ಪುಣೆ: ಈ ಮನುಷ್ಯನಿಗೆ ಚಿನ್ನದ ಹುಚ್ಚು ಮತ್ತು ಪ್ರಚಾರದ ತೆವಲು ಎಷ್ಟಿದೆಯೆಂದರೆ, ಕೊರೋನಾ ಬಿಕ್ಕಟ್ಟಿನಲ್ಲಿ ಚಿನ್ನದ ಮಾಸ್ಕ್ ಮಾಡಿಸಿಕೊಂಡು ಧರಿಸಿ ಶೋ ಕೊಡುತ್ತಿದ್ದಾನೆ.
ದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೊವಿಡ್‌ನಿಂದ ಬಾಧಿತ ರಾಜ್ಯವಾಗಿರುವ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚವಾಡದ ಶಂಕರ್ ಕುರಾಡೆ ಎಂಬ ವ್ಯಕ್ತಿಯ ಹುಚ್ಚು ಸಾಹಸವಿದು.

2.98 ಲಕ್ಷ ರೂ ಖರ್ಚು ಮಾಡಿ ಈ ಬಂಗಾರದ ಮಾಸ್ಕ್ ತಯಾರಿಸಲಾಗಿದೆ. ‘ಇದರ ಮಧ್ಯ ಭಾಗದಲ್ಲಿ ಸಣ್ಣ ಸಣ್ಣ ರಂಧ್ರ ಇರುವುದರಿಂದ ಉಸಿರಾಟಕ್ಕೇನೂ ತೊಂದರೆಯಿಲ್ಲ. ಆದರೆ ಕೊವಿಡ್ ಸೋಂಕು ತಡೆಗೆ ಇದು ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಿಲ್ಲ’ ಎಂದು ಶಂಕರ್ ಕುರಾಡೆ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಎಎನ್‌ಐ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುರುವ ನೆಟ್ಟಿಗರಲ್ಲಿ ಬಹಳಷ್ಟು ಜನ ಈ ಹುಚ್ಚಿನ ಬಗ್ಗೆ ಅಸಹ್ಯ ಪಟ್ಟಿದ್ದಾರೆ, ಕೆಲವರು ತಮಾಷೆ ಮಾಡಿದ್ದಾರೆ.

ಕಾರ್-ಪೇಂಟರ್ ಎನ್ನುವ ಹ್ಯಾಂಡಲ್‌ನವರು, ‘ಹಣದಿಂದ ಏನೆಲ್ಲ ಖರೀದಿಸಬಹುದು, ಆದರೆ ಕಾಮನ್ ಸೆನ್ಸ್ ಖರೀದಿಸಲಾಗದು’ ಎಂದಿದ್ದಾರಲ್ಲದೇ, ‘ಕೊವಿಡ್ ಈಡಿಯಟ್’ (ಕೊವಿಡೀಯಟ್) ಎಂದು ಚುಚ್ಚಿದ್ದಾರೆ. ಕಂಗನಾ ಎನ್ನುವವರು ಪೈಸಾ ಕೊಟ್ರ ಎಲ್ಲ ಸಿಗುತ್ತ, ಆದ್ರ ಬುದ್ಧಿ ಸಿಗಂಗಿಲ್ಲ’ ಎಂದಿದ್ದಾರೆ.

ಪಿಂಪ್ರಿ-ಚಿಂಚವಾಡದಲ್ಲಿ ಸೋಂಕಿನ ತೀವ್ರತೆಯಿದೆ. ಜುಲೈ 1ರವರೆಗೆ ಅಲ್ಲಿ 3,287 ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದು 47 ಜನರು ಮೃತಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಅದೇ ಪ್ರದೇಶದ ಈ ವ್ಯಕ್ತಿಗೆ ಈ ಅಸಹ್ಯ, ಅನೈತಿಕ ಶ್ರೀಮಂತಿಕೆ ಪ್ರದರ್ಶನ ಬೇಕಿತ್ತಾ ಎಂಬ ಪ್ರಶ್ನೆಗಳು ಎದ್ದಿವೆ.

