ಪುಣೆ: ಈ ಮನುಷ್ಯನಿಗೆ ಚಿನ್ನದ ಹುಚ್ಚು ಮತ್ತು ಪ್ರಚಾರದ ತೆವಲು ಎಷ್ಟಿದೆಯೆಂದರೆ, ಕೊರೋನಾ ಬಿಕ್ಕಟ್ಟಿನಲ್ಲಿ ಚಿನ್ನದ ಮಾಸ್ಕ್ ಮಾಡಿಸಿಕೊಂಡು ಧರಿಸಿ ಶೋ ಕೊಡುತ್ತಿದ್ದಾನೆ.
ದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೊವಿಡ್‌ನಿಂದ ಬಾಧಿತ ರಾಜ್ಯವಾಗಿರುವ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚವಾಡದ ಶಂಕರ್ ಕುರಾಡೆ ಎಂಬ ವ್ಯಕ್ತಿಯ ಹುಚ್ಚು ಸಾಹಸವಿದು.

2.98 ಲಕ್ಷ ರೂ ಖರ್ಚು ಮಾಡಿ ಈ ಬಂಗಾರದ ಮಾಸ್ಕ್ ತಯಾರಿಸಲಾಗಿದೆ. ‘ಇದರ ಮಧ್ಯ ಭಾಗದಲ್ಲಿ ಸಣ್ಣ ಸಣ್ಣ ರಂಧ್ರ ಇರುವುದರಿಂದ ಉಸಿರಾಟಕ್ಕೇನೂ ತೊಂದರೆಯಿಲ್ಲ. ಆದರೆ ಕೊವಿಡ್ ಸೋಂಕು ತಡೆಗೆ ಇದು ಎಷ್ಟು ಪರಿಣಾಮಕಾರಿ ಎಂಬುದು ಗೊತ್ತಿಲ್ಲ’ ಎಂದು ಶಂಕರ್ ಕುರಾಡೆ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಎಎನ್‌ಐ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುರುವ ನೆಟ್ಟಿಗರಲ್ಲಿ ಬಹಳಷ್ಟು ಜನ ಈ ಹುಚ್ಚಿನ ಬಗ್ಗೆ ಅಸಹ್ಯ ಪಟ್ಟಿದ್ದಾರೆ, ಕೆಲವರು ತಮಾಷೆ ಮಾಡಿದ್ದಾರೆ.

ಕಾರ್-ಪೇಂಟರ್ ಎನ್ನುವ ಹ್ಯಾಂಡಲ್‌ನವರು, ‘ಹಣದಿಂದ ಏನೆಲ್ಲ ಖರೀದಿಸಬಹುದು, ಆದರೆ ಕಾಮನ್ ಸೆನ್ಸ್ ಖರೀದಿಸಲಾಗದು’ ಎಂದಿದ್ದಾರಲ್ಲದೇ, ‘ಕೊವಿಡ್ ಈಡಿಯಟ್’ (ಕೊವಿಡೀಯಟ್) ಎಂದು ಚುಚ್ಚಿದ್ದಾರೆ. ಕಂಗನಾ ಎನ್ನುವವರು ಪೈಸಾ ಕೊಟ್ರ ಎಲ್ಲ ಸಿಗುತ್ತ, ಆದ್ರ ಬುದ್ಧಿ ಸಿಗಂಗಿಲ್ಲ’ ಎಂದಿದ್ದಾರೆ.

ಪಿಂಪ್ರಿ-ಚಿಂಚವಾಡದಲ್ಲಿ ಸೋಂಕಿನ ತೀವ್ರತೆಯಿದೆ. ಜುಲೈ 1ರವರೆಗೆ ಅಲ್ಲಿ 3,287 ಪಾಸಿಟಿವ್ ಕೇಸ್‌ಗಳು ದಾಖಲಾಗಿದ್ದು 47 ಜನರು ಮೃತಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಅದೇ ಪ್ರದೇಶದ ಈ ವ್ಯಕ್ತಿಗೆ ಈ ಅಸಹ್ಯ, ಅನೈತಿಕ ಶ್ರೀಮಂತಿಕೆ ಪ್ರದರ್ಶನ ಬೇಕಿತ್ತಾ ಎಂಬ ಪ್ರಶ್ನೆಗಳು ಎದ್ದಿವೆ.

