖ ಮಾಡಿ ನಿಂತಿದ್ದಾರೆ ನನ್ನ ನೋಡುತಿದ್ದ ಹಾಗೆ ತುಂಬಾ ಎಕ್ಸೈಟ್ ಆದ್ರು, ಅವರ ಬಳಿ ಹೋಗ್ತಿದ್ದ ಹಾಗೆ ನನ್ನ ಒಂದು ಮಾತು ಆಡಕ್ಕೆ ಬಿಡ್ದೆ “ಮೇಡಂ ನಾವು ನಿಮ್ಮ ದೊಡ್ಡ ಅಭಿಮಾನಿ ಮೇಡಂ ನನ್ ಆಟೋ ಮೇಲ್ 1st ಫೋಟೋ ನಿಮ್ದು ಇರ್ಬೇಕು ಮೇಡಂ’ ಎಂದು ಗಿಫ್ಟ್ ವ್ರಾಪರ್ ಓಪನ್ ಮಾಡ್ಸಿ ನನ್ನ ಫೋಟೋ ಆಟೋ ಮೇಲೆ ಅಂಟಿಸಿ ನನ್ನ ಆಟೋಗ್ರಾಫ್ ತೆಗೆದುಕೊಂಡು, ಅವರ ನೆಚ್ಚಿನ ಆಟೋ ಜೊತೆ ನನ್ನ ಫೋಟೋ ಕ್ಲಿಕ್ಕಿಸಿ ತಾವೂ ಸೆಲ್ಪಿ ತೆಗೆದುಕೊಂಡು ಹೊರಡಲು ಮುಂದಾದರು; ನಿಜಕ್ಕೂ ಭಾವುಕಳಾದೆ. ಹೆಸರು ಕೇಳಬೇಕು ಎನ್ನುವಷ್ಟರಲ್ಲಿ ತುಂಬಾ ಉತ್ಸಾಹಿಕರಾಗಿ ನಗುತ್ತಲೇ ಹೊರಟೇ ಬಿಟ್ಟರು.

ತಮ್ಮ ಹೆಸರು, ಊರು ಯಾವುದೂ ಹೇಳದೆ ಕೇವಲ ತಮ್ಮ ಕಾರ್ಯ ವೈಖರಿ; ನನ್ನ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ ಅಭಿಮಾನಿಗಳಿಗೆ ಸದಾ ಚಿರಋಣಿ ನಿಮ್ಮ ಪ್ರೀತಿಯ ಆಟೋ ನಿಮ್ಮ ಜೀವನದ ಪಯಣವನ್ನು ಸುಖಕರವಾಗಿರಲಿ ಅಂತ ದೇವರಲ್ಲಿ ಬೇಡ್ಕೋತೀನಿ.

ನನ್ನ ಕಲಾ ಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು. ಅಭಿಮಾನಿಗಳ ಹೃದಯ ಶ್ರೀಮಂತಿಕೆಯ ಮುಂದೆ ಬೇರೆಯಲ್ಲ ಶೂನ್ಯ. ನಿಮ್ಮ ಪ್ರೀತಿ ಅಭಿಮಾನ ಸದಾ ಹೀಗೆ ಇರಲಿ. ಭಾವುಕಳಾದ ಕ್ಷಣದಲ್ಲಿ ಅವರ ಹೆಸರು ವಿವರ ತೆಗೆದುಕೊಳ್ಳಲಾಗಿಲ್ಲ, ದಯವಿಟ್ಟು ಈ ಪೋಸ್ಟ್ ನೋಡಿದ ಕೂಡಲೇ ನೀವು ಈ ಫೋಟೋವನ್ನು ನಿಮ್ಮ instagram account ನಲ್ಲಿ ಹಾಕಿ ನನ್ನನ್ನ tag ಮಾಡಿ.

ನಾನು repost ಮಾಡುತ್ತೇನೆ ಜೊತೆಗೆ ನಿಮ್ಮ ಹೆಸರು ತಿಳಿದುಕೊಳ್ಳಬೇಕೆಂಬ ಆಸಕ್ತಿ ನನಗಿದೆ.

ನಿಮ್ಮ, ರಚಿತಾ ರಾಮ್

Leave a Reply

Your email address will not be published. Required fields are marked *

You May Also Like

ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟಿ ಸಂಜನಾ!

