ಮರ್ಯಾದೆಗೇಡು ಹತ್ಯೆ ಕುರಿತ ಸಿನಿಮಾ ಮರ್ಡರ್ ನ ಪೋಸ್ಟರ್ ಬಿಡುಗಡೆ ಮಾಡಿದ ರಾಮ್ ಗೋಪಾಲ್ ವರ್ಮಾ. ಸಿನಿಮಾದಲ್ಲಿ ಮೂರು ಜಿಜ್ಞಾಸೆಗಳ ಎಳೆ ಇರುವುದಾಗಿ ರಾಮ್ ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ.
ದಲಿತ ಹುಡುಗನ್ನು ವಿವಾಹವಾದ ಕಾರಣಕ್ಕೆ ಅಮೃತಾಳ ಪತಿಯನ್ನು ಮಾರುತಿ ರಾವ್ ಹತ್ಯೆಗೈದದ್ದು ನೈಜ ಘಟನೆ. ಇದನ್ನು ಆಧರಿಸಿ ಸಿನಿಮಾ ನಿರ್ಮಿಸಲು ರಾಮ್ ಗೋಪಾಲ್ ವರ್ಮಾ ಮುಂದಾಗಿದ್ದಾರೆ.
ಚಿತ್ರದಲ್ಲಿ ಮಗುವಿನ ಮೇಲೆ ತಂದೆಯ ನಿಂಯಂತ್ರಣಕ್ಕೆ ಇರಬೇಕಾದ ಮಿತಿ, ಮಗಳ ಸಂಭಾವ್ಯ ಒಳಿತು, ಯಾರೋ ಒಬ್ಬರ ಒಳಿತಿಗಾಗ ಇನ್ನೊಬ್ಬರನ್ನು ಕೊಲ್ಲುವುದು ನ್ಯಾಯವೇ? ಎಂಬ ವಿಷಯಗಳನ್ನು ಚಿತ್ರದಲ್ಲಿ ಒಳಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಇದು ಅಮೃತ ಮತ್ತು ಮಾರುತಿ ರಾವ್ ಅವರ ಹೃದಯ ಹಿಂಡುವ ಕತೆ. ತನ್ನ ಮಗಳನ್ನು ಅತಿಯಾಗಿ ಪ್ರೀತಿಸುವ ಅಪಾಯದ ಮಹಾಗಾಥೆ ಎಂದು ರಾಮ್ ಗೋಪಾಲ್ ವರ್ಮಾ ಕತೆಯ ಎಳೆಯ ಕುರಿತು ಹೇಳಿಕೊಂಡಿದ್ದಾರೆ.
ಚಿತ್ರದಲ್ಲಿ ಅಮೃತಾ ಪಾತ್ರವನ್ನು ಅವಂಚ ಸಾಹಿತಿ, ತಂದೆ ಮಾರುತಿ ರಾವ್ ಪಾತ್ರವನ್ನು ಶ್ರೀಕಾಂತ್ ಅಯ್ಯಂಗಾರ್ ನಿರ್ವಹಿಸುತ್ತಿದ್ದಾರೆ. ಈ ವಿಷಯವನ್ನು ಕೂಡ ಟ್ವೀಟರ್ ಮೂಲಕ ರಾಮ್ ಗೋಪಾಲ್ ವರ್ಮಾ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಮುಂಡರಗಿ ತಾಲೂಕಿನ ಕೆಲ ಸರ್ಕಾರಿ ಆಸ್ಪತ್ರೆಗೂ ಕರೊನಾ ಭೀತಿ..!

ಜಿಲ್ಲೆಯ ಮುಂಡರಗಿ ತಾಲೂಕಾ ಆಸ್ಪತ್ರೆ ಸಿಬ್ಬಂದಿಗೆ ಕರೊನಾ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ. ಶಂಕೆ ಹಿನ್ನಲೆಯಲ್ಲಿ ಮುಂಡರಗಿ ತಾಲೂಕಾ ಆಸ್ಪತ್ರೆ ಹಾಗೂ ಡಂಬಳ ಆರೋಗ್ಯ ಕೇಂದ್ರದಲ್ಲಿ ಸೈನಿಟೈಜರ್ ಮಾಡಲಾಗಿದೆ.

ಕೊರೋನಾ ಕಾವ್ಯ-6

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಸಾಹಿತಿ ಎ.ಎಸ್.ಮಕಾನದಾರ್ ಕರಕಲಾದ ಕಾನನದಲ್ಲಿಯೂ ಕೊಸ ಗರಿಕೆಯನ್ನು ಕಾಣುವ ಕನಸುಗಾರನ ಭಾವ ಈ ಕಾವ್ಯದಲ್ಲಿ ಮೂಡಿದೆ.

ಗದಗ ಜಿಲ್ಲೆ ಅಕ್ರಮ ಮರಳು ಗಣಿಗಾರಿಕೆ: ತಹಶೀಲ್ದಾರ್-ಸಿಪಿಐ ಸೇರಿ 9 ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್..!

ಅಕ್ರಮ ಮರಳು ಗಣಿಗಾರಿಕೆ ಕುರಿತು ಉಚ್ಛ ನ್ಯಾಯಾಲಯ ಬೆಂಗಳೂರಿನಲ್ಲಿ ರಿಟ್ ಪಿಟೇಶನ್ ದಾಖಲಾಗಿತ್ತು. ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ಹೈಕೋರ್ಟ್..!

ಕೊರೊನಾ ಖರ್ಚು ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸಿ: ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪ ಕೈಗೊಂಡ ಕ್ರಮಗಳು ಮತ್ತು ಮಾಡಿರುವ ಖರ್ಚು-ವೆಚ್ಚಗಳು…