ಬೆಂಗಳೂರು : ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿದ್ದ ಕನ್ನಡದ ಹಿರಿಯ ಕವಿ ಕೆ.ಎಸ್.ನಿಸಾರ್ ಅಹ್ಮದ್ ಇಂದು ನಿಧನ ಹೊಂದಿದ್ದಾರೆ. ಹಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ನಿಸಾರ ಅಹ್ಮದ್ ಇಂದು ಕೊನೆ ಉಸಿರೆಳೆದರು.
ಒಟ್ಟು 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, 5 ಮಕ್ಕಳ ಸಾಹಿತ್ಯ ಕೃತಿಗಳು, 5 ಅನುವಾದ ಕೃತಿಗಳು, 13 ಸಂಪಾದನಾ ಗ್ರಂಥಗಳನ್ನು ಹೊರತರುವ ಮೂಲಕ ಕನ್ನಡ ಸಾಹಿತ್ಯ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದರು. ಹಾಸ್ಯ, ವಿಡಂಬನೆ, ಗಾಂಭಿರ್ಯ, ಸೌಂಧರ್ಯ ಪ್ರಜ್ಞೆ ಇವರ ಕಾವ್ಯಗಳಲ್ಲಿನ ವಿಶೇಷತೆ.
ಭೂವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ನಿಸಾರ್ ಅಹ್ಮದ್ ಕಾಲೇಜುಗಳಲ್ಲಿ ಅದ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.. ನಿತ್ಯೋತ್ಸವದ ಕವಿ ಈಗ ನೆನಪು ಮಾತ್ರ ಆದರೆ ಅವರ ಸಾಹಿತ್ಯ ನಿತ್ಯ ನೂತನ.