ಆತ್ಮಿಯರೆ

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಸಾಹಿತಿ ಎ.ಎಸ್.ಮಕಾನದಾರ್ ಕರಕಲಾದ ಕಾನನದಲ್ಲಿಯೂ ಕೊಸ ಗರಿಕೆಯನ್ನು ಕಾಣುವ ಕನಸುಗಾರನ ಭಾವ ಈ ಕಾವ್ಯದಲ್ಲಿ ಮೂಡಿದೆ.

ಸಾಹಿತಿ ಎ.ಎಸ್.ಮಕಾನದಾರ್

ಹೊಸ ಹೆಜ್ಜೆ ಹಾಕುತ ಬಾ

ಕರಕಲಾದ ಕಾನನದಲಿ ಹೊರ ಗರಿಕೆಯಾಗಿ ಬಾ

ಒಣಗಿದ ಮರದಲಿ ಚಿಗುರೊಡೆದು ಬಾ

ಬಾಡಿದ ಬಳ್ಳಿಯಲಿ ಮೊಗ್ಗಾಗಿ ಬಾ

ಕಾಡು ಮಲ್ಲಿಗೆಯೆ ಸುಗಂಧ ಸೂಸುತ ಬಾ

ಮಿಂಚಾಗಿ ಬಾ

ಕಾಮನ ಬಿಲ್ಲಾಗಿ ಬಾ

ಇಳೆಗೆ ಮುಂಗಾರು ಮಳೆಯಾಗಿ ಬಾ

ತಂಗಾಳಿ ಸೂಸುತ ಬಾ

ತುಂತುರು ಮಳೆಯಂತಾದರೂ ಬಾ

ಜಡಿಮಳೆಯಂತಾದರೂ ಬಾ

ಕಾದ ಮನ ಸಿಂಚನಗೊಳಿಸು ಬಾ

ಇಂಪಾದ ಸಂಗೀತದಂತೆ ಬಾ

ಅಹಮಿಕೆಯ ಕೋಟೆ ಒಡೆದು ಬಾ

ಬಿಸಿಲ ಬದುಕಿಗೆ ನೆರಳಾಗಿ ಬಾ

ಕಣ್ಮಿಂಚಿನ ಆಸೆಯಾಗಿ ಬಾ

ಎದೆಯೊಳಗಿನ ಗೂಡೊಳಗೆ ಬೆಚ್ಚಗೆ ಕುಳಿತುಕೋ ಬಾ

ಹಂಸ ಕ್ಷೀರದಂತಾಗಿಯಾದರೂ ಬಾ

ಕೇಡಿಲ್ಲದ ನುಡಿಯಾಗಿಯಾದರೂ ಬಾ

ಕಣ್ಣೀರು ಒರೆಸುವ ಕೈಯಾಗಿಯಾದರೂ ಬಾ

ಕೈತುತ್ತು ತಿನಿಸುವ ಮಾತೆಯಾಗಿಯಾದರೂ ಬಾ

ಕವನವಾಗಿಯಾದರೂ ಬಾ

ಸಖಿಯಾಗಿ ಸಾಕಿಯಾಗಿಯಾದರೂ ಬಾ

ಹಂಗಿಲ್ಲದ ಬದುಕು ಕಟ್ಟಲು ಹಪಹಪಿಸುತ ಬಾ

ಜೊತೆಗೆ ಹೊಸ ಹೆಜ್ಜೆ ಹಾಕುತ ಬಾ  

ಎ.ಎಸ್.ಮಕಾನದಾರ್, ಸಾಹಿತಿ ಗದಗ

Leave a Reply

Your email address will not be published. Required fields are marked *

You May Also Like

ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನೇ ಅತಿಕ್ರಮಣ ಮಾಡಿದ ಜನರು!

ಧಾರವಾಡ : ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಜಾಗಗಳನ್ನು ವಶಕ್ಕೆ ಪಡೆಯಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ…

ಖಾಸಗಿ ಬಸ್ ಪಲ್ಟಿ 5 ಜನ ಸಾವು 25 ಜನರಿಗೆ ಗಂಭೀರ ಗಾಯ

ತುಮಕೂರು: ಇಂದು ಬೆಳ್ಳಂಬೆಳಿಗ್ಗೆ ಬಾರಿ ದುರಂತವೋಂದು ನಡೆದು ಹೋಗಿದೆ. ಹೌದು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ…

ಕೋವಿಡ್-19 ನಿಯಂತ್ರಣ : ಜಿಲ್ಲೆಯಲ್ಲಿ 2 ವಾರ ಪ್ರತಿಬಂಧಕಾಜ್ಞೆ ಮುಂದುವರಿಕೆ

ಕೋವಿಡ್ -19 ಹರಡದಂತೆ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದನ್ವಯ ಮುಂದಿನ ಎರಡು ವಾರಗಳವರೆಗೆ ನಿಗದಿತ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಸಂಚಾರ ನಿಷೇಧಿಸಿದೆ.

ಗೋಲ್ಡನ್ ಸ್ಟಾರ್ ಗೆ ಅಡ್ವಾನ್ಸ್ ವಿಶ್ ಮಾಡಿದ ಕಿಚ್ಚ

ಬೆಂಗಳೂರು : ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಅಡ್ವಾನ್ಸ್ ವಿಶ್ ಮಾಡಿದ್ದಾರೆ. ಗೋಲ್ಡನ್…