ಬೆಂಗಳೂರು: ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಲಾಕ್ ಡೌನ್ ಹಿನ್ನೆಲೆಯಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ಆಚರಿಸಲು ಅವರಿಗೆ ಆಗುತ್ತಿಲ್ಲ. ಹೀಗಾಗಿ ಕುಟುಂಬಸ್ಥರೊಂದಿಗೆ ಸಂಭ್ರಮ ಆಚರಿಸಿದ್ದಾರೆ.

ರಕ್ಷಿತ್ ಶೆಟ್ಟಿ ಸದ್ಯ 777 ಚಾರ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಾಕ್‌ಡೌನ್‌ ಗೂ ಮುನ್ನ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಹೊರ ರಾಜ್ಯದ ಲೊಕೇಷನ್‌ಗಳಿಗೆ ಇಡೀ ಚಿತ್ರತಂಡ ತೆರಳಿತ್ತು. ಆದರೆ, ಲಾಕ್ ಡೌನ್ ನಿಂದಾಗಿ ರಕ್ಷಿತ್‌ ಶೆಟ್ಟಿ ಮತ್ತು ಟೀಂ ಸೆಲ್ಫ್ ಕ್ವಾರಂಟೈನ್ ನಲ್ಲಿ ಇರಬೇಕಾಯಿತು. ಈಗ ಅದೇ 777 ಚಾರ್ಲಿ ಟೀಮ್‌ನಿಂದ ರಕ್ಷಿತ್‌ ಜನ್ಮದಿನಕ್ಕೆ ವಿಶೇಷ ಗಿಫ್ಟ್‌ ಸಿಗುತ್ತಿದೆ.

ಈ ಚಿತ್ರದಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಒಡನಾಟದ ಕಥೆ ಇದೆ. ಕಿರಣ್‌ ರಾಜ್‌ ನಿರ್ದೇಶನ ಮಾಡುತ್ತಿದ್ದಾರೆ.

ಅವನೇ ಶ್ರೀಮನ್ನಾರಾಯಣ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್‌ ಮಾಡಲಿಲ್ಲ. ಹೀಗಾಗಿ ರಕ್ಷಿತ್ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಹಾಡು ನಿಲ್ಲಿಸಿದ ಸಾವಿರಾರು ಹಾಡುಗಳ ಸರದಾರ ಎಸ್ಪಿಬಿ

ಎದೆ ತುಂಬಿ ಹಾಡುವ ಮೂಲಕ ಜನರ ಮನಗೆದ್ದು ಲಕ್ಷಾಂತರ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಎಸ್ಪಿಬಿ ಹಾಡು ಯಾರಿಗೆ ಇಷ್ಟವಿಲ್ಲ ಹೇಳಿ. ಆ ಹೆಸರಲ್ಲಿಯೇ ಒಂದು ಕಂಠವಿದೆ, ರೋಮಾಂಚನವಿದೆ. ಆಕರ್ಶಣೆ ಇದೆ. ಆದರೆ ಇಂದು ತೀವ್ರ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎನ್ನುವುದು ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ಈಗಿನಿಂದಲೇ ಹೊಸ ಗೆಟಪ್ ನಲ್ಲಿ ಬರಲು ತಯಾರಾಗುತ್ತಿದ್ದಾರೆ ಸುದೀಪ್!

ಲಾಕ್ ಡೌನ್ ಅವಧಿಯಲ್ಲಿ ಫ್ಯಾಂಟಮ್ ಕೆಲಸದಲ್ಲಿ ಸುದೀಪ್ ತೊಡಗಿಸಿಕೊಂಡಿದ್ದಾರೆ. ತಮ್ಮ ಮುಂದಿನ ಕಮರ್ಷಿಯಲ್ ಆಕ್ಷನ್ ಮೂವಿಗಾಗಿ ಹೊಸ ಗೆಟಪ್ ಪಡೆದಿದ್ದಾರೆ.