ಆತ್ಮಿಯರೆ,

ಇವತ್ತಿನ ಕೊರೋನಾ ಕಾವ್ಯ ಸರಿಣಿಗೆ ಕವನ ಕಳುಹಿಸಿದವರು ಮಂಗಳಗೌರಿ ಹಿರೇಮಠ, ಮಂಗಳಗೌರಿ ಹಿರೇಮಠ ಇವರು ಗದಗನ ಬಸವೇಶ್ವರ ನಗರದವರು, ಸಾಹಿತ್ತಿಕವಾಗಿ ಅಭಿರುಚಿ ಉಳ್ಳ ಮಂಗಳಗೌರಿ ಅವರು ಸಾಕಷ್ಟು ಕವತೆಗಳನ್ನು ರಚಿಸಿದ್ದಾರೆ. ಊಹಿಸದೇ ಬಂದ ಘಳಿಗೆಯನ್ನು ಕೊರೋನಾದ ಈ ಸಂಕಷ್ಟ ಕಾಲದಲ್ಲಿ ಹದವಾಗಿ ಕಟ್ಟಿಕೊಟ್ಟಿದ್ದಾರೆ.

ಊಹಿಸದೇ ಬಂದ ಘಳಿಗೆ

ಕಾಲ ಹೀಗೆ ಇರೋದಿಲ್ಲ

ಮನುಷ್ಯ ಎಷ್ಟೇ ಮುಂದುವರೆದರೂ

ಪ್ರಕೃತಿ ಮಾತೆಯ ಮುಂದೆ ಕುಬ್ಜನೆಂಬುದು ಸಾಬೀತು ಆಗಿದೆ

ಯಾವುದೆಲ್ಲಾ ಮುಖ್ಯವೆಂದು ಜಗತ್ತಿಗೆ ತೋರಿಸಿಬಿಟ್ಟೆಯಾ ವೈರಸ್

ಚೀನಾದ ವುಹಾನ್ ಹುಟ್ಟೂರು

ಇಡಿ ವಿಶ್ವದಲ್ಲಿ ಸಾಂಕ್ರಾಮಿಕವಾಗಿ ಮುಂದುವರೆದಿದೆ

ಅಂತ್ಯಕ್ಕೊಂದು ಸಮಯ ಬೇರಬೇಕಾಗಿದೆ ಸಾಬಿತು ಆಗಬೇಕಾಗಿದೆ

ಸಮಯ ಹೀಗೆ ಇರುವದಿಲ್ಲ ಸಾಬೀತು ಮಾಡಿ ಸಾರಿ ಬಿಟ್ಟೆಯಾ ವೈರಸ್

ಶೀತ ನೆಗಡಿ ಕೆಮ್ಮು ಸಾಮಾನ್ಯ ಅಲ್ಲ

ಶುರುವಾಗಿ ಮನುಷ್ಯ ಉಸಿರಾಟಕ್ಕೆ ತೊಂದರೆ ಮಾಡಿ

ಒಂದು ಸಾಂಕ್ರಾಮಿಕವಾಗಿ ಕಾಡುವದು ಎಲ್ಲರಲ್ಲೂ ನಿನ್ನ ಗುಣ ಆಗಿದೆ

ಹುಟ್ಟು ಸಾವು ಪ್ರಕೃತಿಯ ನಿಯಮ ಎಂಬುದು ನೆನಪಿಸಿಬಿಟ್ಟೆಯಾ ವೈರಸ್

ಅದೆಷ್ಟು ಜನರ ಬದುಕಿಗೆ ಸಂಚಕಾರ ತಂದೆಯಾ

ಹಣದಿಂದ ಮೆರೆಯುವನಿಗೆ ಒಂದಿಷ್ಟು

ಜೀವನಮುಖ್ಯವಲ್ಲ ಜೀವ ಮುಖ್ಯ ಏಕತೆಯ ಮಂತ್ರ ಹಾಡಿದೆ

ಕಾಲಚಕ್ರ ಹೀಗೆ ಇರುವದಿಲ್ಲ ಎಂಬುದು ಸಾಬೀತು ಮಾಡಿಬಿಟ್ಟೆಯಾ ವೈರಸ್

ಆದೆಷ್ಟೋ ಕಾಯಿಲೆಗಳು ಬಂದವು

ನೋವು ಕೊಟ್ಟು ಬೆಂದು ಹೋದವು

ಈಗಷ್ಟೇ ಜಾಗೃತನಾಗಬೇಕು

ಮಾಸ್ಕ ಸ್ಯಾನಿಟೇಜರ್ ಅಂತರ ಕಾಯ್ದುಕೊಳ್ಳೋದು ಒಳಿತಿಗಾಗಿ ಒಳ್ಳೆಯ ಸಮಯಕ್ಕಾಗಿ

ಕಾಯಬೇಕು ತಾಳ್ಮೆ ಇರಬೇಕು ಅಷ್ಟೇ ಅಲ್ಲವೇ ವೈರಸ್

ಆರೋಗ್ಯವಂತ ಸಮಾಜ ನಿರ್ಮಾಣ

