ರೋಣ : ತಾಲೂಕಿನ ಡಿ ಪೌಲ್ ಅಕ್ಯಾಡಮಿ ಶಾಲೆಯ ಶಿಕ್ಷಕನನ್ನು ಕೆಲಸದಿಂದ ವಜಾಗೊಳಿಸಿದ ಕಾರಣ ಮನನೊಂದು ಆತ್ಮ ಹತ್ಯೆಕ್ಕೆ ಯತ್ನಿಸಿದ ಘಟನೆ ನಡೆದಿದೆ.ಪಟ್ಟಣದ ಹೊರವಲಯದಲ್ಲಿ ಇರುವ ಡಿ ಪೌಲ್ ಅಕ್ಯಾಡಮಿ ಶಾಲೆಯಲ್ಲಿ ಬಹುದಿನಗಳಿಂದ ಒಂದಲ್ಲ ಒಂದು ದರ‍್ಘಟನೆಗಳು ನಡೆಯುತ್ತಲೇ ಇರುತ್ತವೆ. ಗುರುವಾರ ಸಹ ಶಿಕ್ಷಕನಾಗಿ ಸೇವೆ ಯಲ್ಲಿದ್ದ ಪಿ ನಾಗರಾಜ ಎಂಬ ವ್ಯಕ್ತಿಯನ್ನು ಸೇವೆಯಿಂದ ವಜಾಗೊಳಿಸಿ ಬೇರೆ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುತ್ತಾರೆ.


ಮನನೊಂದ ನಾಗಾರಾಜನು ಸರ್ ಹೀಗೆ ಮಧ್ಯದಲ್ಲಿ ನನ್ನನ್ನು ವಜಾಮಾಡಿದರೆ ಮುಂದೆ ನನ್ನ ಭವಿಷ್ಯಕ್ಕೆ ತುಂಬಾ ತೊಂದರೆಯಾಗುವದು ಎಂದು ಫಾದರಗೆ ಮನವಿ ಮಾಡಿಕೊಂಡ . ಫಾದರ್ ನೀನು ಈ ಸಧ್ಯ ಬಿಡು ನಿನಗೆ ಏಪ್ರಿಲ್ ವರೆಗೂ ವೇತನ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಅಷ್ಟೇ ಅಲ್ಲಾ ನನ್ನ ಪಿ ಎಫ್ ದುಡ್ಡು ಕೇಳಿದರೆ ನಾಲ್ಕು ಸಾವಿರ ದುಡ್ಡು ಕೇಳುವರು, ಹಾಗೂ ನನ್ನ ನಾಲ್ಕು ಚೆಕ್ ಪಡೆದು ಅದರಲ್ಲಿ ನನ್ನ ಖಾತೆಯಿಂದ 8000 ಸಾವಿರ ಹಣ ಪಡೆದಿದ್ದಾರೆ ಇದನ್ನೆಲ್ಲಾ ವಿಚಾರಿಸಲು ಹೋದರೆ ನನಗೆ ಅವಾಜ್ ಹಾಕಿ ಏನ್ ಮಾಡ್ತಿಯಾ ನೀನು ಮಾಡ್ಕೋ ಹೋಗು ಎಂದು ಗದರಿಸುವರು ಆದಕಾರಣ ನಾನು ಅಸಹಾಯಕನಾಗಿ ಅಲ್ಲಿಯೇ ವಿಷ ಸೇವಿಸಿ ಬಿದ್ದರೂ ಕೂಡಾ ಖ್ಯಾರೇ ಎನ್ನದ ಆಡಳಿತ ಮಂಡಳಿಯವರು ನನ್ನನ್ನು ನೋಡಿಯೂ ಸ್ವಲ್ಪವು ಮಾನವೀಯತೆ ತೋರದೆ ಹಾಗೇ ಹೋದರು ಎಂದು ನೇರವಾಗಿ ಆರೋಪ ಮಾಡಿದ ನಾಗರಾಜ.
ಅಲ್ಲಿಂದ ಹೇಗೂ ಮಾಡಿ ತಾಲೂಕ ಸರಕಾರಿ ಆಸ್ಪತ್ರೆ ಹೋಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಿಸಿ ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಇಂಧನ ದರ ಏರಿಕೆ ವಿರೋಧಿಸಿ ಸೈಕಲ್ ಏರಿ ಕಾಂಗ್ರೆಸ್ ನಾಯಕರ ಪ್ರತಿಭಟನೆ

ಬೆಂಗಳೂರು: ಕಳೆದ 15 ದಿನಗಳಿಂದ ನಿರಂತರವಾಗಿ ದೇಶಾದ್ಯಂತ ಇಂಧನ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ…

ಶೈಕ್ಷಣಿಕ ರಂಗಕ್ಕೆ ಲಿಂ,ತೋಂಟದ ಸಿದ್ದಲಿಂಗ ಶ್ರೀಗಳ ಕೊಡುಗೆ ಅಮೋಘ – ಎಸ್.ಎಸ್.ಪಟ್ಟಣಶೆಟ್ಚರ

ವರದಿ : ಗುಲಾಬಚಂದ ಜಾಧವಆಲಮಟ್ಟಿ : ಧಾಮಿ೯ಕತೆಯ ವೈಚಾರಿಕ ನೆಲೆಯಿಂದ ಎಲ್ಲರನ್ನೂ ಪ್ರೀತಿಯಿಂದ ಕಂಡಿರುವ ಲಿಂಗೈಕ್ಯ…

ಕೆಎಸ್ಆರ್ ಟಿ ಸಿ ಬ್ರ್ಯಾಂಡ್ ಕರ್ನಾಟಕದ ಕೈ ತಪ್ಪಿಲ್ಲ : ಸಚಿವ ಸವದಿ ಸ್ಪಷ್ಟನೆ

ಕೆಎಸ್ಆರ್ ಟಿಸಿ ಪದ ಮತ್ತು ಲೋಗೋವನ್ನು ಕೇರಳಪಾಲಾಗಿದೆ ಎಂಬ ಸುದ್ದಿ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿರಾಕರಿಸಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್ ಮಗನಿದ್ದ ಕಾರು ಅಪಘಾತ!

ದಾವಣಗೆರೆ : ಸಚಿವ ಜಗದೀಶ್ ಶೆಟ್ಟರ್ ಅವರ ಪುತ್ರನಿದ್ದ ಕಾರು ಅಪಘಾತಕ್ಕೆ ಈಡಾಗಿರುವ ಘಟನೆ ನಗರದ ಹಳೆಯ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.