ಆತ್ಮಿಯರೇ
ಉತ್ತರ ಪ್ರಭ ನ್ಯೂಸ್ ಪೋರ್ಟಲ್ ನಲ್ಲಿ ಸಾಹಿತ್ಯ ವಿಭಾಗದ ಮಾರ್ಗದರ್ಶಕರಾಗಿ ಹಿರಿಯ ಸಾಹಿತಿ ಎ.ಎಸ್.ಮಕಾನದಾರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಕಥೆ ಹಾಗೂ ಕಾವ್ಯ ರಚನೆಯ ಮೂಲಕ ಮನೆಮಾತಾಗಿರುವ ಮಕಾನದಾರ ಅವರ ಕಾವ್ಯ ಪಠ್ಯ ಪುಸ್ತದಲ್ಲಿ ಪ್ರಕಟಗೊಂಡಿದೆ. ಹಲವು ಮಹತ್ವದ ಸಾಹಿತ್ಯ ಕೃತಿಗಳನ್ನು ಕೂಡ ಹೊರತಂದಿದ್ದಾರೆ. ಇವರ ಇತ್ತಿಚೆಗೆ ಪ್ರಕಟಗೊಂಡ ಅಕ್ಕಡಿ ಸಾಲು ಕೃತಿ ಹೆಚ್ಚು ಜನಮನ್ನಣೆ ಪಡೆದುಕೊಂಡಿದೆ. ಉತ್ತರ ಪ್ರಭ ಪೋರ್ಟಲ್ ಮೂಲಕ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದೇವೆ.
ಈ ನಿಮ್ಮ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಸುದ್ದಿ ಜೊತೆಗೆ ಸಾಹಿತ್ಯಕ್ಕೂ ಆದ್ಯತೆ ನೀಡಿದೆ. ಹೀಗಾಗಿ ಕೊರೊನಾ ಕಾವ್ಯ ಎನ್ನುವ ಹೆಸರಲ್ಲಿ ಕೊರೋನಾ ಕುರಿತಾದ ಕಾವ್ಯಗಳನ್ನು ಪ್ರಕಟಿಸಲಿದೆ. ಆಸಕ್ತರು ನೀವು ಬರೆದ ಕವನಗಳನ್ನು ನಮಗೆ ಕಳುಹಿಸಿಕೊಡಬಹುದಾಗಿದೆ. ನಿಮ್ಮ ಕವನದ ಜೊತೆಗೆ ನಿಮ್ಮ ಕಿರು ಪರಿಚಯ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಳುಹಿಸಿ ಕೊಡಲು ಮನವಿ.
ಕವನ ಕಳಿಸಬೇಕಾದ ವಾಟ್ಸಅಪ್ ಸಂಖ್ಯೆ: 8151955826