ಗದಗ: ಲಾಕ್ ಡೌನ್ ಹಿನ್ನೆಲೆ ಅದೆಷ್ಟೋ ಜನ ಒಂದಲ್ಲ ಒಂದು ಕಾರಣಕ್ಕೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ವೃದ್ಧನೊಬ್ಬ ಗೋಳಾಟ ಇದಕ್ಕೊಂದು ಉದಾಹರಣೆ.
ಇತ್ತಿಚೆಗಷ್ಟೆ ತನ್ನ ಮೊಮ್ಮಗಳನ್ನು ನೋಡಿಕೊಂಡು ಬರಲು ಗಜೇಂದ್ರಗಡ ಸಮೀಪದ ಪೋತನಾಳ ಗ್ರಾಮಕ್ಕೆ ವೃದ್ಧ ಬಿಜ್ಜಪ್ಪ ತೆಳೆದ್ದರು. ಗದುಗಿನ ಈ ವೃದ್ಧನಿಗೆ ಯಾರು ಇಲ್ಲ. ಇರುವ ಮೊಮ್ಮಗಳನ್ನು ಮದುವೆ ಮಾಡಿ ಕೊಟ್ಟ ಪರಿಣಾಮ ಆಕೆಯೂ ಗಂಡನ ಮನೆಯಲ್ಲಿದ್ದಾಳೆ. ಹೀಗಾಗಿ ಹೇಗೋ ಹರಸಾಹಸ ಪಟ್ಟು ಬಿಚ್ಚಪ್ಪ ಮೊಮ್ಮಗಳ ಊರಿಗೆ ಹೋಗಿದ್ದ. ಆದರೆ ಬರೋವಾಗ ಮಾತ್ರ ಯಾರದೋ ಬೈಕ್ ನಲ್ಲಿ ಬಂದಿದ್ದರಿಂದ ಅವರು ಗಜೇಂದ್ರಗಡದ ಇದ್ಗಾ ಬಳಿ ಇಳಿಸಿ ಹೋಗಿದ್ದಾರೆ. ಇದರಿಂದ ದಿಕ್ಕು ತೋಚದಂತಾಗಿ ವೃದ್ಧ ಬಿಚ್ಚಪ್ಪ ಇದ್ಗಾದಲ್ಲೆ ಟಿಕಾಣಿ ಹೋಡಿದ್ದಾರೆ. ಮೂರು ದಿನದಿಂದ ಅನ್ನ ನೀರಿಲ್ಲದೇ ನಿತ್ರಾಣನಾಗಿದ್ದ, ಮೂರನೇ ದಿನಕ್ಕೆ ಅನಿರೀಕ್ಷಿತವಾಗಿ ಯಾರದ್ದೋ ಕಣ್ಣಿಗೆ ಬಿದ್ದ ಪರಿಣಾಮ ಈ ವೃದ್ಧನ ವಿಷಯ ಸ್ಥಳೀಯರಿಗೆ ಗೊತ್ತಾಯಿತು.
ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇದರಿಂದ ಗುಣಮುಖನಾದ ನಂತರ ಬಿಚ್ಚಪ್ಪನನ್ನು ಗದುಗಿನಲ್ಲಿರುವ ತನ್ನ ಮನೆಗೆ ಬಿಡಲಾಯಿತು.