ಇವತ್ತಿನ ಕೊರೋನಾ ಕಾವ್ಯ ಸರಣಿಗೆ ಕಾವ್ಯ ಕಳುಹಿಸಿದವರು ನಂರುಶಿ ಕುಂಬಾರ ಅವರು, ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ಗ್ರಾಮದವರು. ಸದ್ಯ ಬೆಂಗಳುರಿನ ಮೆಟ್ರೋ ಉದ್ಯೋಗಿಯಾಗಿರುವ ನಂರುಶಿ ಅವರು ಗಜಲ್ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕರಾದ ಕೃತಿಗಳು ಈಗಾಗಲೇ ಹೊರತಂದಿದ್ದು, ತಮ್ಮ ಗಜಲ್ ಮೂಲಕ ಕೊರೋನಾ ವೈರಸ್ ನಿಂದಲೇ ಮಾತನಾಡಿಸಿದ್ದಾರೆ.

ಗಜಲ್

ವುಹಾನ್ ನಿಂದ ಹುಟ್ಟಿದ ಅಗೋಚರ ಶಕ್ತಿ ಪಡೆದ ಕೊರೋನಾ ನಾನು

ಅಸುರರ ವರಪುತ್ರನಾಗಿ ಜನಿಸಿ ನಿಮ್ಮಲಿ ಮೆರೆದ ಕೊರೋನಾ ನಾನು

ಊರು ತಿರುಗುವವರನು ಕೈ-ಕಾಲು ಮುರಿದು ಮನೆಯಲಿ ಬಂಧಿ ಮಾಡಿರುವೆ

ಹೊರ ಬಂದವರ ಒಳಹೊಕ್ಕು ನಿಧಾನದಿ ಬರೆ ಎಳೆದ ಕೊರೋನಾ ನಾನು

ಅಹಂಕಾರದಿ ಮೆರೆಯುವವರೆಲ್ಲ ಮುದುಡಿ ಮೂಲೆಯಲಿ ಕುಳಿತಿದ್ದಾರೆ

ಮನದ ಕರೆಗಂಟೆ ನಿಲ್ಲಸಲು ಜವರಾಯನ ಕರೆದ ಕೊರೋನಾ ನಾನು

ಪಟ್ಟಕಟ್ಟಿ ಆಳುವ ರಾಜರ ತಲೆಗಳು ನನ್ನಯ ಕಾಲ ಅಡಿ ಬಿದ್ದಿವೆ

ಅಳಿಯದೇ ದ್ವಿಗುಣಿಯಾಗಿ ನಿಮ್ಮ ಜೀವದಲಿ ನಲಿದ ಕೊರೋನಾ ನಾನು

ನೀವು ಬಂದು ಕರೆಯದೆ ಬರುವವನಲ್ಲ, ಬಂದರೆ ಬೇಗ ಬಿಡುವುದಿಲ್ಲ

ಮನುಜರೆಲ್ಲರು ಮಾಡಿದ ಪ್ರಕೃತಿ ನಾಶಕೆ ಸಿಡಿದ ಕೊರೋನಾ ನಾನು

ಗಂಗೆಯ ಒಡಲು ಓಝೋನ್ ಪದರವ ನನ್ನ ಮರಣದ ನಂತರ ನೋಡಿ

ವಿಶ್ವ ಸಮರದಂತೆ ಸಹಸ್ರ ನರರ ಜೀವ ತೆಗೆದ ಕೊರೋನಾ ನಾನು

ಬಡತನ ಹಸಿವು ಪರಿಚಯಿಸಿರುವೆ ಅದಕೆ ಶಹಬ್ಬಾಸ್ ನೀಡಿರಿ ನನಗೆ

ಕುಟುಂಬದ ಪ್ರೀತಿ ವಾತ್ಸಲ್ಯವ ಜನರಲಿ ಸೆಳೆದ ಕೊರೋನಾ ನಾನು

ಈಗಾದರೂ ಇಟ್ಟಿರುವುದ ಕೊಟ್ಟು ಕೊಟ್ಟಿರುವುದ ಮರೆತು ಜೀವಿಸಿರಿ

ಜೀವಕ್ಕಿಂತ ಹಣ ಹಿರಿದಲ್ಲವೆಂದು ಕಥೆ ಬರೆದ ಕೊರೋನಾ ನಾನು

ಮುಂದೆಯಾದರೂ ಅರಿತು ಬೆರೆತು ಬಾಳಿದರೆ ನಾ ಬಂದಿದ್ದು ಸಾರ್ಥಕ

