ಬೆಂಗಳೂರು: ಸಾರ್ವಜನಿಕ ಲೆಕ್ಕ ಪತ್ರ ಸಮೀತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಈಗಾಗಲೇ ವಿಧಾನಸಭಾಧ್ಯಕ್ಷರಿಗೆ ಸಭೆ ನಡೆಸುವ ಕುರಿತು ಪತ್ರ ಬರೆದಿದ್ದರೂ ಅವರ ಆಪ್ತ ಕಾರ್ಯದರ್ಶಿ ಇಷ್ಟು ದಿನವಾದ್ರು ಪತ್ರ ತಲುಪಿರಲಿಲ್ಲ ನಿನ್ನೆಯಷ್ಟೆ ಪತ್ರ ತಲುಪಿದೆ ಎಂದು ಜಾಣತನ ಪ್ರದರ್ಶಿಸಿದ್ದರು. ಆದರೆ ಈ ಕುರಿತು ಟ್ವೀಟ್ ಮಾಡಿರುವ ಅವರು ವಿಧಾನಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಅಮರನಾಥ್ ಅವರಿಗೆ ಅಷ್ಟೆ ಜಾಣತನದಿಂದ ಹಾಗೂ ಪರೋಕ್ಷವಾಗಿ ಸಭಾಧ್ಯಕ್ಷರಿಗೂ ಉತ್ತರ ನೀಡಿದಂತಾಗಿದೆ.

ಶಾಸಕ ಎಚ್ಕೆ ಪಾಟೀಲ್ ನೀಡಿದ ಉತ್ತರವೇನು?

ಇಂದು ಮುಂಜಾನೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ತಮ್ಮ ಕಚೇರಿಯ ಸ್ಪಷ್ಟನೆ ನೋಡಿದೆ. ದಿನಾಂಕ: 10-06-2020 ರಂದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷನಾದ ನಾನು ಮತ್ತು ಸಭಾಧ್ಯಕ್ಷರಾದ ತಮ್ಮೊಂದಿಗೆ ಸಭೆ ನಡೆಸಲು ಬರೆದ ಎರಡನೇ ಪತ್ರ ನೀಡಿದಾಗ, ಒಂದನೇ ಪತ್ರದ ಮೂಲಪ್ರತಿ, ಇಂದು ದಿನಾಂಕ 10-06-2020 ರಂದು ಮದ್ಯಾಹ್ನ 12-05ಕ್ಕೆ ತಲುಪಿದೆ ಎಂದು ಜಾಣತನದಿಂದ ತಮ್ಮ ಆಪ್ತ ಕಾರ್ಯದರ್ಶಿಯವರು ಪತ್ರಿಕಾ ಪ್ರಕಟಣೆ ನೀಡಿ ನಾನು 02-06-2020 ರಂದು ಬರೆದ ಪತ್ರವೇ ಮುಟ್ಟಿಲ್ಲ ಎಂಬ ಶಂಕೆ ಜನರಲ್ಲಿ ಹುಟ್ಟಿಸಲು ಪ್ರಯತ್ನಿಸಿದ್ದಾರೆ. ಏಕೆ ಈ ಪ್ರಯತ್ನ ಎನ್ನುವುದು ಅರ್ಥವಾಗಲಿಲ್ಲ. ತಮ್ಮ ಅಧಿಕೃತ ಇ-ಮೇಲ್ ಐಡಿಗೆ ಸಂಜೆ 6:43 ನಿಮಿಷಕ್ಕೆ ಪತ್ರ ಕಳುಹಿಸಲಾಗಿದೆ. ಅದರ ಸ್ಕ್ರೀನ್ ಶಾಟ್ ಕೂಡ ತಮ್ಮ ಪತ್ರದೊಂದಿಗೆ ಲಗತ್ತಿಸಿದೆ. ಅದೇ ದಿನ ತಮ್ಮ ಆಪ್ರ ಕಾರ್ಯದರ್ಶಿಯಾದ ಅಮರನಾಥ್ ಅವರ ಸಂಖ್ಯೆಗೂ ಸಹ ವಾಟ್ಸ್ ಅಪ್ ಮೂಲಕ ಕಳುಹಿಸಲಾಗಿದೆ. ತಲುಪಿರುವ ಬಗ್ಗೆ ದೂರವಾಣಿಯಲ್ಲಿ ಸಂಪರ್ಕಿಸಿ ಅವರಿಂದ ದೃಢಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ಪತ್ರವನ್ನು ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿಗಳಿಗೂ ಇಮೇಲ್ ಮೂಲಕ ಕಳುಹಿಸಲಾಗಿತ್ತು. ನನ್ನ 10-06-2020ರ ಪತ್ರ ತಲುಪಿದೆ ಎಂದು ಭಾವಿಸಿದೆ. ಆದಾಗ್ಯೂ ಸಭಾಧ್ಯಕ್ಷರ ಗಮನಕ್ಕೆ ಟ್ವೀಟರ್ ಮೂಲಕವೂ ಕೂಡ ಪತ್ರ ಹಾಗೂ ಗಂಭೀರವಾಗಿರುವ ದೂರು ಹಾಗೂ ಕೆಲವು ದಾಖಲಾತಿಗಳನ್ನು ಮಾತ್ರ ಕಳುಹಿಸಿರುವೆ ಎಂದು ಟ್ವೀಟ್ ಮಾಡಿದ್ದಾರೆ.

