ಉತ್ತರಪ್ರಭ ಸುದ್ದಿ
ಆಲಮಟ್ಟಿ:
ಶಿಕ್ಷಣ ಇಲಾಖೆಯ ಅಭಿವೃದ್ಧಿ ಕಾರ್ಯಕ್ಕೆ ಇಡೀ ಇಲಾಖೆ, ಶಿಕ್ಷಕರು, ಮಕ್ಕಳು, ಸಂಘಟನೆಗಳು, ಪಾಲಕರು-ಪೋಷಕರು, ಅಧಿಕಾರಿಗಳು ಒಂದು ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಿ.ಸಿ. ನಾಗೇಶ್ ರವರ ನಾಯಕತ್ವದಲ್ಲಿ ಶಿಕ್ಷಣ ಇಲಾಖೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.

ಒಟ್ಟಾರೆಯಾಗಿ ಶಿಕ್ಷಣ ಇಲಾಖೆ ಹಾಗು ಶಿಕ್ಷಕರ ಮತ್ತು ಶಾಲಾ ಮಕ್ಕಳ ಅಭುಧ್ಯೇಯಕ್ಕಾಗಿ ಸಚಿವರು ಕೈಗೊಂಡಿರುವ ಸಮಯೋಚಿತ ಕಾರ್ಯಗಳು ಸ್ತುತ್ಯಾರ್ಹವಾಗಿವೆ ಎಂದರು. ಶೈಕ್ಷಣಿಕ ವಲಯ ಗುಣಮಟ್ಟದೊಂದಿಗೆ ಪ್ರಗತಿಯತ್ ಪ್ರಾಂಜಲ್ಯ ಮನಸ್ಸಿನಿಂದ ಕೊಂಡೊಯ್ಯಲು ಯತ್ನಿಸುತ್ತಿರುವುದು ನವದಿಸೆಯ ಸಂಚಲನ ಎಲ್ಲರಲ್ಲೂ ಮೂಡಿಸುತ್ತಿದೆ ಎಂದು ಅವರು ಸಚಿವ ಬಿ.ಸಿ.ನಾಗೇಶ್ ಅವರ ವ್ಯಕ್ತಿತ್ವ ಬಣ್ಣಿಸಿದ್ದಾರೆ.

ಈ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ಬೇಡಿಕೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ ಶಿಕ್ಷಣ ಸಚಿವರು, ಪ್ರಧಾನ ಕಾರ್ಯದಶಿ೯ಗಳು, ಆಯುಕ್ತರು ಸ್ಪಂದಿಸುತ್ತಿದ್ದು, ಶೇ 25 ಖಾಲಿ ವಗಾ೯ವಣೆ ಇಲ್ಲ ಎಂಬ ಅಂಶ ಹೊರತುಪಡಿಸಿ ಇನ್ನುಳಿದ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ, ಅವರಿಗೆ ರಾಜ್ಯದ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೆವೆ ಎಂದರು. ವರ್ಗಾವಣೆಯ ವಿಷಯದಲ್ಲಿಯೂ ಇನ್ನಷ್ಟು ಪ್ರಯತ್ನ ಮುಂದುವರೆಸಲಾಗುತ್ತದೆ ಎಂದು ಶಂಭುಲಿಂಗನಗೌಡ ಪಾಟೀಲ ಹಾಗೂ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಆಸ್ಪತ್ರೆಗಳ ಯಾವ ಸೌಲಭ್ಯವಿರಬೇಕು? : ಸೋಂಕಿತರು ಹಾಗು ಕುಟುಂಬಸ್ಥರಿಗೆ ನೀಡಬೇಕಾದ ಮಾಹಿತಿ ಇಲ್ಲಿದೆ…

ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಸೂಚಿಸಿದರು.

ಲಕ್ಷ್ಮೇಶ್ವರದಲ್ಲಿ : ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಕೊರೋನಾ ಎರಡನೇ ಅಲೆ ಅತೀ ವೇಗವಾಗಿ ಹರಡುತ್ತಿರುವುದರಿಂದ ಶನಿವಾರ, ಭಾನುವಾರ ಸರಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ ಅನ್ನು ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.

ರಾಯಚೂರ ಜಿಲ್ಲೆಯಲ್ಲಿಂದು 14ಕೊರೊನಾ ಪಾಸಿಟಿವ್!

ರಾಯಚೂರ: ಜಿಲ್ಲೆಯಲ್ಲಿಂದು 14 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 457ಕ್ಕೆ…

ಹೊಸೂರ ಗ್ರಾಮದ ಮನೆಗಳ ಅಡಿಪಾಯದಲ್ಲಿ ಉಕ್ಕಿಹರಿಯುತ್ತಿದೆ ಅಂತರ್ಜಲ

ಮುಳಗುಂದ: ಸಮೀಪದ ಹೊಸೂರ ಗ್ರಾಮದ ದೇಶಪಾಂಡೆ ವಾಡೆಯ ಸುತ್ತಮುತ್ತಲಿನ ನೂರಾರು ಮನೆಗಳ ಅಡಿಪಾಯ, ಅಂಗಳದಲ್ಲಿ ಅತಿವೃಷ್ಟಿಯಿಂದ ಅಂತರ್ಜಲ ಹೆಚ್ಚಾಗಿ ನೀರು ಉಕ್ಕಿಹರಿಯುತ್ತಿದೆ.