ಉತ್ತರಪ್ರಭ
ಆಲಮಟ್ಟಿ;
ಇಲ್ಲಿಯ ಶಾಸಕರ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿನ ಮೈದಾನವನ್ನು 2.5 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಟೆಂಡರ್ ಕರೆಯಲಾಗಿದೆ ಎಂದು ಕೆಬಿಜೆಎನ್ ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ ಹೇಳಿದರು.
ಸ್ಥಳೀಯ ಶಾಸಕರ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆದ 74 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ಟೇಡಿಯಂ ಮಾದರಿ ವೀಕ್ಷಣಾ ಗ್ಯಾಲರಿ, ತಲಾ 10 ಶೌಚಾಲಯ, ಬಾತ್ ರೂಮ್ , 24 ಗಂಟೆಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಒಳಗೊಂಡಿರಲಿದೆ. ಈಗಿರುವ ಮೈದಾನ ಇನ್ನಷ್ಟು ವಿಸ್ತಾರಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಸಿಂಥಟಿಕ್ ಟ್ರ್ಯಾಕ್ ನಿರ್ಮಿಸಲಾಗುವುದು ಎಂದರು.
ಸೂಪರಿಂಟೆಂಡೆಂಟ್ ಎಂಜಿನಿಯರ್ ಡಿ. ಬಸವರಾಜ, ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಜಿ. ಕುಲಕರ್ಣಿ, ಐ.ಎಲ್. ಕಳಸಾ, ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ಪಿ.ಎ. ಹೇಮಗಿರಿಮಠ, ಜಿ.ಎಂ. ಕೊಟ್ಯಾಳ, ಪಿ. ಶಾಂತಾ, ಬಸವರಾಜ ಯರವಿನತೆಲಿಮಠ, ಎಂ.ಆರ್. ಮಕಾನದಾರ್, ಎಸ್.ಐ. ಗಿಡ್ಡಪ್ಪಗೋಳ, ಪಿಎಸ್ ಐ ಇಂಡಿಕರ, ಇನ್ನೀತರರು ಇದ್ದರು.
10 ಕ್ಕೂ ಹೆಚ್ಚು ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಡಿಸ್ ಪ್ಲೇ ನೃತ್ಯ ಗಮನ ಸೆಳೆದವು.
ಜವಾಹರ ನವೋದಯ ವಿದ್ಯಾಲಯದ ಮಕ್ಕಳು ಪ್ರಚುರಪಡಿಸಿದ ಸ್ಕಿಪ್ಪಿಂಗ್ ರೋಪ್ ನಲ್ಲಿ ಕವಾಯತ್ತು ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *

You May Also Like

ಆದರಳ್ಳಿ ಜನರಿಗೆ ಕ್ರಷರ್ ಕಾಟ ತಪ್ಪೇ ಇಲ್ವಂತೆ!

ಶಿವಮೊಗ್ಗದಲ್ಲಿ ಕಲ್ಲು ಗಣಿಗಾರಿಕೆಯ ಸ್ಪೋಟದಿಂದಾದ ಕರಾಳ ಘಟನೆಯ ನೆನಪು ಇನ್ನು ಹಸಿಯಾಗಿಯೇ ಇದೆ. ಈ ಮದ್ಯೆ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಕಲ್ಲು ಕ್ವಾರಿಗಳಲ್ಲಿ ಸ್ಪೋಟಕ ಬಳಸಿ ಗಣಿಗಾರಿಕೆ ಮಾಡುತ್ತಿರುವುದು ಮುಂದುವರದೇ ಇದೆ.

ಲಕ್ಷ್ಮೇಶ್ವರ: ಜಯ ಕರ್ನಾಟಕ ಜನಪರ ವೇದಿಕೆಯಿಂದ ಮನವಿ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದನ್ನು ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಸುಕ್ಕಾ ಹೊಡದ್ ಒಂಚೂರು ಉಪ್ಪಿನಕಾಯಿ ಒಳಗೋದ ಕೂಡ್ಲೆ ಏನಾತಂತೀರಿ…!

ಹೊಗ್ಗೋ ನಿನ್ನ ತಲಿ ದಿಮ್ ಹಿಡದಂಗಾಗಿ ಹ್ಯಂಗ್ಯಂಗರ ಮಾತಾಡಾಕತ್ತಿನಿ ಅನಸಾಕತ್ತೈತಿ ನಂಗ. ಅಯ್ಯೋ ನಂಗು ಹಂಗಾ ಅನಾಸಾಕತ್ತೈತಿ. ತಲಿ ದಿಮ್ಮಿನ ವಿಷಯ ಹೋಗ್ಲಿ ಹ್ಯಾಂಗಿತ್ತು ಮೊದಲ ದಿನದ ಅನುಭವ….!

ರಾಜ್ಯಕ್ಕೆ ಮಾದರಿಯಾದ ಜಿಲ್ಲಾ ಸಾಹಿತ್ಯ ಭವನ

ಜಿಲ್ಲೆಯಲ್ಲಿ ನಿರ್ಮಿಸಿರುವ ಕನ್ನಡ ಸಾಹಿತ್ಯ ಭವನವನ್ನು ರಾಜ್ಯದಲ್ಲಿಯೇ ಮಾದರಿ ಭವನವಾಗಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಶರಣು ಗೋಗೇರಿ ಹೇಳಿದರು.