 ನಂರುಶಿ ಬರೆಯುವ ಗಜಲ್ ಗಳಿಗೆ ತಲೆಬಾಗಿ ಮಣಿದ ಕೊರೋನಾ ನಾನು.

ನಂರುಶಿ ಕಡೂರು.

Leave a Reply

Your email address will not be published. Required fields are marked *

You May Also Like

ಸೀಡಿ ಪ್ರಕರಣ : ಸಂತ್ರಸ್ತೆಗೆ ಗ್ರಾಮಸ್ಥರ ಬೆಂಬಲ

ಮಾಜಿ ಸಚಿವರ ಸಿ.ಡಿ.ಪ್ರಕರಣದ ಸಂತ್ರಸ್ತ ಯುವತಿಗೆ ತಂದೆಯ ಊರಿನಿಂದ ಬೆಂಬಲ ವ್ಯಕ್ತವಾಗಿದೆ.

ನರೇಗಲ್ಲ್ ನಲ್ಲಿ ರಾಷ್ಟ್ರೀಯ ಪಲ್ಸ್ ಪೊಲೀಯೊ ಕಾರ್ಯಕ್ರಮ

ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ಹಾಗು ದೇಶದ ಬಹುದೊಡ್ಡ ಆಸ್ತಿ ಎಂದು ನರೆಗಲ್ ಪಟ್ಟಣ ಪಂಚಾಯತಿ ಅಧ್ಯಕ್ಷೆ ಅಕ್ಕಮ್ಮ ಯ ಮಣೋಡ್ಡರ ಹೇಳಿದರು.

ಅಂತರ್ ಜಿಲ್ಲಾ ಪ್ರವಾಸಕ್ಕಾಗಿ ನೀವು ಏನು ಮಾಡಬೇಕು ಗೊತ್ತಾ?

ಲಾಕ್ ಡೌನ್ ಹಿನ್ನೆಲೆ ಅಂತರ್ ಜಿಲ್ಲೆಗಳಲ್ಲಿ ಸಿಲುಕಿರುವವರಿಗಾಗಿ ಅಂತರ್ ಜಿಲ್ಲಾ ಪ್ರವಾಸ ಕೈಗೊಳ್ಳಲು ಸರ್ಕಾರ ಪಾಸ್ ವ್ಯವಸ್ಥೆ ಮಾಡಿದೆ.

ಹಾಲಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಆಗ್ರಹ: ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರಿಸಲು ಒತ್ತಾಯ

ಕುರುಬರು ಮೂಲತ: ಬುಡಕಟ್ಟು ಜನಾಂಗದವರಾಗಿದ್ದು, ರಾಜ್ಯದಲ್ಲಿ ಈಗಾಗಲೇ ಜೇನು ಕುರುಬ, ಕಾಡು ಕುರುಬರು, ಗೊಂಡ, ರಾಜಗೊಂಡ, ಕುರುಬ, ಕುರುಮನ್ಸ್ ಜಾತಿಗಳು ಪರಿಶಿಷ್ಟ ಪಂಗಡದಲ್ಲಿವೆ. ಆದರೆ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಕುರುಬರಿಗೂ ಎಸ್.ಟಿ.ಮೀಸಲಾತಿ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಎಸ್.ಟಿ ಮೀಸಲಾತಿ ಹೋರಾಟ ಸಮೀತಿ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಹಾಲಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ತಿಳಿಸಿದರು.