ಕೊರೋನಾ ಕಾವ್ಯ-5ನೇ ಸರಣಿಯಲ್ಲಿಂದು ಗದಗಿನ ಸಾಹಿತಿ ನಿರಂತರ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಎ.ಎಸ್.ಮಕಾನದಾರ್ ಅವರು ರಚಿಸಿದ ಕವನ. ಪ್ರಸ್ತುತ ಸಂದರ್ಭದಲ್ಲಿ ಮಕಾನದಾರ್ ಅವರ ಕಾವ್ಯ ಆ ಕಾಲಕ್ಕೆ ಕಾಯುವೆ ಶಿರ್ಷಿಕೆಯೇ ಸೂಚಿಸುತ್ತದೆ ಅವರ ಕಾವ್ಯದಲ್ಲಿನ ಕನಸು ಹಾಗೂ ಹಂಬಲ. ಇಂದಿನ ದಿನಮಾನದಲ್ಲಿ ವಾಸ್ತವಕ್ಕೆ ಹತ್ತಿರವಾಗುವಂತಹ ಮನಸು ಕಟ್ಟುವ ಕಾವ್ಯವವನ್ನಿಲ್ಲಿ ಕಟ್ಟಿಕೊಟ್ಟಿದ್ದಾರೆ. .

ಆ ಕಾಲಕ್ಕೆ ಕಾಯುವೆ

ಮಸೀದೆಯ ಅಜಾನ್
ಚರ್ಚ್ ನಲ್ಲಿ ಕೇಳಬೇಕು

ಚರ್ಚ್ ನಲ್ಲಿಯ ಪ್ರಾರ್ಥನೆ
ಮಂದಿರ ದಲ್ಲಿ ಜರುಗಬೇಕು

ಮಂದಿರ ದಲ್ಲಿ ಸೇರಿದ ಜನ
ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು

ನನ್ನ ಕಾಯ
ಕರ್ಪುರ ವಾಗಬೇಕು

ಮಂದಿರ ಮಸೀದೆ
ಚರ್ಚ್ ನಲ್ಲಿ ಬೆಳಗಬೇಕು

ನರನಾಡಿಗಳು
ನೀಲಾಂಜನಕೆ ಬತ್ತಿ ಯಾಗಬೇಕು

ರಕುತ ಎಣ್ಣಿಯಾಗಬೇಕು
ಮನಸು ಬೆಣ್ಣಿಯಂತೆ ಕರಗಬೇಕು

ಆ ಕಾಲಕ್ಕಾಗಿ ನನ್ನ
ಕಣ್ಣುಗಳು ಕಾಯಬೇಕು

ಎ.ಎಸ್. ಮಕಾನದಾರ ಗದಗ

Leave a Reply

Your email address will not be published. Required fields are marked *

You May Also Like

ಕೊರೊನಾ ದುಷ್ಪರಿಣಾಮ: ನಗರಗಳ 14 ಕೋಟಿ ಜನರ ಬದುಕು ದುಸ್ತರ

ದೆಹಲಿ: ದೇಶಾದ್ಯಂತ ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ದುಷ್ಪರಿಣಾಮ ನಗರ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರ ಮೇಲೆ ಹೆಚ್ಚಾಗಿದೆ.…

ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಹೇಳಿಕೆ: ಭವನ ನಿರ್ಮಾಣಕ್ಕೆ ಅಗತ್ಯ ಅನುದಾನಕ್ಕಾಗಿ ಸರ್ಕಾರದ ಗಮನ ಸೆಳೆಯಲಾಗುವುದು

ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಅವರು ಶನಿವಾರ ಪಟ್ಟಣದಲ್ಲಿ ನಿರ್ಮಣ ಹಂತದಲ್ಲಿರುವ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ಸುಳ್ಳು ಹೇಳಿದ್ದು ಭಾರತವೋ ಅಥವಾ ಡೊನಾಲ್ಡ್ ಟ್ರಂಪೋ?

ದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಮಾತಾಡಿದ್ದೇನೆ. ಅವರು ಒಳ್ಳೆಯ ಮನಃಸ್ಥಿತಿಯಲ್ಲಿಲ್ಲ ಎಂದು ಅಮೆರಿಕ…

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ: ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್..!

ಬೆಂಗಳೂರು: ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನು ನೀಡಬಾರದು ಎಂದು…