ಆತ್ಮಿಯರೇ
ಉತ್ತರ ಪ್ರಭ ನ್ಯೂಸ್ ಪೋರ್ಟಲ್ ನಲ್ಲಿ ಸಾಹಿತ್ಯ ವಿಭಾಗದ ಮಾರ್ಗದರ್ಶಕರಾಗಿ ಹಿರಿಯ ಸಾಹಿತಿ ಎ.ಎಸ್.ಮಕಾನದಾರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಕಥೆ ಹಾಗೂ ಕಾವ್ಯ ರಚನೆಯ ಮೂಲಕ ಮನೆಮಾತಾಗಿರುವ ಮಕಾನದಾರ ಅವರ ಕಾವ್ಯ ಪಠ್ಯ ಪುಸ್ತದಲ್ಲಿ ಪ್ರಕಟಗೊಂಡಿದೆ. ಹಲವು ಮಹತ್ವದ ಸಾಹಿತ್ಯ ಕೃತಿಗಳನ್ನು ಕೂಡ ಹೊರತಂದಿದ್ದಾರೆ. ಇವರ ಇತ್ತಿಚೆಗೆ ಪ್ರಕಟಗೊಂಡ ಅಕ್ಕಡಿ ಸಾಲು ಕೃತಿ ಹೆಚ್ಚು ಜನಮನ್ನಣೆ ಪಡೆದುಕೊಂಡಿದೆ. ಉತ್ತರ ಪ್ರಭ ಪೋರ್ಟಲ್ ಮೂಲಕ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದೇವೆ.
ಈ ನಿಮ್ಮ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಸುದ್ದಿ ಜೊತೆಗೆ ಸಾಹಿತ್ಯಕ್ಕೂ ಆದ್ಯತೆ ನೀಡಿದೆ. ಹೀಗಾಗಿ ಕೊರೊನಾ ಕಾವ್ಯ ಎನ್ನುವ ಹೆಸರಲ್ಲಿ ಕೊರೋನಾ ಕುರಿತಾದ ಕಾವ್ಯಗಳನ್ನು ಪ್ರಕಟಿಸಲಿದೆ. ಆಸಕ್ತರು ನೀವು ಬರೆದ ಕವನಗಳನ್ನು ನಮಗೆ ಕಳುಹಿಸಿಕೊಡಬಹುದಾಗಿದೆ. ನಿಮ್ಮ ಕವನದ ಜೊತೆಗೆ ನಿಮ್ಮ ಕಿರು ಪರಿಚಯ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಳುಹಿಸಿ ಕೊಡಲು ಮನವಿ.

ಕವನ ಕಳಿಸಬೇಕಾದ ವಾಟ್ಸಅಪ್ ಸಂಖ್ಯೆ: 8151955826

Leave a Reply

Your email address will not be published. Required fields are marked *

You May Also Like

ಮಕ್ಕಳ ಕಲಿಕಾ ಮೇಳ ಸಂಭ್ರಮ…ವೈವಿಧ್ಯ ಪರಿಕಲ್ಪನೆ ಕೌಶಲ್ಯ ಅನಾವರಣ..!

ಆಲಮಟ್ಟಿ: ಅಲ್ಲಿ ಗಣಿತ, ಭಾಷೆ ಸೇರಿ ನಾನಾ ವಿಷಯಗಳ ಕಠಿಣ ಪರಿಕಲ್ಪನೆಗಳನ್ನು ನಾನಾ ಹೊಸ ಹೊಸ…

ಕರುಳ ಕುಡಿಯ ಜೋಗುಳದಲಿ

ನೋವು! ಯಾತನೆ! ಯಮಯಾತನೆ! ಇಡೀ ದೇಹವನ್ನೇ ಒಳ್ಳಲ್ಲಿ ಹಾಕಿ ಕುಟ್ಟಿದ ಅನುಭವ. ಸಾಕಪ್ಪ ಸಾಕು ಈ ಜೀವನ ಎನಿಸುವಷ್ಟು ವೈರಾಗ್ಯ.ಈ ಬದುಕೇ ಬೇಡ. ತಡೆದುಕೊಳ್ಳಲಾರೆ… ಸಹಿಸಲಾರೆ… ಅನುಭವಿಸಲಾರೆ. ಕಣ್ಣು ಬಿಡಲೂ ತ್ರಾಣವಿಲ್ಲ. ಯಾವುದೋ ಕೈಗಳು ಬಂದು ತಡವುತ್ತಿವೆ. ಹಣೆ ಮುಟ್ಟಿ ನೋಡಿದ ಸ್ಪರ್ಶದ ಅನುಭವ. ಆದರೂ ಕಣ್ಗಳು ಮೆತ್ತಿಕೊಂಡಿವೆ. ನರಳುವುದು, ಮುಲುಗುವುದು, ಒದ್ದಾಡುವುದ ಬಿಟ್ಟರೆ ಏನೂ ಮಾಡಲಾಗದ ಅಸಹಾಯಕತೆ.

ಸಂಕನೂರ್ ಅಂದಪ್ಪ ಅವರ ಸಮಾಜ ಸೇವೆ ಇತರರಿಗೂ ಆದರ್ಶ

ನಿಸ್ವಾರ್ಥ ಸಮಾಜ ಸೇವಕರ ಪೈಕಿ ಗಜೇಂದ್ರಗಡದ ಹೆಮ್ಮೆಯ ಸರಳ ಸಜ್ಜನಿಕೆಯ ಯುವಕ ಅಂದಪ್ಪ ಕಳಕಪ್ಪ ಸಂಕನೂರ ಕೂಡ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಾರದು. ಶಿಕ್ಷಣ ಪ್ರೇಮಿ ಅಂದಪ್ಪ ಅವರು, ಶ್ರೇಷ್ಠ ವರ್ತಕ ದಿ. ಬಂಗಾರಬಸಪ್ಪ ಸಂಕನೂರ ಅವರ ಮೊಮ್ಮಗನಾಗಿದ್ದು, ಸಂಕನೂರ ಅಂದಪ್ಪ ಎಂದೇ ಚಿರಪರಿಚಿತರು.

ಕೋರೊನಾ ಸೋಂಕು ನಿಯಂತ್ರಣ, ಚಿಕಿತ್ಸೆ, ಲಸಿಕಾಕರಣ ಸಭೆಯಲ್ಲಿ ಹೆಳಿದ್ದೆನು?

ಗದಗ: ಸರ್ಕಾರ ತಿಳಿಸಿದ ಆಧ್ಯತಾ ಗುಂಪುಗಳ ಅರ್ಹ ಫಲಾನುಭವಿಗಳಿಗೆ ಆದ್ಯತೆಯನುಸಾರ ಮೊದಲು ಲಸಿಕೆ ನೀಡುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು. ಅವರು ಜಿಲ್ಲಾಡಳಿತ ಭವನದ ಜಿ.ಪಂ ವಿಡಿಯೋ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗಳೊಂದಿಗೆ ಶುಕ್ರವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.