ಉತ್ತರಪ್ರಭ ಸುದ್ದಿ

ಮುಳಗುಂದ: ಅನ್ಯಾಯಕ್ಕೊಳಗಾದ ರೈತರಿಗೆ ಆತ್ಮಸ್ಥೈರ್ಯ ತುಂಬಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರೈತ ಸಂಘ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡ ವಿಜಯಕುಮಾರ ಸುಂಕದ ಹೇಳಿದರು.

ಮುಳಗುಂದ ಸಮೀಪದ ಕುರ್ತಕೋಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆದ ಗ್ರಾಮ ಘಟಕದ ವಾರ್ಷಿಕೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿದರು.

ಸಮೀಪದ ಕುರ್ತಕೋಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶುಕ್ರವಾರ ನಡೆದ ರೈತ ಸಂಘ ಗ್ರಾಮ ಘಟಕದ 5ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದೆ, ಮಾರುಕಟ್ಟೆಯಲ್ಲಿ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತ ವಿರೋಧಿ ಕಾನೂನುಗಳನ್ನ ಸರ್ಕಾರಗಳು ರದ್ದು ಮಾಡಬೇಕು. ಪ್ರತಿಯೊಂದು ಗ್ರಾಮದ ಮನೆ ಮನೆಯಲ್ಲೂ ರೈತರು ಜಾಗೃತರಾಗಿ, ಅನ್ಯಾಯದ ವಿರುದ್ದ ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರೈತ ಸಂಘದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಈಚಘಟ್ಟಿ ಸಿದ್ದವೀರಪ್ಪ ಮಾತನಾಡಿ, ರೈತ ಬೆವರುಹರಿಸಿ ದುಡಿದರು ಯೋಗ್ಯ ಬೆಲೆ ಸಿಗುತ್ತಿಲ್ಲ ಆದರೂ ಆತ ನಿಸ್ವಾರ್ಥಿ. ಒಗ್ಗಟ್ಟಿನಲ್ಲಿ ಬಲವಿದೆ ಸಮಾಜದಲ್ಲಿ ಬೇಕು ಬೇಡಗಳ ಈಡೆರಿಕೆಗೆ ಸಂಘಟಿತ ಹೋರಾಟ ಅಗತ್ಯವಿದೆ. ನಾವು ಬೆಳೆದ ಬೆಳೆಗೆ ನಾವೇ ಬೆಲೆ ನಿಗಧಿ ಮಾಡುವ ಕಾನೂನು ಜಾರಿಯಾಗಬೇಕು. ರೈತರ ಹಿತರಕ್ಷಣೆ ಕಾಪಾಡುವ ಧ್ವನಿಯಾಗಿ ರೈತ ಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಎಂದು ಕರೆ ನೀಡಿದರು.

ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಬಸವರಾಜ ಸಾಬಳೆ,ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ, ತಾಲೂಕ ಘಟಕದ ಅಧ್ಯಕ್ಷ ಮಂಜುನಾಥ ಗೋಡೆ,ಮುಖಂಡರಾದ ಅಪ್ಪಣ್ಣ ಭಂಗಿ,ಹನಮಂತಪ್ಪ ಈಳಗೇರ,ಬಸಪ್ಪ ಕರಿಗಾರ,ಬಿ.ಆರ್.ರಾಠೋಡ,ಅಂದಪ್ಪ ಚಿಂಚಲಿ,ಅಕ್ಕಮಹಾದೇವಿ ಹೊಸಮನಿ,ಮೋದಿನಸಾಬ ಬುಕಿಟಗಾರ,ಪ್ರಭಪ್ಪ ದುಗಾಣಿ ಹಾಗೂ ವಿವಿಧ ಗ್ರಾಮಗಳ ರೈತ ಸಂಘದ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

You May Also Like

ಜಿಲ್ಲಾ ನ್ಯಾಯಾದೀಶನ ವಜಾಕ್ಕೆ ಒತ್ತಾಯಿಸಿ ಫೆ.1ರಂದು ಬಂಜಾರ ಸಮಾಜದಿಂದ ಪ್ರತಿಭಟನೆ

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…

ಸರ್ಕಾರಿ ನೌಕರಸ್ಥರಿಗೆ ಆರೋಗ್ಯ ಸೇತು ಆಪ್ ಕಡ್ಡಾಯ!

ಕೇಂದ್ರ ಸರ್ಕಾರ ಹೊರ ಗುತ್ತಿಗೆ ಸಿಬ್ಬಂದಿ ಸೇರಿದಂತೆ ಎಲ್ಲ ಕೆಲಸಗಾರರು ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಗದಗ ಬೆಟಗೇರಿ ನಗರಸಭೆಯ 35 ವಾರ್ಡುಗಳಿಗೆ ಚುನಾವಣಾ ಆಯೋಗದಿಂದ ಚುನಾವಣೆ ಘೋಷಣೆ

ಉತ್ತರಪ್ರಭ ಸುದ್ದಿಗದಗ: ದಿ 7-03-2013 ರಂದು ಚಿಕ್ಕಮಗಳೂರು, ಗದಗ – ಬೆಟಗೇರಿ, ಹೊಸಪೇಟೆ ಮತ್ತು ಶಿರಾ…

ಗುಂಡು ಮೈ ಒಳಗೆ ಹೋದರೂ ಪ್ರಜ್ಞೆ ತಪ್ಪದ ರೈ!: ಮುತ್ತಪ್ಪ ರೈ ಬದುಕಿನ ಪ್ರಮುಖ ಘಟನೆಗಳ ಮೆಲಕು

ಭೂಗತ ಲೋಕವನ್ನಾಳಿದ ವ್ಯಕ್ತಿಯ ಕಥೆಯಿದು. ಸದ್ಯ ಭೂಗತ ಲೋಕದಿಂದ ನಿವೃತ್ತಿ ಹೊಂದಿದರೂ ಕೂಡ ಮುತ್ತಪ್ಪ ರೈ ಹೆಸರು ಮಾತ್ರ ಚಾಲ್ತಿಯಲ್ಲಿಯೇ ಇತ್ತು. ಮಾಜಿ ಡಾನ್ ಮುತ್ತಪ್ಪ ರೈ ಜೀವನದಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳ ಮೆಲಕು ಇಲ್ಲಿದೆ ನೋಡಿ..