ಉತ್ತರಪ್ರಭ ಸುದ್ದಿ

ಚಿಟಗುಪ್ಪ: ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಈ ಭಾಗದ ಜನಪ್ರೀಯ ನಾಯಕರೆಂದೇ ಜನಪ್ರೀಯತೆ ಪಡೆದ  ಶ್ರೀ ಸಿದ್ದು ಪಾಟೀಲರ ಸೇವಾ ಕಳಕಳಿಯ ಕಾರ್ಯ ಚಟುವಟಿಕೆಗಳು ಅನನ್ಯವಾಗಿವೆ. ಪ್ರಯುಕ್ತ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುವ ಮೂಲಕ ಸಿದ್ದು ಪಾಟೀಲರು ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಯಾಕೇ ಈ ಮಾತು ಈಗೇಕೆ ಹೇಳಬೇಕಾಗಿತ್ತು ಎಂದರೆ ಹುಮಾನಾಬಾದ ವಿಧಾನಸಭಾ ಮತಕ್ಷೇತ್ರದ ತಾಳಮಡಗಿ ಗ್ರಾಮದ ಬಡ ರೈತ ಗೊಂಡ ಸಮಾಜದ ಸುಭಾಷ ತಂದೆ ಬೀರಪ್ಪ ಬಾಜೋಳಗಿ ಅವರ ಆಕಳು ಹೊಲದಲ್ಲಿ ಮೇಯುವಾಗ ಹಾವು ಕಡಿದು ಸ್ಥಳದಲ್ಲೇ ಸಾವನಪ್ಪಿತ್ತು. ಆಕಳು ಮನೆಗೆ ಆದಾಯ ತರುವ ಮೂಲವಾಗಿತ್ತು. ಕಾರಣ ಆಕಳು ಸಾವನಪ್ಪಿದ ಸುದ್ದಿ ತಿಳಿದು ಸಿದ್ದು ಪಾಟೀಲರು ರೈತನ ಮೆನೆಗೆ ಬೆಟ್ಟಿ ನೀಡಿ, ಆರ್ಥಿಕ ಸಹಾಯಧನ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಮೂಲಕ ಮಾತನಾಡಿ ಸರ್ಕಾರದ ಸೌಲಭ್ಯ  ರೈತರಿಗೆ ಒದಗಿಸುವಂತೆ ಮನವಿ ಮಾಡಿಕೊಂಡರು. ರೈತರೊಂದಿಗೆ ನಾನು ಸದಾ ಇರುತ್ತೇನೆ, ನೀವೆಲ್ಲರೂ ಧೈರ್ಯವಾಗಿ ಇರಬೇಕೆಂದರು. 

ಈ ಸಂದರ್ಭದಲ್ಲಿ ಅನೇಕ ಗೊಂಡ ಸಮಾಜದ ಮುಖಂಡರು ಗ್ರಾಮ ಪಂಚಾಯತ ಸದ್ಯಸ್ಯರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಇಂದು ಕೇವಲ 4 ಸಾವಿರ ಗಡಿ ದಾಟಿದ ಮಹಾಮಾರಿ!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುವತ್ತ ಹೆಜ್ಜೆ ಹಾಕಿದೆ. ಇಂದು ರಾಜ್ಯದಲ್ಲಿ 4,471 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು 52 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಗೋವಾ ರಾಜ್ಯದ ಕಲಂಗೊಟ್ ಬೀಚ್ ನಲ್ಲಿ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ

ಗೊವಾ: ಸಂತ ಶ್ರೀ ಸೇವಾಲಾಲ್ ಮಹಾರಾಜರ 283 ನೆಯ ಜಯಂತಿಯನ್ನು 15/2/22 ರಂದು ಬೆಳಗ್ಗೆ 10:00…

ರೋಣ ಸಾಹಿತ್ಯ ಭವನದಲ್ಲಿ ಶ್ರೀ ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ

ರೋಣ: ಸಾಹಿತ್ಯ ಭವನದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ…