ಆಲಮಟ್ಟಿ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಅಪಾರ ಜಲರಾಶಿಯಿದೆ. ಕೆಆರ್ ಎಸ್ ಕ್ಕಿಂತ ಎರಡೂವರೆ ಪಟ್ಟು ಹೆಚ್ಚು ನೀರು ಇಲ್ಲಿದೆ. ಆದರೆ ಹಚ್ಚು ಹಸಿರು ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಬನ್ನೂರ ನಾರಾಯಣ ವಿಷಾಧಿಸಿದರು.
ಸಂಘದ ವತಿಯಿಂದ ಏರ್ಪಡಿಸಿರುವ ಅಧ್ಯಯನ ಪ್ರವಾಸಕ್ಕಾಗಿ ಆಲಮಟ್ಟಿಗೆ ಆಗಮಿಸಿರುವ ಅವರು, ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನಾ೯ಟಕ ರಾಜ್ಯ ರೈತ ಸಂಘ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಬನ್ನೂರ ನಾರಾಯಣ ಅವರು ಸಂಘದ ವತಿಯಿಂದ ಏರ್ಪಡಿಸಿರುವ ಅಧ್ಯಯನ ಪ್ರವಾಸತ್ಕಾಗಿ ಗುರುವಾರ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ಆಗಮಿಸಿ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರ ಜೊತೆಗೆ ಸಂಘದ ಪ್ರಮುಖರು ಹಾಜರಿದ್ದರು.


ಕಾವೇರಿ ಭಾಗದಲ್ಲಿ ಎಕರೆಗೆ ಕನಿಷ್ಠ 60 ಟನ್ ನಿಂದ 100 ಟನ್ ವರೆಗೆ ಕಬ್ಬು ಬೆಳೆಯುತ್ತಾರೆ, ರೈತರಲ್ಲಿ ನೀರಿನ ಬಳಕೆ, ಮಿತವ್ಯಯ, ಜಾಗೃತಿ ಹೆಚ್ಚಿದೆ. ಆದರೆ ಈ ಭಾಗದಲ್ಲಿ ಕಬ್ಬಿನ ಇಳುವರಿಯೂ ಕಡಿಮೆ, ನೀರಿನ ಜಾಗೃತಿಯೂ ಕಡಿಮೆ ಎಂದರು. ನೀರು ಬಳಕೆದಾರರ ಸಂಘಗಳು ಇದ್ದು ಅವು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಕೃಷ್ಣೆಯ ಭಾಗದಲ್ಲಿ ಕಂಡು ಬರುವುದಿಲ್ಲ ಎಂದರು.
ಕೃಷ್ಣೆಯ ಭಾಗದ ರೈತರಲ್ಲಿಯೂ ನೀರಿನ ಸದ್ಭಳಕೆಯ ಬಗ್ಗೆ ಜಾಗೃತಿ ಮೂಡಿ, ಬೆಳೆದ ಬೆಳೆಯ ಇಳುವರಿ ದ್ವಿಗುಣಗೊಳ್ಳಲು ರೈತರು ಕಷ್ಟಪಡಬೇಕು ಎಂದರು. ಕಾವೇರಿ ಭಾಗದಲ್ಲಿ ಜುಲೈನಿಂದ ಡಿಸೆಂಬರ್ ವರೆಗೆ ಕಾಲುವೆಗಳಿಗೆ ವಾರಾಬಂದಿ ಇರುವುದಿಲ್ಲ. ಜನವರಿಯಿಂದ ಏಪ್ರಿಲ್ ವರೆಗೆ ಮಾತ್ರ ವಾರಾಬಂಧಿಯಿದ್ದು, ಕೆಲ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಕೊಡುವುದಿಲ್ಲ ಎಂದರು.
ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಜಮೀನಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳು ಕಂಡು ಬರಲಿಲ್ಲ. ಇದು ತಪ್ಪು, ಒಳಗಿನ ಜಮೀನಿಗೂ ರಸ್ತೆ ಅಗತ್ಯ. ಕೃಷ್ಣಾ ಕಾಡಾ ವತಿಯಿಂದ ಅಚ್ಚುಕಟ್ಟು ರಸ್ತೆಯನ್ನು ನಿರ್ಮಿಸಬೇಕು. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಎಲ್ಲೆಡೆಯೂ ಉತ್ತಮ ಅಚ್ಚುಕಟ್ಟು ರಸ್ತೆಗಳಿವೆ ಎಂದರು.
ಕಾವೇರಿ ಭಾಗದಲ್ಲಿ ಪ್ರತಿ ಕಾಲುವೆಗಳ ಅಂತ್ಯದ ಜಮೀನಿಗೂ ನೀರು ಹರಿಯುತ್ತದೆ. ಘೋಷಿತ ಪ್ರದೇಶಕ್ಕೆ ಕಡ್ಡಾಯವಾಗಿ ನೀರು ಹೋಗುತ್ತದೆ ಎಂದರು.
ಈ ಭಾಗದಲ್ಲಿ ಬೆಲ್ಲ ತಯಾರಿಕಾ ಆಲೆಮನೆಗಳಿಲ್ಲ ಎಂದರು.


