ಉತ್ತರಪ್ರಭ ಸುದ್ದಿ

ಗದಗ: ಅವಳಿ ನಗರದ ಸೇರಿದಂತೆ ಜಿಲ್ಲೆಯಲ್ಲಿ ತುಳಸಿ ಪೂಜಾ (ವಿವಾಹ) ಕಾರ್ಯಕ್ರಮ ಶನಿವಾರ ಸಂಜೆ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ತುಳಸಿ ಕಟ್ಟೆ ಶುಚಿಗೊಳಿಸಿ, ಬಣ್ಣ ಹಚ್ಚಲಾಯಿತು. ಕಬ್ಬು, ಮಾವಿನ ತಳಿರು- ತೋರಣ ಹಾಗೂ ಹೂ ದಂಡೆ, ಮಾಲೆಗಳೊಂದಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.

ಮೇಣದ ಬತ್ತಿ, ಹಣತೆಯ ದೀಪಗಳಿಂದ ಆವರಣ ಬೆಳಗಿಸಲಾಗಿತ್ತು. ವಿವಿಧ ರಂಗು-ರಂಗಾದ ರಂಗವಲ್ಲಿ ಎಲ್ಲರ ಮನೆ ಮುಂದೆ ರಾರಾಜಿಸುತ್ತಿದ್ದವು. ಗಣೇಶ ಪೂಜೆ ಬಳಿಕ ಶ್ರೀಕಷ್ಣನ ಮೂರ್ತಿಗೆ ಅಭಿಷೇಕ ಪೂಜೆ ನೆರವೇರಿಸಿ, ತುಳಸಿ ಮಾತೆಗೆ ಪೂಜಿಸಲಾಯಿತು.

ದೀಪ-ಧೂಪ, ತುಪ್ಪದಾರುತಿ ಬೆಳಗಿ, ರಾಧಾ- ಕೃಷ್ಣ ಭಕ್ತಿ ಗೀತೆಗಳೊಂದಿಗೆ ಆರತಿ ಮಾಡಲಾಯಿತು. ನಗರದ ವಿವಿಧ ಕಾಲೋನಿಯಲ್ಲಿನ ಪೂಜೆಯಲ್ಲಿ ಮಹಿಳೆಯರು, ಮಕ್ಕಳು ಭಾಗವಹಿಸಿದರು.

ಅಗತ್ಯ ವಸ್ತುಗಳ ಖರೀದಿನಗರದ ಮಾರುಕಟ್ಟೆಯಲ್ಲಿ ತುಳಸಿ ಪೂಜೆ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು. ಕಬ್ಬು,ಚೆಂಡು ಹೂವು ಸೇರಿದಂತೆ ವಿವಿಧ ವಸ್ತುಗಳ ಖರೀದಿ ಮಾಡಲಾಯಿತು. ಬೆಲೆ ಏರಿಕೆ ನಡುವೆ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
Leave a Reply

Your email address will not be published. Required fields are marked *

You May Also Like

ಕೋವಿಡ್ ಲಸಿಕೆ ಪಡೆದ ಜಿ.ಎಸ್.ಪಾಟೀಲ

ಭೀಮಸೇನ್ ಜೋಶಿ ಆಸ್ಪತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್.ಪಾಟೀಲ ಕೋವಿಡ್ ಲಸಿಕೆ ಹಾಕಿಸಿಕೊಂಡರು.

ಕೇಲೂರ ಘಟನೆ: ಸಂತ್ರಸ್ಥೆಯ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು

ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕರ‍್ಯಾಚರಣೆ…

ಗದಗನಲ್ಲಿ ಇಂದು ನಾಲ್ಕು ಪಾಸಿಟಿವ್: ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ!

ಜಿಲ್ಲೆಯಲ್ಲಿ ಇಂದು 4 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.

ನರೇಗಲ್ಲ್: ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ರೋಣ ಶಿಕ್ಷಣ ಇಲಾಖೆ ವತಿಯಿಂದ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ, ನರೆಗಲ್ ನ ಕು.ರಕ್ಷಿತಾ ಪಾಟೀಲ ಹಾಗೂ ಕುಮಾರಿ ನಿವೇದಿತಾ ಕಿಟಗೇರಿ, ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.