ಗದಗ: ಲಾಕ್ ಡೌನ್ ಹಿನ್ನೆಲೆ ಅದೆಷ್ಟೋ ಜನ ಒಂದಲ್ಲ ಒಂದು ಕಾರಣಕ್ಕೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ವೃದ್ಧನೊಬ್ಬ ಗೋಳಾಟ ಇದಕ್ಕೊಂದು ಉದಾಹರಣೆ.

ಇತ್ತಿಚೆಗಷ್ಟೆ ತನ್ನ ಮೊಮ್ಮಗಳನ್ನು ನೋಡಿಕೊಂಡು ಬರಲು ಗಜೇಂದ್ರಗಡ ಸಮೀಪದ ಪೋತನಾಳ ಗ್ರಾಮಕ್ಕೆ ವೃದ್ಧ ಬಿಜ್ಜಪ್ಪ ತೆಳೆದ್ದರು. ಗದುಗಿನ ಈ ವೃದ್ಧನಿಗೆ ಯಾರು ಇಲ್ಲ. ಇರುವ ಮೊಮ್ಮಗಳನ್ನು ಮದುವೆ ಮಾಡಿ ಕೊಟ್ಟ ಪರಿಣಾಮ ಆಕೆಯೂ ಗಂಡನ ಮನೆಯಲ್ಲಿದ್ದಾಳೆ. ಹೀಗಾಗಿ ಹೇಗೋ ಹರಸಾಹಸ ಪಟ್ಟು ಬಿಚ್ಚಪ್ಪ ಮೊಮ್ಮಗಳ ಊರಿಗೆ ಹೋಗಿದ್ದ. ಆದರೆ ಬರೋವಾಗ ಮಾತ್ರ ಯಾರದೋ ಬೈಕ್ ನಲ್ಲಿ ಬಂದಿದ್ದರಿಂದ ಅವರು ಗಜೇಂದ್ರಗಡದ ಇದ್ಗಾ ಬಳಿ ಇಳಿಸಿ ಹೋಗಿದ್ದಾರೆ. ಇದರಿಂದ ದಿಕ್ಕು ತೋಚದಂತಾಗಿ ವೃದ್ಧ ಬಿಚ್ಚಪ್ಪ ಇದ್ಗಾದಲ್ಲೆ ಟಿಕಾಣಿ ಹೋಡಿದ್ದಾರೆ. ಮೂರು ದಿನದಿಂದ ಅನ್ನ ನೀರಿಲ್ಲದೇ ನಿತ್ರಾಣನಾಗಿದ್ದ, ಮೂರನೇ ದಿನಕ್ಕೆ ಅನಿರೀಕ್ಷಿತವಾಗಿ ಯಾರದ್ದೋ ಕಣ್ಣಿಗೆ ಬಿದ್ದ ಪರಿಣಾಮ ಈ ವೃದ್ಧನ ವಿಷಯ ಸ್ಥಳೀಯರಿಗೆ ಗೊತ್ತಾಯಿತು.

ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇದರಿಂದ ಗುಣಮುಖನಾದ ನಂತರ ಬಿಚ್ಚಪ್ಪನನ್ನು ಗದುಗಿನಲ್ಲಿರುವ ತನ್ನ ಮನೆಗೆ ಬಿಡಲಾಯಿತು.

Leave a Reply

Your email address will not be published. Required fields are marked *

You May Also Like

ಬೆಳೆ ರಕ್ಷಣೆಗೊಬ್ಬ ಆಪ್ತ: ನೇತಾಡುವ ಖಾಲಿ ಬಿಯರ್ ಬಾಟಲ್ಲು!

ನರೇಗಲ್ಲ: ಖಾಲಿ ಕ್ವಾಟರು ಬಾಟ್ಲಿ ಯಾವುದಕ್ಕೂ ಬರಂಗಿಲ್ಲ ಅನ್ನೋ ತರಹ ಯೋಗರಾಜ್ ಭಟ್ರು ಹಾಡು ಬರದಿದ್ರು.…

ಡ್ರೈವರ್ ಕಂಡಕ್ಟರ್ ಗಳ ನಿತ್ಯ ಶೋಷಣೆಗೆ ಮುಕ್ತಿ ಎಂದು?

ಕೆಎಸ್ಆರ್ಟಿಸಿ ಚಾಲಕ ಹಾಗೂ ನಿರ್ವಾಹಕರು ಕೊರೋನಾ ವಾರಿಯರ್ಸ್ ಎಂದು ಬಾಯಿ ಮಾತಿಂದ ಹೇಳಿದರೆ ಸಾಲದು. ಪಾಪ..!, ಅವರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸುವ ಅವಶ್ಯಕತೆ ಇದೆ.

ಉಮೇಶ ಎಂಬ ಟೇಲರ ಹತ್ಯೆ ಖಂಡಿಸಿ ಗಲ್ಲು ಶಿಕ್ಷೆ ವಿಧಿಸಲು ರಾಜ್ಯ ಪಾಲರಿಗೆ ಮನವಿ

ಉತ್ತರಪ್ರಭ ಸದ್ದಿಮುಂಡರಗಿ: ತಾಲೂಕಿನ ದಂಡಾಧಿಕಾರಿಗಳು ವಿವಿಧ ಸಂಘಟನೆಗಳ ಮುಕಾಂತರ ಕನ್ಯಾಯ ಲಾಲ್ ಉಮೇಶ ಎಂಬ ಟೇಲರ್…

ಹುಬ್ಬಳ್ಳಿ :ಕೈಯಲ್ಲಿ ಜೀವ ಹಿಡಿದುಕೊಂಡು ಹೋಗಬೇಕು ಜಯನಗರದಲ್ಲಿ

ಅದು ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗ, ಅಲ್ಲಿ ನೀವು ಏನಾದರೂ ಸಂಚಾರ ಮಾಡಬೇಕು ಎಂದರೆ ಸ್ವಲ್ಪ ಎಚ್ಚರಿಕೆ ಇರಬೇಕು. ಸ್ವಲ್ಪ ಅಪ್ಪ ತಪ್ಪಿದರೆ ಸೊಂಟ,‌ಅಥವಾ ಕೈಕಾಲು ಮುರಿಯುವುದು ಗ್ಯಾರಂಟಿ. ಇದು ನಗರದ ಕಿಮ್ಸ್ ಆಸ್ಪತ್ರೆಯ ಎದುರಿಗಿನ ಜಯನಗರ ರಸ್ತೆ. ಮಳೆಯಾದರೂ ಅಂತೂ ಮಳೆಯ ನೀರು ಮನೆ ತುಂಬೆಲ್ಲಾ ನುಗ್ಗುತ್ತವೆ.