ಗುಡಿ ಕೈಗಾರಿಕೆಯಾಗಿ ಎಥೆನಾಲ್ ಉತ್ಪಾದನೆಯಾಗಿಸಲು ತಂತ್ರಜ್ಞಾನ ಸರಳೀಕೃತಗೊಳಿಸಬೇಕು, ಅದನ್ನು ರೈತರಿಗೆ ನೀಡಿ, ಪ್ರತಿಯೊಬ್ಬರು ಆಲಮನೆ ರೀತಿಯಲ್ಲಿ ಎಥೆನಾಲ್ ಉತ್ಪಾದನೆ ಮಾಡಲು ತಂತ್ರಜ್ಞಾನ ಅಭಿವೃದ್ಧಿಗೊಳಿಸಬೇಕು ಎಂದರು. ಅದಕ್ಕಾಗಿ ಮುಖ್ಯಮಂತ್ರಿಗಳ ಜತೆ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂದರು. ಎಳೆ ನೀರು ಸಂಸ್ಕರಣ ಘಟಕ ಆರಂಭಿಸಬೇಕು, ಈ ಭಾಗದಲ್ಲಿ ಎರಡು ಮೂರು ಚಿಕ್ಕ ಚಿಕ್ಕ ಕೈಗಾರಿಕೆಗಳು ಬಂದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಕೆಆರ್ ಎಸ್ ಬೃಂದಾವನಕ್ಕಿಂತಲೂ ಸುಮಾರು ನಾಲ್ಕೈದು ಪಟ್ಟು ದೊಡ್ಡದಾದ ಉದ್ಯಾನಗಳ ಸಮುಚ್ಛಯ ಆಲಮಟ್ಟಿಯಲ್ಲಿದೆ. ಪ್ರವಾಸಿ ತಾಣವಾಗಿ ಆಲಮಟ್ಟಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕರ್ನಾಟಕದ ಅತ್ಯಂತ ದೊಡ್ಡ ಉದ್ಯಾನಗಳ ತಾಣ ಆಲಮಟ್ಟಿ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಸವರಾಜ ಕುಂಬಾರ, ತಿರುಪತಿ ಬಂಡಿವಡ್ಡರ, ಬಿ.ಪಿ. ಅಶೋಕ, ಗೋವಿಂದರಾಜು, ಕೃಷ್ಣಪ್ಪ, ಶಂಕರ, ಸುರೇಶ, ಲೋಕೇಶ, ನಾಗಪ್ಪ ಇನ್ನೀತರರು ಇದ್ದರು.

Leave a Reply

Your email address will not be published. Required fields are marked *

You May Also Like

ಅಂಬಾಭವಾನಿ ಜಾತ್ರಾ ಉತ್ಸವ ಸಡಗರ ಸಂಭ್ರಮ ಕೃಷ್ಣೆ ತಟದಲ್ಲಿ ಕುಂಭ ಮೆರವಣಿಗೆ ಕಲರವ

ಚಿತ್ರ ವರದಿ : ಗುಲಾಬಚಂದ ಆರ್.ಜಾಧವಆಲಮಟ್ಟಿ :(ವಿಜಯಪುರ ಜಿಲ್ಲೆ) ಬೆಳ್ಳಂ ಬೆಳಿಗ್ಗೆ ತಂಪಾಗಿ ಸೂಸಿ ಬರುತ್ತಿದ್ದ…

ಇಂಧಿರಾಗಾಂಧಿ ಭಾವಚಿತ್ರಕ್ಕೆ ಮಸಿ: ಆರೋಪಿ ಬಂಧನ

ದಾವಣಗೆರೆ: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ…

ಅಕ್ಟೋಬರ್ ನಲ್ಲಿ ಗ್ರಾಪಂ ಚುನಾವಣೆ ?ಜುಲೈ 13ರಿಂದ ಮತದಾರರ ಪಟ್ಟಿ ಪ್ರಕ್ರಿಯೆ

ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣೆಗಳನ್ನು ಅಕ್ಟೋಬರ್ ನಲ್ಲಿ ನಡೆಸುವ ಸಾಧ್ಯತೆ ಇದ್ದು. ಇದೇ ಜುಲೈ…

ರಿಷಿ ಕಪೂರ್ ಬಗ್ಗೆ ಪತ್ನಿ ಹೇಳಿದ್ದೇನು?

ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ್ದಾರೆ. ಅವರ ಬಗ್ಗೆ ಪತ್ನಿ ನೀತು ಸಿಂಗ್ ಗುಣಗಾನ ಮಾಡಿದ್ದಾರೆ.