ಈ ವ್ಯಕ್ತಿಗೆ ಮೊದಲಿಂದಲೂ ಬಂಗಾರದ ಬಯಕೆ ಕಾಡುತ್ತಲೇ ಬಂದಿದೆ. ಕೊರಳಲ್ಲಿ ಒಂದು ಹಗ್ಗದಂತಹ ಚಿನ್ನದ ಸರ, ಎಲ್ಲ ಬೆರಳುಗಳಿಗೆ ಚಿನ್ನದ ಉಂಗುರ ಮತ್ತು ಮುಂಗೈಗೆ ಹೆಣಭಾರದ ಬ್ರಾಸ್‌ಲೈಟ್ ಧರಿಸುತ್ತಾನೆ. 2.98 ಲಕ್ಷ ರೂ ವೆಚ್ಚದಲ್ಲಿ ಎಷ್ಟೋ ಬಟ್ಟೆ ಮಾಸ್ಕ್ ಖರೀದಿಸಿದ್ದರೆ ಹಂಚಿದ್ದರೆ ಈತ ಗ್ರೇಟ್ ಆಗುತ್ತಿದ್ದ ಅಲ್ಲವೆ?

ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಿದರೆ ಸಾಕು ಎಂದು ಸರಳತೆಯ ಬಗ್ಗೆ ಪ್ರಧಾನಿ ಹೇಳುವ ಹೊತ್ತಿನಲ್ಲಿ ಇಲ್ಲಿ ಚಿನ್ನದ ಮಾಸ್ಕ್ ಹಾಕುವ ತೆವಲು ಕಾಣಸಿಕೊಂಡಿದೆ.

1 comment
Leave a Reply

Your email address will not be published. Required fields are marked *

You May Also Like

ಹೋಂ ಕ್ವಾರಂಟೈನ್ ಉಲ್ಲಂಘಿಸಿದವರು ಸಾಂಸ್ಥಿಕ ಕ್ವಾರಂಟೈನ್ ಗೆ..!

ಗದಗ: ಹೋಂ ಕ್ವಾರಂಟೈನ್ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ ನಡೆಸಿದ್ದವರ ವಿರುದ್ಧ ಇಂದು ತಹಶೀಲ್ದಾರ್ ಗರಂ ಆದರು.…

ಋತುಮತಿಯಾದ ತಕ್ಷಣ ಮುಸ್ಲಿಂ ಹೆಣ್ಣುಮಕ್ಕಳು ಮದುವೆಗೆ ಅರ್ಹರು : ಪಂಜಾಬ್-ಹರ್ಯಾಣ ಹೈಕೋರ್ಟ್ ತೀರ್ಪು

ಮುಸ್ಲಿಂ ಬಾಲಕಿಯರು ಋತುಮತಿಯಾದ ತಕ್ಷಣ ಮದುವೆಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಅಂಥ ಬಾಲಕಿಯರಿಗೆ 18 ವರ್ಷ ಪೂರ್ಣಗೊಳದೇ ಇದ್ದರೂ ಅವರ ವಿವಾಹ ಕಾನೂನುಬದ್ಧವಾಗಿರುತ್ತದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತೀರ್ಪು ನೀಡಿದೆ.

ಸತ್ತಲ್ಲಿ 20 ಜನರಿರಬೇಕು…ಮದ್ಯಕ್ಕೆ ಮಾತ್ರ ಸಾವಿರ ಜನರಿದ್ದರೂ ಸೈ!!

ಅಂತ್ಯ ಸಂಸ್ಕಾರಕ್ಕೆ 20 ಜನರ ಸೇರುವಂತಿಲ್ಲ. ಆದರೆ, ಮದ್ಯದಂಗಡಿಯ ಮುಂದೆ 1 ಸಾವಿರ ಜನರು ನಿಲ್ಲಬಹುದೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಶಿವಸೇನೆ ಟೀಕೆ ಮಾಡಿದೆ.

ಕೊರೊನಾ ಹಿನ್ನೆಲೆ : ಆ.31ರವರೆಗೆ ಪರಿಹಾರ ಸಾಮಗ್ರಿಗಳ ಆಮದಿನ ಮೇಲಿನ ತೆರಿಗೆ ವಿನಾಯಿತಿ ವಿಸ್ತರಣೆ

ನವದೆಹಲಿ: ಜಿಎಸ್‌ಟಿ ಕೌನ್ಸಿಲ್ ತನ್ನ ಸಭೆಯಲ್ಲಿ ಕೊರೊನಾ ವೈರಸ್ ಪರಿಹಾರ ಸಾಮಗ್ರಿಗಳ ಆಮದಿಗೆ ಆಗಸ್ಟ್ 31ರವರೆಗೆ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಘೋಷಿಸಿದರು. ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ 43ನೇ ಜಿಎಸ್ಟಿ ಕೌನ್ಸಿಲ್ ಸಭೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಯಿತು. ಕೌನ್ಸಿಲ್ ಸುಮಾರು ಎಂಟು ತಿಂಗಳಲ್ಲಿ ಮೊದಲ ಬಾರಿಗೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.