ಆತ್ಮಿಯರೆ

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಸಾಹಿತಿ ಎ.ಎಸ್.ಮಕಾನದಾರ್ ಕರಕಲಾದ ಕಾನನದಲ್ಲಿಯೂ ಕೊಸ ಗರಿಕೆಯನ್ನು ಕಾಣುವ ಕನಸುಗಾರನ ಭಾವ ಈ ಕಾವ್ಯದಲ್ಲಿ ಮೂಡಿದೆ.

ಸಾಹಿತಿ ಎ.ಎಸ್.ಮಕಾನದಾರ್

ಹೊಸ ಹೆಜ್ಜೆ ಹಾಕುತ ಬಾ

ಕರಕಲಾದ ಕಾನನದಲಿ ಹೊರ ಗರಿಕೆಯಾಗಿ ಬಾ

ಒಣಗಿದ ಮರದಲಿ ಚಿಗುರೊಡೆದು ಬಾ

ಬಾಡಿದ ಬಳ್ಳಿಯಲಿ ಮೊಗ್ಗಾಗಿ ಬಾ

ಕಾಡು ಮಲ್ಲಿಗೆಯೆ ಸುಗಂಧ ಸೂಸುತ ಬಾ

ಮಿಂಚಾಗಿ ಬಾ

ಕಾಮನ ಬಿಲ್ಲಾಗಿ ಬಾ

ಇಳೆಗೆ ಮುಂಗಾರು ಮಳೆಯಾಗಿ ಬಾ

ತಂಗಾಳಿ ಸೂಸುತ ಬಾ

ತುಂತುರು ಮಳೆಯಂತಾದರೂ ಬಾ

ಜಡಿಮಳೆಯಂತಾದರೂ ಬಾ

ಕಾದ ಮನ ಸಿಂಚನಗೊಳಿಸು ಬಾ

ಇಂಪಾದ ಸಂಗೀತದಂತೆ ಬಾ

ಅಹಮಿಕೆಯ ಕೋಟೆ ಒಡೆದು ಬಾ

ಬಿಸಿಲ ಬದುಕಿಗೆ ನೆರಳಾಗಿ ಬಾ

ಕಣ್ಮಿಂಚಿನ ಆಸೆಯಾಗಿ ಬಾ

ಎದೆಯೊಳಗಿನ ಗೂಡೊಳಗೆ ಬೆಚ್ಚಗೆ ಕುಳಿತುಕೋ ಬಾ

ಹಂಸ ಕ್ಷೀರದಂತಾಗಿಯಾದರೂ ಬಾ

ಕೇಡಿಲ್ಲದ ನುಡಿಯಾಗಿಯಾದರೂ ಬಾ

ಕಣ್ಣೀರು ಒರೆಸುವ ಕೈಯಾಗಿಯಾದರೂ ಬಾ

ಕೈತುತ್ತು ತಿನಿಸುವ ಮಾತೆಯಾಗಿಯಾದರೂ ಬಾ

ಕವನವಾಗಿಯಾದರೂ ಬಾ

ಸಖಿಯಾಗಿ ಸಾಕಿಯಾಗಿಯಾದರೂ ಬಾ

ಹಂಗಿಲ್ಲದ ಬದುಕು ಕಟ್ಟಲು ಹಪಹಪಿಸುತ ಬಾ

ಜೊತೆಗೆ ಹೊಸ ಹೆಜ್ಜೆ ಹಾಕುತ ಬಾ  

ಎ.ಎಸ್.ಮಕಾನದಾರ್, ಸಾಹಿತಿ ಗದಗ

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 1498 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 1498 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 26815 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 571. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 11098 ಕೇಸ್ ಗಳು. ರಾಜ್ಯದಲ್ಲಿ 15297 ಸಕ್ರೀಯ ಪ್ರಕರಣಗಳಿವೆ.

ಇನ್ಮುಂದೆ ಸಂಡೇ ಕರ್ಫ್ಯೂ ಇಲ್ಲ

ಬೆಂಗಳೂರು:ನಾಳೆ ದಿನಾಂಕ 31.05.2020 ಭಾನುವಾರದಂದು ಕಂಪ್ಲೀಟ್‌ ಲಾಕ್ ಡೌನ್ ಇರುವುದಿಲ್ಲ. ಆದ್ದರಿಂದ ದೈನಂದಿನ ಚಟುವಟಿಕೆಗಳು ಎಂದಿನಂತೆ…

ರಾಜ್ಯದಲ್ಲಿಂದು 213 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 213 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7213…

ಪಶ್ಚಿಮ ಬಂಗಾಳದಲ್ಲಿ ಜುಲೈ 31ರ ವರೆಗೆ ಲಾಕ್ ಡೌನ್!

ಕೋಲ್ಕತ್ತಾ : ದೇಶದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಹೆಚ್ಚಾಗುತ್ತಿದೆ. ಇದರಿಂದಾಗಿ ಪಶ್ಚಿಮ ಬಂಗಾಳ ಸರ್ಕಾರ ಜುಲೈ…