ಬೆಂಗಳೂರು: ಸಾರ್ವಜನಿಕ ಲೆಕ್ಕ ಪತ್ರ ಸಮೀತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಈಗಾಗಲೇ ವಿಧಾನಸಭಾಧ್ಯಕ್ಷರಿಗೆ ಸಭೆ ನಡೆಸುವ ಕುರಿತು ಪತ್ರ ಬರೆದಿದ್ದರೂ ಅವರ ಆಪ್ತ ಕಾರ್ಯದರ್ಶಿ ಇಷ್ಟು ದಿನವಾದ್ರು ಪತ್ರ ತಲುಪಿರಲಿಲ್ಲ ನಿನ್ನೆಯಷ್ಟೆ ಪತ್ರ ತಲುಪಿದೆ ಎಂದು ಜಾಣತನ ಪ್ರದರ್ಶಿಸಿದ್ದರು. ಆದರೆ ಈ ಕುರಿತು ಟ್ವೀಟ್ ಮಾಡಿರುವ ಅವರು ವಿಧಾನಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅಮರನಾಥ್ ಅವರಿಗೆ ಅಷ್ಟೆ ಜಾಣತನದಿಂದ ಹಾಗೂ ಪರೋಕ್ಷವಾಗಿ ಸಭಾಧ್ಯಕ್ಷರಿಗೂ ಉತ್ತರ ನೀಡಿದಂತಾಗಿದೆ.

ಶಾಸಕ ಎಚ್ಕೆ ಪಾಟೀಲ್ ನೀಡಿದ ಉತ್ತರವೇನು?

ಇಂದು ಮುಂಜಾನೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ತಮ್ಮ ಕಚೇರಿಯ ಸ್ಪಷ್ಟನೆ ನೋಡಿದೆ. ದಿನಾಂಕ: 10-06-2020 ರಂದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷನಾದ ನಾನು ಮತ್ತು ಸಭಾಧ್ಯಕ್ಷರಾದ ತಮ್ಮೊಂದಿಗೆ ಸಭೆ ನಡೆಸಲು ಬರೆದ ಎರಡನೇ ಪತ್ರ ನೀಡಿದಾಗ, ಒಂದನೇ ಪತ್ರದ ಮೂಲಪ್ರತಿ, ಇಂದು ದಿನಾಂಕ 10-06-2020 ರಂದು ಮದ್ಯಾಹ್ನ 12-05ಕ್ಕೆ ತಲುಪಿದೆ ಎಂದು ಜಾಣತನದಿಂದ ತಮ್ಮ ಆಪ್ತ ಕಾರ್ಯದರ್ಶಿಯವರು ಪತ್ರಿಕಾ ಪ್ರಕಟಣೆ ನೀಡಿ ನಾನು 02-06-2020 ರಂದು ಬರೆದ ಪತ್ರವೇ ಮುಟ್ಟಿಲ್ಲ ಎಂಬ ಶಂಕೆ ಜನರಲ್ಲಿ ಹುಟ್ಟಿಸಲು ಪ್ರಯತ್ನಿಸಿದ್ದಾರೆ. ಏಕೆ ಈ ಪ್ರಯತ್ನ ಎನ್ನುವುದು ಅರ್ಥವಾಗಲಿಲ್ಲ. ತಮ್ಮ ಅಧಿಕೃತ ಇ-ಮೇಲ್ ಐಡಿಗೆ ಸಂಜೆ 6:43 ನಿಮಿಷಕ್ಕೆ ಪತ್ರ ಕಳುಹಿಸಲಾಗಿದೆ. ಅದರ ಸ್ಕ್ರೀನ್ ಶಾಟ್ ಕೂಡ ತಮ್ಮ ಪತ್ರದೊಂದಿಗೆ ಲಗತ್ತಿಸಿದೆ. ಅದೇ ದಿನ ತಮ್ಮ ಆಪ್ರ ಕಾರ್ಯದರ್ಶಿಯಾದ ಅಮರನಾಥ್ ಅವರ ಸಂಖ್ಯೆಗೂ ಸಹ ವಾಟ್ಸ್ ಅಪ್ ಮೂಲಕ ಕಳುಹಿಸಲಾಗಿದೆ. ತಲುಪಿರುವ ಬಗ್ಗೆ ದೂರವಾಣಿಯಲ್ಲಿ ಸಂಪರ್ಕಿಸಿ ಅವರಿಂದ ದೃಢಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ಪತ್ರವನ್ನು ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿಗಳಿಗೂ ಇಮೇಲ್ ಮೂಲಕ ಕಳುಹಿಸಲಾಗಿತ್ತು. ನನ್ನ 10-06-2020ರ ಪತ್ರ ತಲುಪಿದೆ ಎಂದು ಭಾವಿಸಿದೆ. ಆದಾಗ್ಯೂ ಸಭಾಧ್ಯಕ್ಷರ ಗಮನಕ್ಕೆ ಟ್ವೀಟರ್ ಮೂಲಕವೂ ಕೂಡ ಪತ್ರ ಹಾಗೂ ಗಂಭೀರವಾಗಿರುವ ದೂರು ಹಾಗೂ ಕೆಲವು ದಾಖಲಾತಿಗಳನ್ನು ಮಾತ್ರ ಕಳುಹಿಸಿರುವೆ ಎಂದು ಟ್ವೀಟ್ ಮಾಡಿದ್ದಾರೆ.

