ಆತ್ಮಿಯರೆ,

ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕವನ ಕಳುಹಿಸಿದವರು ಗಿರಿಜಾ ದಿವಾನ್ ಬಿಸಿಲು ನಾಡು ಎಂದೇ ಪ್ರಸಿದ್ದಿ ಆಗಿರುವ ರಾಯಚೂರು ಜಿಲ್ಲೆಯ ಚಿನ್ನದ ನಾಡಾದ ಹಟ್ಟಿ ಚಿನ್ನದ ಗಣಿಯ ನಿವಾಸಿಯಾದ ಗಿರಿಜಾ ಇಂಜನೀಯರಿಂಗ್ ವಿದ್ಯಾರ್ಥಿನಿ. ಬಿಸಿಲ ಬೇಗೆಯಲಿ ನೊಂದ ಮನಸಿನ ಭಾವನೆಗಳನು ಬರಹ ರೂಪದಲ್ಲಿ ಹಾಳೆಗೆ ಇಳಿಸುವ ಪ್ರಯತ್ನವನ್ನಿಲ್ಲಿ ಗಿರಿಜಾ ಮಾಡಿದ್ದಾರೆ. ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಸಾಹಿತ್ಯದ ಜ್ಞಾನ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಇಂಜನೀಯರಿಂಗ್ ಓದುತ್ತಿದ್ದರೂ ಕೂಡ ಗಿರಿಜಾ ಅವರು ಬರೆಯುವ ಗೀಳಿಗೆ ಅಂಟಿಕೊಂಡಿದ್ದು ತುಂಬ ಸಂತಸ. ಕೊರೋನಾ ದಿಂದ ಮನುಕುಲಕ್ಕೆ ಆದ ಅರಿವನ್ನು ಅಕ್ಷರದ ರೂಪಕ್ಕಿಳಿಸುವ ಮೂಲಕ ಗಿರಿಜಾ ದಿವಾನ್ ಕರೋನಾ-ಹೈರಾಣ ಕವನವನ್ನು ಕಟ್ಟಿಕೊಟ್ಟಿದ್ದಾರೆ.

ಕರೋನ-ಹೈರಾಣ

ಕೊರೋನ ನೀ ಮಾಡುತ್ತಿರುವೆ ನಮ್ಮೆಲ್ಲರನ್ನು ಹೈರಾಣ

ಆದರೂ ನೀ ಮಾಡಿದೆ ಮಾಲಿನ್ಯ ತಡೆದು ಭೂ ತಾಯಿಗೊಂದು ಸನ್ಮಾನ

ಬಿತ್ತರಿಸುತ್ತಿರುವೆ ಸಂದೇಶವ ನಾನು

ಎಂದು ಮೆರೆಯದಿರು ಮನುಜ ನಿಸರ್ಗ ಮಾತೆಯನು

ತಾಯಿನಾಡು, ದೇಶ-ಭಾಷೆ ಮರೆತು

ರೆಕ್ಕೆ ಕಟ್ಟಿ ವಿದೇಶಕ್ಕೆ ಹಾರಿ ಹೋದ ಮನುಜನಿಗೆ ನೀ ತಿಳಿಸಿಕೊಟ್ಟೆ,

ನಿನ್ನ ತಾಯಿನಾಡೆ ನಿನಗೆ ಕೊನೆಗಾಸರೆ ಎಂದು

ಪಿಜ್ಜಾ –ಬರ್ಗರ್-ಕೆಎಫ್ಸಿ ಎಂದೂ ಆಗದು  

ನಿನ್ನ ತಾಯಿಯ ಕೈರುಚಿ ಗಿಂತಲೂ ಮುಂದು

ಆದರೂ ನಮ್ಮದೊಂದು ವಿನಂತಿ ನಿನ್ನಲ್ಲಿ

ವಿರಾಮ ಕೊಡು ನಿನ್ನ ಈ ಶಿಕ್ಷೆಯಲ್ಲಿ

ಬಲಿಯಾಗುತ್ತಿಹವು ಎಷ್ಟೋ ಮುಗ್ಧ ಜೀವಿಗಳು

ಹಸಿವೆಯಿಂದ ತಲ್ಲಣಿಸುತ್ತಿಹವು ಪ್ರಾಣಿಪಕ್ಷಿಗಳು

ಅರಿವಾಯಿತು ಮನುಕುಲಕೆ

ರೈತ ಬೆಳೆದ ಅಕ್ಕಿ, ಗೋಧಿ, ಧಾನ್ಯಗಳಿಗುಂಟು ಬೆಲೆ ಎಂದು

ನಾವು ಕೂಡಿಟ್ಟ ಕೋಟಿಗಲ್ಲವೆಂದು

ದುಡ್ಡೆ ದೊಡ್ಡಪ್ಪ ಎನ್ನುವ ದುರಾಸೆಯೊಂದು ದೂರವಾಯಿತು

ನಮ್ಮೂರೆ ನಮಗೆ ಸವಿಬೆಲ್ಲ ಎನ್ನುವುದು ಗೊತ್ತಾಯಿತು

ಗಿರಿಜಾ ದಿವಾನ್

Leave a Reply

Your email address will not be published. Required fields are marked *

You May Also Like

ಕೊರೋನಾ ಜಾಗೃತಿ: ಹಣ್ಣು, ತರಕಾರಿ ತೊಳೆಯುವಾಗ ಎಚ್ಚರ!

ಕೊರೋನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ವೈರಸ್ ನಿರ್ಮೂಲನೆಗೆ ಶುಚಿತ್ವ ಕಾಪಾಡಿಕೊಳ್ಳುವುದು ಅಗತ್ಯ. ದಿನಕ್ಕೆ ಐದಾರು ಸಲ…

ಕೋವಿಡ್-19 ನಿಯಂತ್ರಣ : ಜಿಲ್ಲೆಯಲ್ಲಿ 2 ವಾರ ಪ್ರತಿಬಂಧಕಾಜ್ಞೆ ಮುಂದುವರಿಕೆ

ಕೋವಿಡ್ -19 ಹರಡದಂತೆ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದನ್ವಯ ಮುಂದಿನ ಎರಡು ವಾರಗಳವರೆಗೆ ನಿಗದಿತ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ಸಂಚಾರ ನಿಷೇಧಿಸಿದೆ.

ರಾಜ್ಯದಲ್ಲಿಂದು 515 ಕೊರೊನಾ ಸೋಂಕಿತರಲ್ಲಿ 482 ಕೇಸ್ ಗೆ ಅಂತರಾಜ್ಯ ಹಿನ್ನೆಲೆ: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 515 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4835 ಕ್ಕೆ ಏರಿಕೆಯಾದಂತಾಗಿದೆ.

ರಾಜ್ಯದಲ್ಲಿಂದು ಕೊರೊನಾ ಮರಣ ಮೃದಂಗ: ಒಂದೇ ದಿನಕ್ಕೆ 42 ಸಾವು, 1839 ಸೋಂಕಿತರು!

ಬೆಂಗಳೂರು: ರಾಜ್ಯದಲ್ಲಿಂದು 1839 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ದೃಢಪಟ್ಟ ಸೋಂಕಿತರಲ್ಲಿ…