ವೈದ್ಯ ದಾದಿಯರು ಪೊಲೀಸ್ ಕಾರ್ಮಿಕರ ಶ್ರಮಕ್ಕೆ ಶೆಲ್ಯೂಟ್ ಮಾಡಿ ಎಲ್ಲರ ಬಾಳಲ್ಲಿ ಬೆಳಕಾಗಬೇಕು

ವೈರಸ್ ತೊಲಗಿಸೋಣ

ಸರ್ವೇ ಜನೋ ಸುಖಿ:ನೋ ಭವಂತು ಎನ್ನೋಣ

                      ಮಂಗಳಗೌರಿ ಹಿರೇಮಠ,ಗದಗ

1 comment
  1. ನಿಮ್ಮಉತ್ತರ ಪ್ರಭ ಬಹಳ ಚನ್ನಾಗಿ ಬಂದಿದೆ ಹೊಸತನದ ಹೊಳಹುಗಳೊಂದಿಗೆ
    ಅಭಿನಂದನೆಗಳು

Leave a Reply

Your email address will not be published. Required fields are marked *

You May Also Like

ಉದ್ಧವ್ ಠಾಕ್ರೆ ಮನದಲ್ಲಿ ಮೂಡಿದ ನಿರಾಳ!

ಕೇಂದ್ರ ಚುನಾವಣಾ ಆಯೋಗವು ಮೇ. 27ರ ಒಳಗೆ ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಅನುಮತಿ ನೀಡಿದ್ದು, ಸಿಎಂ ಉದ್ದವ್ ಠಾಕ್ರೆಗೆ ಸಂತಸ ತಂದಿದೆ.

ಆಮಿಷದ ಆಡಿಯೋ, ಪೊಲೀಸ್, ಕೋರ್ಟ್. ರೆಸಾರ್ಟ್ : ರಾಡಿಯೆದ್ದಿರುವ ರಾಜಸ್ತಾನ ರಾಜಕೀಯ

ಬರುವ ಮಂಗಳವಾರ ಸಾಯಂಕಾಲ 5.30ರವರೆಗೂ ಅರ್ಜಿದಾರರ (ಸಚಿನ್ ಪೈಲಟ್ ಬಣದ ಶಾಸಕರು) ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ತಾನ ಹೈಕೋರ್ಟ್ ವಿಭಾಗೀಯ ಪೀಠ ವಿಧಾನಸಭೆಯ ಸ್ಪೀಕರ್ ಗೆ ಸೂಚಿಸಿದೆ.

ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಕಂಡು ಬಂದ ಸೋಂಕು!

ಬೆಂಗಳೂರು: ಇಲ್ಲಿಯ ಶಿವಾಜಿನಗರದಲ್ಲಿ ಮತ್ತೆ 14 ಜನರಲ್ಲಿ ಸೋಂಕು ಇರುವುದು ಬೆಳಕಿಗೆ ಬಂದಿದೆ. ಹೌಸ್ ಕೀಪಿಂಗ್…

ಆಲಮಟ್ಟಿ ಪದವಿ ಕಾಲೇಜಿಗೆ ಎಲ್.ಐ.ಸಿ.ತಂಡ ಭೇಟಿ

ಗುಲಾಬಚಂದ ಜಾಧವಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಮಂಜಪ್ಪ ಹಡೇ೯ಕರ (ಎಂ.ಎಚ್.ಎಂ.)ಪದವಿ ಮಹಾವಿದ್ಯಾಲಯಕ್ಕೆ ಬೆಳಗಾವಿ ರಾಣಿ ಚೆನ್ನಮ್ಮ…