ಉತ್ತರಪ್ರಭ ಸುದ್ದಿ

ಗದಗ: ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದಲ್ಲಿ ಪತ್ನಿಯಿಂದಲೇ ಪತಿಯ ಹತ್ಯೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಸುರೇಶ ಈರಪ್ಪ ಮಿರ್ಜಿಯೊಂದಿಗೆ ಶೀಲವ್ವ ಸಕ್ರಪ್ಪ ಲಮಾಣಿಯವರು ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಷಯದ ಕುರಿತು ಶೀಲವ್ವ, ಸಕ್ರಪ್ಪ ಹಾಗೂ ಸುರೇಶನೊಂದಿಗೆ ಸೇರಿ ಸಂಚು ಹೂಡಿ ಸಕ್ರಪ್ಪನಿಗೆ ಕೂಲಿ ಕೆಲಸಕ್ಕೆ ತಡಸ ಗ್ರಾಮಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ.

ಅನೈತಿಕ ಸಂಬಂಧದ ಫೋಟೋ

ತಾಲೂಕಿನ ಸುವರ್ಣಗಿರಿ ತಾಂಡಾದ ಸಕ್ರಪ್ಪ ಗಂಗಪ್ಪ ಲಮಾಣಿ (40) ಈತ ಆಗಸ್ಟ್ 23ರಂದು ನಾಪತ್ತೆಯಾಗಿದ್ದಾನೆ ಸ್ವತಃ ಪತ್ನಿಯೇ ಅಕ್ಟೋಬರ್ 4ರಂದು ಲಕ್ಷೇಶ್ವರ ಪೊಲೀಸ್ ಠಾಣೆಯಲಿ ಪ್ರಕರಣ ದಾಖಲಿಸಿದ್ದಳು.ಹಾವೇರಿ ಜಿಲ್ಲೆ ತಡಸ ಪೊಲೀಸ್ ಠಾಣೆ ವ್ಯಾಪ್ತಿಯ ಅಡವಿಸೋಮಾಪುರ ಹದ್ದಿನ ರೈತರೊಬ್ಬರ ಜಮೀನಿನ ಹತ್ತಿರದ ಕಾಲುವೆ ದಂಡೆಯ ಮೇಲೆ ಅರ್ಧಂಬಂರ್ಧ ಸುಟ್ಟ ಅನಾಮಧೇಯ ಶವ ಪತ್ತೆಯಾದ ಬಗ್ಗೆ ತಡಸ ಠಾಣೆಯಲ್ಲಿ ಆ.25ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಹತ್ಯೆಯಾದ ವ್ಯಕ್ತಿ ಲಕ್ಷೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದ ನಿವಾಸಿ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ಹತ್ಯೆಯಾದ ಪತಿ

ತನಿಖೆಯಿಂದ ಸತ್ಯ ಬಯಲಿಗೆಳೆದ ಪೊಲೀಸರು ಈ ಕೃತ್ಯದಲ್ಲಿ ಪಾಲ್ಗೊಂಡ ಪತ್ನಿ ಸೇರಿ 7 ಜನರನ್ನು ಶುಕ್ರವಾರ ಬಂಧಿಸಿದ್ದಾರೆ. ಈ ಕುರಿತು ಲಕ್ಷೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಪ್ರಕರಣದ ಕೊಲೆಯಲ್ಲಿ ಅಂತ್ಯವಾಗಿರುವುದು ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸುವರ್ಣಗಿರಿ. ತಾಂಡಾದ ಜನರು ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯ 15 ಕಂಟೇನ್ಮೆಂಟ್ ಪ್ರದೇಶಗಳ ನಿರ್ಬಂಧ ತೆರವು

ಗದಗ: ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಸೋಂಕಿನ ಸಕಾರಾತ್ಮಕ ಪ್ರಕರಣಗಳು ವರದಿಯಾದ ಕೆಳಕಂಡ 15 ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿತ್ತು.

ಶಿರಹಟ್ಟಿ ತಾಲೂಕಿನಲ್ಲಿ ಗಣರಾಜ್ಯೋತ್ಸವ ಆಚರಣೆ ಬಗ್ಗೆ ತಹಶೀಲ್ದಾರ ನೀಡಿದ ಮಾಹಿತಿ

ಶಿರಹಟ್ಟಿ: ಪ್ರಸ್ತುತ ವರ್ಷದಲ್ಲಿ ಕೊರೊನಾ ನಿಯಮಾನುಸಾರ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ತಹಶೀಲ್ದಾರ ಯಲ್ಲಪ್ಪ…

ರಸ್ತೆ ಅಪಘಾತ ಮಗು ಸೆರಿ ಇಬ್ಬರ ದುರ್ಮರಣ

ಮುಂಡರಗಿ: ಮುಂಡರಗಿ ತಾಲೂಕಿನ ಡಂಬಳ ಮತ್ತು ಮೇವುಂಡಿ ಮಾರ್ಗ ಮಧ್ಯೆ ಮೆಕ್ಕೆ ಜೋಳ ತುಂಬಿಕೊಂಡು ಹೊರಟಿದ್ದ ಟ್ರಾಕ್ಟರಗೆ ಹಿಂದಿನಿಂದ ಬಂದ ಕಾರು ಟ್ರಾಕ್ಟರಗೆ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದ ಮಗು ಸೆರಿ ಇಬ್ಬರ ಸಾವು, ಉಳಿದವರ ಪರಿಸ್ಥಿಥಿ ಗಂಭಿರ. ಮುಂಡರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.

ಜಿಲ್ಲಾದ್ಯಂತ ಶೇಕಡ 38.98 ಮತದಾನ: ಮದ್ಯಾಹ್ನ 1ಗಂಟೆವರೆಗಿನ ವಿವರ

ಗದಗ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ ಮಧ್ಯಾಹ್ನ 1=00 ಗಂಟೆಯವರೆಗೆ ಶೇಕಡಾವಾರು ಮತದಾನ ಇಂತಿದೆ.…