ಬೆಂಗಳೂರು: ಮೂರನೇ ಹಂತದ ಲಾಕ್ ಡೌನ್ ಮುಗಿಯಲು ಇನ್ನೂ 7 ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಸದ್ಯ ಮುಂದಿನ ದೇಶದ ಸ್ಥಿತಿ ಹೇಗಿರುತ್ತದೆ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ.

ಒಂದು ವೇಳೆ ಲಾಕ್ ಡೌನ್ ಮುಂದುವರೆಸಿದರೆ, ಏನಿರುತ್ತದೆ ಎಂಬ ಕುರಿತು ಚರ್ಚೆಗಳು ಶುರುವಾಗಿವೆ. ಲಾಕ್ಡೌಲನ್ ಮುಗಿದರೆ, ವೈರಸ್ ಹಬ್ಬಿದರೆ ಏನು ಗತಿ? ಎಂಬ ಕುರಿತು ಕೂಡ ಚರ್ಚೆಗಳು ಪ್ರಾರಂಭವಾಗಿವೆ. ಈ ಎಲ್ಲ ಲೆಕ್ಕಾಚಾರದ ನಡುವೆ ಪ್ರಧಾನಿ ಮೋದಿ ಅವರು ಇಂದು ಮಧ್ಯಾಹ್ನ ಎಲ್ಲ ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. 

ಅಲ್ಲದೇ, ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಅವರು ಮಧ್ಯಾಹ್ನ 2ಕ್ಕೆ ಸಚಿವರು, ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ರಾಜ್ಯದ ಕೊರೋನಾ ಪ್ರಕರಣ, ಲಾಕ್ಡೌ ನ್ ನಿರ್ಬಂಧ, ಲಾಕ್ಡೌಂನ್ ಸಡಿಲಿಕೆ, ನಿರ್ವಹಣೆಗಳ ಬಗ್ಗೆ ವಿವರ ಪಡೆಯಲಿದ್ದಾರೆ.

ಒಂದು ವೇಳೆ ಲಾಕ್ ಡೌನ್ ಮುಂದುವರೆದರೂ ರಾಜ್ಯದಲ್ಲಿ ಹಲವು ಮಾರ್ಗಸೂಚಿಗಳನ್ನು ಕೈಗೊಳ್ಳಬಹುದು ಎನ್ನಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಅಂತರ್ ಜಿಲ್ಲಾ ಸಾರಿಗೆಗೆ ಅವಕಾಶ ಸಾಧ್ಯತೆಯಿದೆ. ಕಂಟೈನ್ಮೆಂಟ್ ಝೋನ್ ಬಿಟ್ಟು ಉಳಿದೆಡೆ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಬಹುದು. 

ಸರ್ಕಾರಿ, ಖಾಸಗಿ ಬಸ್, ಆಟೋ ರಿಕ್ಷಾ, ಟ್ಯಾಕ್ಸಿಗೆ ಅವಕಾಶ ಸಿಗಬಹುದು. ಶೇ. 50 ರಷ್ಟು ಬಸ್, ಪ್ರಯಾಣಿಕರಿಗೆ ಸಂಚರಿಸಲು ಅವಕಾಶ ನೀಡಬಹುದು. ಶಾಪಿಂಗ್ ಮಾಲ್, ಥಿಯೇಟರ್‍ ಗಳಿಗೆ ನಿರ್ಬಂಧ ಹೇರುವ ಸಾಧ್ಯದೆ ಇದೆ. ಧಾರಾವಾಹಿ, ಸಿನಿಮಾ ಹೊರಾಂಗಣ ಶೂಟಿಂಗ್ಗೂನ ನಿರ್ಬಂಧ ಮುಂದುವರಿಸಬಹುದು.

