ಬೆಂಗಳೂರು: ರಂಗ ನಿರ್ದೇಶಕ, ನಟ ಮತ್ತು ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಮಹಾಮನೆ ಈ ಸಾಲಿನ ಮಕ್ಕಳ ಕಥಾ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಸಿವಗಂಗ ಪ್ರಕಾಶನದಿಂದ ಆಯ್ಕೆಯಾದ ಅತ್ಯುತ್ತಮ ಕತೆಗಳನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಕ್ಕಳ ಕಥಾ ಸ್ಪರ್ಧೆಯ ನಿಯಮಗಳು
- ಕಥೆಯನ್ನು ಮಕ್ಕಳೇ ತಮ್ಮ ಸ್ವಹಸ್ತದಿಂದ ಬರೆಯಬೇಕು
- ಕಥೆಯ ಕನ್ನಡದಲ್ಲೇ ಬರೆಯಬೇಕು
- ಕಥೆಯು A4 ಅಳತೆಯ ಹಾಳೆಯಲ್ಲಿ ಕೈ ಬರಹದಲ್ಲಿದ್ದು 9 ಐದು ಪುಟಗಳಷ್ಟೇ ಇರಬೇಕು
- ಐದುನೂರು (500) ಪದಗಳನ್ನೂ ಮೀರಿರಬಾರದು
- ಕಥೆಯನ್ನು ನಮಗೆ ತಲುಪಿಸುವ ಕೊನೆಯ ದಿನಾಂಕ 31/7/2020. ಆ ನಂತರ ಬಂದ ಕಥೆಯನ್ನು ಸ್ಪರ್ಧೆಗೆ ಸ್ವೀಕರಿಸುವುದಿಲ್ಲ.
- ತೀರ್ಪುಗಾರರ ಆಯ್ಕೆಯೇ ಅಂತಿಮ
- ಕಥೆಗಳನ್ನು ಕಳಿಸಲು ಯಾವುದೇ ಶುಲ್ಕವಿಲ್ಲ
- ಒಬ್ಬರು ಒಂದೇ ಕಥೆ ಕಳಿಸಲು ಅವಕಾಶ ಹಾಗೂ ಯಾವುದೇ ಕಾವ್ಯನಾಮ (Pen Name ) ದಿಂದ ಕಥೆಯನ್ನು ಬರೆದಿರಬಾರದು
- ಕೆಂಗೇರಿ ಉಪನಗರದ ಸುತ್ತಮುತ್ತಲಿನ ಬಡಾವಣೆಯ ಮಕ್ಕಳ ಅತ್ಯುತ್ತಮ 75 ಕಥೆಗಳನ್ನು ಹಾಗೂ ಉಳಿದ ಭಾಗದ 25 ಮಕ್ಕಳ ಅತ್ಯುತ್ತಮ ಕಥೆಗಳನ್ನು ಸ್ವರ್ಧೆಯ ಬಹುಮಾನಕ್ಕೆ ಆಯ್ಕಮಾಡಲಾಗುವುದು
- ಆಯ್ಕೆಯಾದ ಕಥೆಗಳನ್ನು ಪುಸ್ತಕ ರೂಪದಲ್ಲಿ ‘ಸಿವಗಂಗ ಪ್ರಕಾಶನ’ ದಿಂದ ಪ್ರಕಟಿಸಿ 2021 ಜನವರಿಯಲ್ಲಿ ಸಿವಗಂಗ ರಂಗಮಂದಿರದಲ್ಲಿ ಪುಸ್ತಕ ಸಮಾರಂಭ ನಡೆಸಿ ಬಿಡುಗಡೆ ಮಾಡಲಾಗುವುದು
- ಡಿಸೆಂಬರ್ 2020ರಲ್ಲಿ ಆಯ್ಕೆಯಾದ ಕಥೆಯ ಹಾಗೂ ಕಥೆಗಾರರ ಹೆಸರನ್ನು ಪ್ರಕಟಿಸಲಾಗುವುದು. ಈ ಕುರಿತು ಮಾಹಿತಿ ತಿಳಿಯಲು ಯಾರೂ ಕೂಡ ಪದೇ ಪದೇ ಫೋನ್ ಮಾಡಕೂಡದು
- ಕಥೆಯ ಹೆಸರು. ಕಥೆಗಾರರ ಹೆಸರು. ವಿಳಾಸ ಹಾಗೂ ಮೊಬೈಲ್ ನಂಬರನ್ನು ಸ್ಪುಟವಾಗಿ ಬರೆದಿರಬೇಕು
- ಸ್ಪರ್ಧೆಗೆ ಈಗಾಗಲೇ ಪ್ರಕಟವಾದ ಕಥೆ ಕಳಿಸಕೂಡದು. ಕಥೆಯು ಹೊಸದಾಗಿರಬೇಕು. ಮಕ್ಕಳ ಕಥೆಯಾಗಿರಬೇಕು.
- ಅಕ್ಷರ ದೋಷವಿಲ್ಲದ ಹಾಗೂ ವ್ಯಾಕರಣ ದೋಷವಿಲ್ಲದ ಹಾಗೂ ಸುಂದರ ಬರಹವುಳ್ಳ ಮತ್ತು ವಸ್ತು ವೈವಿಧ್ಯವಿರುವ ಉತ್ತಮ ಶೈಲಿಯ ನೀತಿ ಇರುವ ಕಥೆಗಳನ್ನು ಪ್ರಕಟಣೆಗೆ ಆಯ್ಕೆ ಮಾಡಲಾಗುವುದು
- ಆಯ್ಕೆಗಾರರ ತೀರ್ಪೇ ಅಂತಿಮ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ
ಕಥೆ ಬರೆಯಲು ನಿಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿ. ನಿಮ್ಮ ಮಕ್ಕಳಿಂದ ಚಂದ ಕಥೆ ನಮಗೆ ಬರಲಿ. ನಾಡಿಗೆ ತಲುಪಲಿ
ಕಥೆಗಳನ್ನು ಕಳುಹಿಸಬೇಕಾದ ವಿಳಾಸ:
ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ಸಿವಗಂಗ ರಂಗಮಂದಿರ, 3386 ಮಹಾಮನೆ, ಸರ್, ಎಂ, ವಿ ಲೇಔಟ್ 1ನೇ ವಿಭಾಗ , ಕೆಂಗೇರಿ ಉಪನಗರ, ಬೆಂಗಳೂರು 560060, ಮೊ: 9448970731