ಶಾಸಕ ಎಚ್ಕೆ ಪಾಟೀಲ್ ವಿಧಾನಸಭಾಧ್ಯಕ್ಷರಿಗೆ ಬರೆದ ಎರಡನೇಯ ಪತ್ರ

ಸಂಶಯಕ್ಕೀಡು ಮಾಡಿದ ವಿಧಾನಸಭಾ ಸಚಿವಾಲಯದ ನಡೆ

ಈಗಾಗಲೇ ಪಿಪಿಇ ಕಿಟ್ ಖರೀದಿಯಲ್ಲಿ ಭಾರಿ ಗೋಲ್ ಮಾಲ್ ಆಗಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ತನಿಖೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್ಕೆ ಪಾಟೀಲ್ ಕೂಡ ಒತ್ತಾಯಿಸಿದ್ದರು. ಆದರೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತ್ರ ತನಿಖೆಗೆ ಆದೇಶಿಸಿರಲಿಲ್ಲ. ಇದರಿಂದ ವಿಧಾನಸಭಾಧ್ಯಕ್ಷರ ನಡೆ ವ್ಯಾಪಕ ಟೀಕೆ ಹಾಗೂ ಸಂಶಯಕ್ಕೂ ಕಾರಣವಾಗಿತ್ತು. ಆದರೆ ಇದೀಗ ಮತ್ತೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಚ್ಕೆ ಪಾಟೀಲ್ ಇದೇ ವಿಚಾರವಾಗಿ ಪತ್ರ ಬರೆದಾಗಲೂ ಅವರ ಆಪ್ತ ಕಾರ್ಯದರ್ಶಿ ತೋರಿದ ಜಾಣತನ ಜನರಿಗೆ ಗೌಪ್ಯವಾಗೇನು ಉಳಿದಿಲ್ಲ. ಈ ಜಾಣತನ ವಿಧಾನಸಭಾಧ್ಯಕ್ಷರ ಮೇಲೆ ಮತ್ತಷ್ಟು ಸಂಶಯಕ್ಕೂ ಕಾರಣವಾಗುವುದರಲ್ಲಿ ಸಂದೇಹವಿಲ್ಲ.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ: ಸಿಬಿಐ ದಾಳಿ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಲಕ್ಷ್ಮೇಶ್ವರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ನಿವಾಸ ಹಾಗೂ ಕಚೇರಿ ಮೇಲೆ ಸಿಬಿಐ ದಾಳಿ ಖಂಡಿಸಿ ಲಕ್ಷ್ಮೇಶ್ವರ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣ್ಣದ ಶಿಗ್ಲಿ ನಾಕಾದಲ್ಲಿ ಟೈರಗೆ ಬೆಂಕಿ ಹಂಚಿ ಪ್ರತಿಭಟನೆ ಮಾಡಿದರು.

ಬಿಜೆಪಿಯಲ್ಲಿ ನಡೆಯುತ್ತಿದೆಯಂತೆ ಯಡಿಯೂರಪ್ಪ ಅವರನ್ನು ಹೊರ ಹಾಕುವ ಹುನ್ನಾರ?

ಬೆಂಗಳೂರು : ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮುಗಿ ಬಿದ್ದಿರುವುದಕ್ಕೆ ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ತಿರುಗೇಟು ನೀಡಿದ್ದಾರೆ.

ಮಣಗೂರ ಶಾಲೆಯಲ್ಲಿ ಪೋಷಣಾ ಅಭಿಯಾನ

ಉತ್ತರಪ್ರಭ ಸುದ್ದಿನಿಡಗುಂದಿ: ಪಟ್ಟಣದ ಹೊರವಲಯ ಮಣಗೂರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ, ಪೋಷಣಾ ಅಭಿಯಾನ ಜರುಗಿತು.ಪಟ್ಟಣ…

ಮುಂದುವರಿದ ಸಾರಿಗೆ ನೌಕರರ ಮುಷ್ಕರ: ಬಿಕೋ ಎನ್ನುತ್ತಿದೆ ಗಜೇಂದ್ರಗಡ ಬಸ್ ನಿಲ್ದಾಣ

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಒತ್ತಾಯಿಸಿ ಸಾರಿಗೆ ನೌಕರರ ಅನಿರ್ಧಿಷ್ಠಾವಧಿ ಮುಷ್ಕರ ಮೂರನೇ ದಿನಕ್ಕೆ ಮುಂದುವರೆದಿದೆ. ಹೀಗಾಗಿ ಗಜೇಂದ್ರಗಡ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಚಾರ ಇಲ್ಲದೇ, ಬಿಕೋ ಎನ್ನುತ್ತಿತ್ತು.