ದಾವಣಗೆರೆ: ಅಂತರ್ ರಾಜ್ಯ ಕಾರ್ಮಿಕರು ತಮ್ಮ ರಾಜ್ಯಗಲಿಗೆ ಹೋಗಲು ಸರ್ಕಾರ ಸೇವಾ ಸಿಂಧುನಲ್ಲಿ ಆನ್ಲೈನ್ ಅರ್ಜಿ ಹಾಕಲು ಪರದಾಡುವಂತಾಗಿದೆ.
ದಾವಣಗೆರೆಯಲ್ಲಿಂದು ಬೆಳಿಗ್ಗೆಯಿಂದಲೇ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಿಗಳು ತನ್ನ ತವರಿಗೆ ಹೋಗಲು ಹರಸಾಹಸ ಪಡುತ್ತಿದ್ದು, ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಲಾಕ್ಡೌನ್ ಕಾರಣದಿಂದಾಗಿ ಅತಂತ್ರವಾಗಿರುವ ಇವರು, ಹೊರ ರಾಜ್ಯಗಳಿಗೆ ತೆರಳಲು ಹಾಗೂ ರಾಜ್ಯದೊಳಗಿನ ತಮ್ಮ ತವರಿಗೆ ಮರಳಲು ರಾಜ್ಯ ಸರಕಾರ ಸೇವಾಸಿಂಧು ಆನ್ಲೈನ್ ಮೂಲಕ ಅವಕಾಶ ಮಾಡಿಕೊಟ್ಟಿದೆ. ಅದಕ್ಕಾಗಿ ನಗರದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ, ಮಹಾನಗರಪಾಲಿಕೆ, ತಹಸೀಲ್ದಾರ್ ಕಚೇರಿ ಸೇರಿದಂತೆ ಹರಿಹರ ನಗರಸಭೆ, ಚನ್ನಗಿರಿ ಪುರಸಭೆ. ಹೊನ್ನಾಳಿ ಮತ್ತು ಜಗಳೂರಿನ ಪಟ್ಟಣ ಪಂಚಾಯ್ತಿಗಳ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದೆ. ಆದರೆ ಭಾಷಾ ಸಮಸ್ಯೆ, ಅಕ್ಷರ ಬಾರದೇ ಇರುವುದು ಇವರಿಗೆ ತಲೆ ನೋವಾಗಿದೆ. ಅಲ್ಲದೇ ನಗರದಲ್ಲಿನ ಸೇವಾಕೇಂದ್ರಗಳು ಬಂದ್ ಆಗಿದ್ದರೂ, ಅವುಗಳ ತಲಾಷೆಯಲ್ಲಿ ಅನ್ಯರಾಜ್ಯದವರು ಇದ್ದಾರೆ. ಇನ್ನೊಂದೆಡೆ ದಾವಣಗೆರೆಯಲ್ಲಿ ಸೋಂಕಿತ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ನಾನಾ ಕಾರಣಗಳನ್ನು ಹೇಳಿ ಹೊರ ಜಿಲ್ಲೆಗೂ ಹೋಗುವವರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಹೇಗೆ ಅಪ್ಲೀಕೇಶನ್ ಹಾಕಬೇಕೆಂದು ತಿಳಿಯುತ್ತಿಲ್ಲ. ಈ ನಡುವೆ ಬಿಸಿಲಿನ ತಾಪ ಹೆಚ್ಚಿದ ಹಿನ್ನೆಲೆಯಲ್ಲಿ ಜನರು ಸಾಲಿನಲ್ಲಿ ನಿಲ್ಲಲಾಗದೆ ತಮ್ಮ ಚಪ್ಪಲಿಗಳನ್ನು ಗುರುತಿಗಾಗಿ ಇಡುತ್ತಿರುವುದು ದೃಶ್ಯ ಕಂಡು ಬಂದವು.