ಈ ವ್ಯಕ್ತಿಗೆ ಮೊದಲಿಂದಲೂ ಬಂಗಾರದ ಬಯಕೆ ಕಾಡುತ್ತಲೇ ಬಂದಿದೆ. ಕೊರಳಲ್ಲಿ ಒಂದು ಹಗ್ಗದಂತಹ ಚಿನ್ನದ ಸರ, ಎಲ್ಲ ಬೆರಳುಗಳಿಗೆ ಚಿನ್ನದ ಉಂಗುರ ಮತ್ತು ಮುಂಗೈಗೆ ಹೆಣಭಾರದ ಬ್ರಾಸ್‌ಲೈಟ್ ಧರಿಸುತ್ತಾನೆ. 2.98 ಲಕ್ಷ ರೂ ವೆಚ್ಚದಲ್ಲಿ ಎಷ್ಟೋ ಬಟ್ಟೆ ಮಾಸ್ಕ್ ಖರೀದಿಸಿದ್ದರೆ ಹಂಚಿದ್ದರೆ ಈತ ಗ್ರೇಟ್ ಆಗುತ್ತಿದ್ದ ಅಲ್ಲವೆ?

ಮನೆಯಲ್ಲಿ ತಯಾರಿಸಿದ ಮಾಸ್ಕ್ ಧರಿಸಿದರೆ ಸಾಕು ಎಂದು ಸರಳತೆಯ ಬಗ್ಗೆ ಪ್ರಧಾನಿ ಹೇಳುವ ಹೊತ್ತಿನಲ್ಲಿ ಇಲ್ಲಿ ಚಿನ್ನದ ಮಾಸ್ಕ್ ಹಾಕುವ ತೆವಲು ಕಾಣಸಿಕೊಂಡಿದೆ.

1 comment
Leave a Reply

Your email address will not be published. Required fields are marked *

You May Also Like

ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿರುವ ಪೆಟ್ರೋಲ್ ಬೆಲೆ.

ಕಳೆದ ವರ್ಷ ಮೇ ತಿಂಗಳಿಂದ ಇಲ್ಲಿಯವರೆಗೆ ಪೆಟ್ರೋಲ್ ಬೆಲೆಯು 31ರೂ 95 ಪೈಸೆ ಹಾಗೂ ಡೀಸೆಲ್ ಬೆಲೆ 27ರೂ 58 ಪೈಸೆಗೆ ಏರಿಕೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಮೂರನೇ ಲಾಕ್ ಡೌನ್ ಅಂತ್ಯ – ನಾಲ್ಕರಲ್ಲಿ ಏನಿರತ್ತೆ? ಏನಿರಲ್ಲ?

ನವದೆಹಲಿ: ನಾಳೆ ಮೂರನೇ ಹಂತದ ಲಾಕ್ ಡೌನ್ ಗೆ ಕೊನೆಯ ದಿನ. ಹೀಗಾಗಿ ನಾಲ್ಕನೇ ಹಂತದ…

ಗದಗ ಜಿಲ್ಲೆಗೆ ಶೇ.40 ರಷ್ಟು ಮಳೆಯ ಕೊರತೆ!: ಬಿತ್ತನೆಯಾಗಿದ್ದು ಶೇ.47 ರಷ್ಟು ಮಾತ್ರ!

ಗದಗ: ಜಿಲ್ಲೆಯಲ್ಲಿ ಈಗಾಗಲೇ ಕೆಲವೆಡೆ ಉತ್ತಮ ಮಳೆಯಾಗಿದ್ದು ಇನ್ನು ಕೆಲವು ಭಾಗದಲ್ಲಿ ಮಳೆಯ ದರ್ಶನವಾಗಿಲ್ಲ. ಮಳೆ…

ಪಾಕ್, ಅಪ್ಘಾನಿಸ್ತಾನ ರಾಷ್ಟ್ರಗಳ ಮುಂದೆ ಕೊರೊನಾ ವಿಷಯದಲ್ಲಿ ನಾವು ಸೋತಿದ್ದೇವೆ – ರಾಹುಲ್

ನವದೆಹಲಿ : ಕೊರೊನಾ ವಿಷಯದಲ್ಲಿ ನಾವು ಸೋಲು ಕಂಡಿದ್ದೇವೆ. ನಮ್ಮ ಶತೃ ರಾಷ್ಟ್ರ ಪಾಕ್ ವಿರುದ್ಧ ನಮಗೆ ಮುಖಭಂಗವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.