ದೇಗುಲ, ದೇವರ ಜಾತ್ರೆ, ಸಂತೆ, ಉತ್ಸವಗಳಿಗೆ ಬಹುತೇಕ ನಿರ್ಬಂಧ ಇರಬಹುದು. ಸರ್ಕಾರಿ, ಖಾಸಗಿ ಸಭೆ, ಸಮಾರಂಭಗಳಿಗೂ ಅವಕಾಶ ಕೊಡದಿರಬಹುದು. ಜೂನ್ ಮಧ್ಯಭಾಗ ಅಥವಾ ಜುಲೈನಲ್ಲಿ ಶಾಲಾ-ಕಾಲೇಜುಗಳ ಆರಂಭ ಆಗಬಹುದು.

Leave a Reply

Your email address will not be published. Required fields are marked *

You May Also Like

ನೇಪಾಳ ಮತ್ತು ಲಂಕಾದಲ್ಲಿ ಇಂಧನ ಬೆಲೆ ಅಗ್ಗವೇಕೆ: ವಿಶ್ವಂಭರ ಪ್ರಸಾದ್

ಸೀತೆಯ ನೇಪಾಳ ಹಾಗೂ ರಾವಣನ ಲಂಕಾದಲ್ಲಿ ಪೆಟ್ರೋಲ್ ದರ ಏಕೆ ಅಗ್ಗವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ವಿಶ್ವಂಭರ ಪ್ರಸಾದ್ ನಿಶಾದ್ ಬುಧವಾರ ರಾಜ್ಯಸಭೆಯಲ್ಲಿ ಪ್ರಶ್ನೆ ಮಾಡಿದರು. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಪ್ರಶ್ನಿಸಿದ ವಿಶ್ವಂಭರ ಪ್ರಸಾದ್, ಪೆಟ್ರೋಲ್ ದರವು ಸೀತಾ ಮಾತೆಯ ನೇಪಾಳ ಹಾಗೂ ರಾವಣರ ಲಂಕಾದಲ್ಲಿ ಅಗ್ಗವಾಗಿದೆ. ಹಾಗಿದ್ದರೆ ರಾಮ ಜನ್ಮಭೂಮಿ ಭಾರತದಲ್ಲಿ ಯಾವಾಗ ಕಡಿಮೆ ಮಾಡುತ್ತೀರಿ? ಎಂದು ಕೇಳಿದರು.
ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಅರುಣಕುಮಾರ ಮ ನರಗುಂದ. ಇವರು ವೃತ್ತಿಯಲ್ಲಿ ಹಿರೇಕೆರೂರಿನಲ್ಲಿ ನ್ಯಾಯಾಂಗ ಇಲಾಖೆಯ ನೌಕರ. ವೃತ್ತಿ ನ್ಯಾಯಾಂಗ ಇಲಾಖೆ ಆದರೆ ಸಾಹಿತ್ಯ ಕೃಷಿ ಇವರ ಪ್ರವೃತ್ತಿ.

ಗರ್ಭಿಣಿ ಪತ್ನಿ, ಮಗುವನ್ನು ಬಂಡಿಯಲ್ಲಿ ಕೂರಿಸಿಕೊಂಡು 700 ಕಿ.ಮೀ ನಡೆದ ಪತಿ!

ಇಲ್ಲೊಬ್ಬ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಯನ್ನು ಗಾಡಿ ಬಂಡಿಯಲ್ಲಿ ಕೂರಿಸಿಕೊಂಡು ಸುಮಾರು 700 ಕಿ.ಮೀ ಎಳೆದುಕೊಂಡು ಬಂದಿರುವ ಘಟನೆ ನಡೆದಿದೆ.

ಮದುವೆಗೆ ಅಡ್ಡಿಯಾಗು ಆತಂಕದಿಂದ ಸೋಂಕು ಬಚ್ಚಿಟ್ಟ ವ್ಯಕ್ತಿ ಸಾವು

ಕಾರವಾರ : ಮದುವೆಗೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಕೊರೊನಾ ಸೋಂಕು ಇರುವುದನ್ನು ಮುಚ್ಚಿಟ್ಟ ವ್ಯಕ್ತಿ ಸದ್ಯ…