ಕೃಷ್ಣಾಪುರ ಮಹಿಳೆಗೆ ಕೊರೋನಾ ಪಾಸಿಟಿವ್: ಜನರಲ್ಲಿ ಆತಂಕ ಹಲವರ ಕ್ವಾರಂಟೈನ್!

ಬಾಗಲಕೋಟೆ : ಬಾದಾಮಿ ಮೂಲದ ಕೊರೊನಾ ಸೋಂಕಿತ 23 ವರ್ಷದ ಗರ್ಭಿಣಿಯಿಂದ ನೂರಾರು ಜನರಲ್ಲಿ ಆತಂಕ ಮನೆ ಮಾಡಿದೆ.

ಗರ್ಭಿಣಿಯೊಬ್ಬರಲ್ಲಿ ಭಾನುವಾರ ಸೋಂಕು ಇರುವುದು ಖಚಿತವಾಗಿತ್ತು. 5 ತಿಂಗಳ ಗರ್ಭಿಣಿಯಾಗಿರುವ ಮಹಿಳೆ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದಾರೆ. ಈ ಹಿಂದೆ ಸೋಂಕಿತ ಮಹಿಳೆ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಅಲ್ಲಿಂದ ಗದಗ ಜಿಲ್ಲೆಯ ಕೃಷ್ಣಾಪುರ ಗ್ರಾಮದಲ್ಲಿರುವ ತನ್ನ ಪೋಷಕರ ಮನೆಗೂ ತೆರಳಿದ್ದರು. ಎರಡು ವಾರಗಳ ಬಳಿಕ ಮತ್ತೆ ಬಾಗಲಕೋಟೆಯ ಅತ್ತೆ ಮನೆಗೆ ತೆರಳಿದ್ದರು.

ಆನಂತರ ಉಸಿರಾಟದ ತೊಂದರೆಯಿಂದಾಗಿ 3 ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗಿದ್ದು, ಅದು ಇರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ನಾಲ್ವರು ವೈದ್ಯರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಅಲ್ಲದೇ, ಮಹಿಳೆಯ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ.

Leave a Reply

Your email address will not be published. Required fields are marked *

You May Also Like

ಸಾವನ್ನು ಗೆದ್ದು ಬಂದ 8 ತಿಂಗಳ ಮಗು

ಪಾಸಿಟೀವ್ ಒಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 8 ತಿಂಗಳ ಹೆಣ್ಣು ಮಗು ಗುಣಮುಖವಾಗಿದ್ದು ಸಾವನ್ನೆ ಗೆದ್ದು ಬಂದಿದೆ.

ರಾಗ ಪೊಲ್ಕ್ ಪ್ಯೂಜನ್ ಬ್ಯಾಂಡ್ ವತಿಯಿಂದ ಸಂಗೀತ ತರಗತಿಗಳು

ರಾಗ ಪೊಲ್ಕ್ ಪ್ಯೂಜನ್ ಬ್ಯಾಂಡ್ ವತಿಯಿಂದ ಗದಗನಲ್ಲಿ ಪ್ರಪ್ರಥಮ ಬಾರಿಗೆ ಆರು ವಿವಿಧ ಸಂಗೀತ ವಾದ್ಯಗಳನ್ನು ಕಲಿಯುವ ಆಶಕ್ತಿಯುಳ್ಳ ಸಂಗೀತ ಪ್ರೀಯರಿಗೆ ಅದರಲ್ಲಿ ವಿಶೇಷವಾಗಿ ಕೊಳಲು, ಡಿಜಂಬೆ, ತಬಲಾ, ಗೀಟಾರ್, ಕಾಜನ, ಕೀ ಬೋರ್ಡ, ಧೋಲ್ ತಾಶಾ ಸಂಗೀತ ತರಗತಿಗಳು ಇದೇ ತಿಂಗಳು ಜೂನ್

ಕೊರೊನಾ ವೈರಸ್ ತನಿಖೆಗೆ ಒಪ್ಪಿಗೆ ಸೂಚಿಸಿತೆ ಚೀನಾ?

ಕೊರೋನಾ ವೈರಸ್ ಮೂಲದ ಬಗ್ಗೆ ತನಿಖೆಗೆ ಚೀನಾ ಒಪ್ಪಿಕೊಂಡಿದೆಯೇ? ಎಂಬ ಪ್ರಶ್ನೆಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಿವೋ ಲಿಜಿಯಾನ್ ಪ್ರತಿಕ್ರಿಯಿಸಿದ್ದಾರೆ.

ಅರಣ್ಯಗಳ ಅಂಚಿನಲ್ಲಿ 650 ಕಿ.ಮೀ ರೈಲ್ವೆ ಬ್ಯಾರಿಕೇಡ್ ಹಾಕುವ ಗುರಿ : ಅರಣ್ಯ ಸಚಿವ ಆನಂದ್ ಸಿಂಗ್

ಕಾಡಂಚಿನ ಗ್ರಾಮಗಳಲ್ಲಿ ಪದೆ ಪದೇ ಜಾನುವಾರಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಇಂದು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕುಂದಕೆರೆ ವಲಯಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದರು.