ಬೆಂಗಳೂರು: ಇತ್ತಿಚೆಗಷ್ಟೆ ನಿಧನ ಹೊಂದಿದ ನಟ ಚಿರಂಜೀವಿ ಸರ್ಜಾ ಬಹುಬೇಗ ಮರೆಯುವಂತಹ ನಟನಲ್ಲ. ಅದರಲ್ಲೂ 10 ವರ್ಷದಿಂದ ಪ್ರೀತಿಸಿ ಮದುವೆಯಾದ ಮಡದಿಯ ಪಾಡು ಏನಾಗಿರಬೇಡ. ಇನ್ನು ವಿಚಿತ್ರ ಎಂದರೆ ಚಿರು ಪತ್ನಿ ಮೇಘನಾ ಈಗ ಗರ್ಭೀಣಿ ಇಂಥ ಸಂದರ್ಭದಲ್ಲಿ ಪತಿಯ ಅಗಲಿಕೆಯ ದುಖ: ಸಹಿಸುವುದು ಹೇಗೆ? ಇಂದು ಪತಿ ಚಿರು ನೆನೆದು ಮೇಘನಾ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಮೇಘನ ಬರೆದ ಪ್ರತಿ ಪದಗಳು ಎಂಥ ಕಲ್ಲು ಹೃದಯವನ್ನು ಕರಗಿಸುವಂತಿದೆ.

ಮೇಘನಾ ಮಾಡಿದ ಟ್ವೀಟ್
ಚಿರು ಬಾರಿ-ಬಾರಿ ಯತ್ನಿಸಿದರು ನನ್ನ ಮನದಾಳದ ಮಾತನ್ನು ಪದಗಳಲ್ಲಿ ವರ್ಣಿಸಲಾಗದ ಪರಿಸ್ಥಿತಿ ನನ್ನದು. ನಿನ್ನ ಮೇಲಿನ ಪ್ರೀತಿ, ಹುಚ್ಚು ವಿಶ್ವಾಸದ ಬಗ್ಗೆ ಮಾತನಾಡಲು ಶಬ್ಧಕೋಶದಲ್ಲಿ ಪದಗಳೇ ಸಾಲುತ್ತಿಲ್ಲ. ನನ್ನ ಸ್ನೇಹಿತ, ನನ್ನ ಪ್ರೇಮಿ, ನನ್ನ ಹಿತೈಷಿ, ನನ್ನ ಮಗು, ನನ್ನ ಸರ್ವಸ್ವ, ನನ್ನ ಪತಿ. ನೀನು ಇದೆಲ್ಲದಕ್ಕಿಂತ ಹೆಚ್ಚು. ನೀನು ನನ್ನ ಆತ್ಮದ ಅರ್ಧ ಭಾಗ ಚಿರು.
ಪ್ರತಿ ದಿನ ನಮ್ಮ ಮನೆಯ ಬಾಗಿಲು ನೋಡುತ್ತ.. ಅಗೋ ನೀ ಬಂದೇ ಬಿಟ್ಟೆ, ನಾ ಮನೆಗೆ ಬಂದೆ ಅಂತ ಹೇಳುತ್ತ ನೀನು ಬಂದೇ ಬಿಡುವೆ ಎಂಬ ಒಂದು ಆಸೆ. ನೀ ಬರದಿದ್ದಾಗ ನನ್ನ ಆತ್ಮವನ್ನೆ ಸುಡುವಂತ ಒಂದು ನೋವು ನನ್ನಲ್ಲಿ. ಪ್ರತಿದಿನದ ಪ್ರತಿಕ್ಷಣ ನಿನ್ನನ್ನು ಸ್ಪರ್ಷಿಸಲಾಗದೇ ನನ್ನ ಕಾಲ್ಕೆಳಗಿನ ಭೂಮಿ ಕುಸಿಯುವಂತೆ ಒಂದು ನಡುಕ. ಸಾವಿರ ಬಾರಿ ನಿಧಾನವಾಗಿ ನೋವಿನಿಂದ ಸಾಯುವಂತೆ. ಪ್ರತಿ ಬಾರಿ ನಾನು ನೋವುಂಡಾಗ, ಪ್ರತಿ ಬಾರಿ ನಾನು ಕಣ್ಣೀರು ಹಾಕಿದಾಗ ದೈವತೀತ ಅದ್ಭುತದಂತೆ ನೀನು ಇಲ್ಲೆ ನನ್ನ ಸುತ್ತ ನಿನ್ನ ಪ್ರೀತಿಯ ರಕ್ಷಾ ಕವಚದಲ್ಲಿ ಆರೈಕೆ ಮಾಡುತ್ತಿರುವ ಭಾವನೆ ನನಗೆ. ಸದಾಕಾಲ ನನ್ನ ರಕ್ಷಿಸುತ್ತಿರುವ ಕಾವಲು ದೈವ.
ಎಷ್ಟು ಅಪಾರ ನಿನ್ನ ಪ್ರೀತಿ, ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಲು ಮನಸಾಗಲಿಲ್ಲ ನಿನಗೆ. ಹೋಗುತ್ತ ನಮ್ಮ ಪ್ರೀತಿಯ ಸಂಕೇತವಾಗಿ ಒಂದು ಪುಟ್ಟ ಹರುಷವನ್ನು ನನಗೆ ಕೊಟ್ಟು ಹೋಗಿದ್ದಿಯಾ. ಈ ಕಾಣಿಕೆಗೆ ನಾನು ಚಿರ ಋಣಿ. ನಮ್ಮ ಈ ಪುಟ್ಟ ಹರುಷವನ್ನು ಭೂಮಿಗೆ ತರಲು ಕಾತುರ ನನಗೆ. ಮಗುವಾಗಿ ನಿನ್ನ ಮತ್ತೆ ಮುದ್ದಿಸುವ ಕಾತುರ. ನಿನ್ನ ಚಿರುನಗೆಯ ನೋಡುವ ಕಾತುರ. ನೀನಿದ್ದಲ್ಲೆಲ್ಲ ಬೆಳಕು ಚೆಲ್ಲುತ್ತಿದ್ದ, ಎಲ್ಲರನ್ನು ಹರ್ಷಿಸುತ್ತಿದ್ದ ಆ ನಗು ಮತ್ತೊಮ್ಮೆ ಕೇಳೊ ಕಾತುರ. ನೀನು ಮತ್ತೆ ಬರುವ ವೇಳೆಗಾಗಿ ನಾನು ಕಾಯುವೆ. ನೀ ನನಗಾಗಿ ಕಾಯು ದಿಗಂತದ ಆ ಬದಿಯಲಿ. ನನ್ನ ಕೊನೆಯ ಉಸಿರು ಇರುವವರೆಗೂ ನೀನು ಚಿರಂಜೀವಿ. ನೀನು ‌ನನ್ನಲ್ಲೆ ಇರುವೆ.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ನಲ್ಲಿ ಹುಟ್ಟಿದ ಮಕ್ಕಳಿಗೆ ಕ್ವಾರಂಟೈನ್, ಸ್ಯಾನಿಟೈಸರ್ ಎಂದು ನಾಮಕರಣ!

ಭೋಪಾಲ್: ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ಕ್ವಾರಂಟೈನ್ ಹಾಗೂ ಸ್ಯಾನಿಟೈಸರ್ ಎಂದು ಹೆಸರಿಟ್ಟಿರುವ…

ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಕುರಿಕಾರ ಗೆಲುವು ಖಚಿತ: ಮಾಜಿ ಶಾಸಕ ಜಿ.ಎಸ್.ಪಾಟೀಲ

ಉತ್ತರಪ್ರಭ ನರೆಗಲ್: ವಿಧಾನ ಪರಿಷತ್‍ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ…

ಆಸ್ಪತ್ರೆಯ ಮುಂದೆಯೇ ಮಹಿಳೆಯ ತಲೆಯಮೇಲೆ ಹರಿದ ಟ್ರಾಕ್ಟರ್

ಸ್ಕೂಟಿ ಮೇಲೆ ಹೋಗುತ್ತಿದ್ದ ಮಹಿಳೆಯೊಬ್ಬರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ, ಹಿಂಬಾಗದಲ್ಲಿದ್ದ ಟ್ರಾಕ್ಟರ್ ಮಹಿಳೆಯ ತಲೆಯ ಮೇಲೆ ಹರಿದು ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ಬಿ ಆರ್ ಪಾಟೀಲ್ ಆಸ್ಪತ್ರೆಯ ಮುಂಬಾಗದಲ್ಲಿ ನಡೆದಿದೆ.

ಶೀಘ್ರವೇ ಅಂಗನವಾಡಿ ಬಾಗಿಲು ತೆರೆಯಲು ಸರ್ಕಾರ ನಿರ್ಧಾರ

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಬಂದ್ ಆಗಿದ್ದ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.