ಶಾಸಕ ಎಚ್ಕೆ ಪಾಟೀಲ್ ವಿಧಾನಸಭಾಧ್ಯಕ್ಷರಿಗೆ ಬರೆದ ಎರಡನೇಯ ಪತ್ರ

ಸಂಶಯಕ್ಕೀಡು ಮಾಡಿದ ವಿಧಾನಸಭಾ ಸಚಿವಾಲಯದ ನಡೆ

ಈಗಾಗಲೇ ಪಿಪಿಇ ಕಿಟ್ ಖರೀದಿಯಲ್ಲಿ ಭಾರಿ ಗೋಲ್ ಮಾಲ್ ಆಗಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್ಕೆ ಪಾಟೀಲ್ ಕೂಡ ಒತ್ತಾಯಿಸಿದ್ದರು. ಆದರೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ತನಿಖೆಗೆ ಆದೇಶಿಸಿರಲಿಲ್ಲ. ಇದರಿಂದ ವಿಧಾನಸಭಾಧ್ಯಕ್ಷರ ನಡೆ ವ್ಯಾಪಕ ಟೀಕೆ ಹಾಗೂ ಸಂಶಯಕ್ಕೂ ಕಾರಣವಾಗಿತ್ತು. ಆದರೆ ಇದೀಗ ಮತ್ತೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಚ್ಕೆ ಪಾಟೀಲ್ ಇದೇ ವಿಚಾರವಾಗಿ ಪತ್ರ ಬರೆದಾಗಲೂ ಅವರ ಆಪ್ತ ಕಾರ್ಯದರ್ಶಿ ತೋರಿದ ಜಾಣತನ ಜನರಿಗೆ ಗೌಪ್ಯವಾಗೇನು ಉಳಿದಿಲ್ಲ. ಈ ಜಾಣತನ ವಿಧಾನಸಭಾಧ್ಯಕ್ಷರ ಮೇಲೆ ಮತ್ತಷ್ಟು ಸಂಶಯಕ್ಕೂ ಕಾರಣವಾಗುವುದರಲ್ಲಿ ಸಂದೇಹವಿಲ್ಲ.

Leave a Reply

Your email address will not be published. Required fields are marked *

You May Also Like

ಅಸ್ವಸ್ಥಗೊಂಡ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲು

ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಮಂಗಳವಾರ ಸಂಜೆ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊರೋನಾ ಸಂಕಷ್ಟ ವಲಸಿಗರ ವಿಚಾರದಲ್ಲೂ ರಾಜಕಾರಣ..!

ಅಣ್ಣಾ ನಾನು ಊರಿಗೆ ಬರ್ತಿನಿ, ಬೇಕಾದ್ರೆ ಕ್ವಾರೈಂಟೈನ್ ನಲ್ಲಾದ್ರು ಇರ್ತಿನಿ ಆದ್ರೆ ಊರಿಗೆ ಬಂದ್ರೆ ಸಾಕು ಅನ್ನಿಸ್ತಿದೆ, ಹೇಗಾದ್ರು ಮಾಡಿ ನನ್ನನ್ನು ಕರಿಸಿಕೋ ಎನ್ನುವ ಮೊಬೈಲ್ ಕರೆಗಳೀಗ ಸಾಮಾನ್ಯವಾಗಿವೆ. ನಮಗೆ ಒಂದೊತ್ತಿನ ಊಟಕ್ಕೂ ಪರದಾಟವಿದೆ. ದುಡಿಯುವ ಕೈಗಳಿಗೆ ಕೆಲಸವೇ ಇಲ್ಲದೇ ನಾವು ಪರದಾಡುತ್ತಿದ್ದೇವೆ ಬೇಗ ನಮ್ಮನ್ನು ಊರಿಗೆ ಕರೆಸಿಕೊಳ್ಳಿ ಎನ್ನುವ ಅಂಗಲಾಚುವ ಧ್ವನಿ. ಒಂದೆಡೆ ಕಾರ್ಮಿಕರ ಗೋಳು ಮತ್ತೊಂದೆಡೆ ತಮ್ಮ ದೇಹವನ್ನೆ ಬಂಡವಾಳವಾಗಿಸಿಕೊಂಡು ಮುಂಬೈ-ಪುಣೆಯನ್ನೆ ಆಶ್ರಯಿಸಿಕೊಂಡಿದ್ದ ಲೈಂಗಿಕ ಕಾರ್ಯಕರ್ತೆಯರು ಒಪ್ಪತ್ತಿನೂಟಕ್ಕೆ ಪಡುತ್ತಿರುವ ಗೋಳಾಟ ಅಷ್ಟಿಷ್ಟಲ್ಲ.

ಯುವರಾಜ್ ಸಿಂಗ್ ಗೆ ಮೋಸ ಮಾಡಿದವರು ಯಾರು?

ಯುವರಾಜ್ ಸಿಂಗ್ ಬೆನ್ನಿಗೆ ಸಾಕಷ್ಟು ಜನ ಚುರಿ ಹಾಕಿದ್ದಾರೆ ಎಂದು ಅವರ ತಂದೆ ಯೋಗರಾಜ್ ಸಿಂಗ್ ಆರೋಪ ಮಾಡಿದ್ದಾರೆ. ಹಾಗಾದ್ರೆ ಯುವಿ ಬೆನ್ನಿಗೆ ಚೀರಿಹಾಕಿದವರು ಯಾರು ಎನ್ನುವುದೇ ಇಲ್ಲಿ ಮುಖ್ಯ ಪ್ರಶ್ನೆ.

ನರೆಗಲ್ ಗಾರ್ಡನ್ ಕಥೆ: 10 ಲಕ್ಷ ಖರ್ಚು ಮಾಡಿ 9 ವರ್ಷವಾದ್ರು, ಉಪಯೋಗಕ್ಕೆ ಬಾರದ ಉದ್ಯಾನವನ..!

ಗದಗ: ದೇವಾಲಯದ ಪಕ್ಕದಲ್ಲಿರುವ ಉದ್ಯಾನವನ ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎನ್ನುವಂತಿದೆ. ಸರ್ಕಾರ…