ಬೆಂಗಳೂರು : ಡ್ರಗ್ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟಿ ಸಂಜನಾ ಅವರು, ಜಾಮೀನಿಗಾಗಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಸಿನಿ ಪ್ರಿಯರಲ್ಲಿ ಇಂದಿಗೂ ಸದಾ ಹಸಿರಾಗಿರುವ ದಿಲ್ ವಾಲೆ ದುಲ್ಹನಿಯ ಲೇ ಜಾಯೇಂಗೆ ಚಿತ್ರಕ್ಕೆ ಈಗ 25ರ ಸಂಭ್ರಮ!

ಮುಂಬಯಿ : ದಿಲ್ ವಾಲೆ ದುಲ್ಹನಿಯ ಲೇ ಜಾಯೇಂಗೆ ಚಿತ್ರದ ಬಗ್ಗೆ ಮಾತನಾಡಿದರೆ ಸಾಕು, ಪ್ರತಿಯೊಬ್ಬರ ಹೃದಯದಲ್ಲಿನ ಪ್ರೀತಿ ಮತ್ತೆ ಜನ್ಮ ಪಡೆಯುತ್ತದೆ. ಲವ್ ಬಾಯ್ ಆಗಿ ಶಾರೂಖ್ ಖಾನ್ ಅವರ ನಟನೆ, ಕಾಜೋಲ್ ಅವರ ಪ್ರೇಮ ಪ್ರಸಂಗ, ಚಿತ್ರದ ಹಾಡುಗುಳು ಜನರ ಎದೆಯಲ್ಲಿ ಇನ್ನೂ ಹಸಿರ…ಹಸಿರ…ಹಸಿರ….

ನಟ ಸಲ್ಮಾನ್ ಖಾನ್ ಈ ರೀತಿ ಮಾಡಿದ್ದು ಸತ್ಯವೇ? ಸರಿಯೇ?

ಮುಂಬಯಿ : ಕೊರೊನಾದ ಅಬ್ಬರದ ನಡುವೆ ಬಾಲಿವುಡ್ ನ ಒಂದೊಂದೆ ಮುಖಗಳು ಅನಾವರಣಕ್ಕೆ ಬರುತ್ತಿವೆ. ಯುವ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನಿಧನದ ನಂತರ ಅನೇಕ ಸತ್ಯಗಳು ಹೊರ ಬರುತ್ತಿವೆ. ಪಕ್ಷಪಾತ, ಗುಂಪುಗಾರಿಕೆ, ಕೀಳು ರಾಜಕೀಯದ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಪ್ರೇಮಕಥೆಯ ಸಲಿಗೆ ಸಿಂಗಲ್ ಸಾಂಗ್ ಚಂದನ್ ಶೆಟ್ಟಿ ಡ್ಯಾನ್ಸ್

ಬೆಂಗಳೂರು: ಪ್ರೇಮಿಯೊಬ್ಬ ಪ್ರೀತಿಯಿಂದ ಆಗ ಬದಲಾವಣೆಯನ್ನು ಚಂದನ್ ಶೆಟ್ಟಿ ಲವ್ ಸಾಂಗ್ ಒಂದರಲ್ಲಿ ಬಿಂಬಿಸಿದ್ದಾರೆ. ಈ ಮೂಲಕ ಆಲ್ಬಂ ಸಾಂಗ್ ನಲ್ಲಿ ಚಂದನ್ ಶೆಟ್ಟಿ ಹೊಸ ಪ್ರಯೋಗ ಮಾಡಿದ್ದಾರೆ. ಸಲಿಗೆ ಹೆಸರಿನ ಸಿಂಗಲ್ ಆಲ್ಬಂ ಅನ್ನು ಚಂದನ್ ಶೆಟ್ಟಿ ಮೇ 28 ರಂದು ಬಿಡುಗಡೆ ಮಾಡಿದ್ದಾರೆ. ಕೆನಡಾದಲ್ಲಿ ಚಿತ್ರೀಕರಿಸಿದ ಹಾಡನ್ನು ತಾವೇ ಶೂಟ್ ಮಾಡಿದ್ದಲ್ಲದೇ ಚೆನ್ನಾಗಿ ನೃತ್ಯ ಮಾಡಿದ್ದಾರೆ ಚಂದನ್ ಶೆಟ್ಟಿ.