ಉತ್ತರಪ್ರಭ ಸುದ್ದಿ

ಚಿಟಗುಪ್ಪ: ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಯಾವುದೇ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಜನಸಾಮಾನ್ಯರ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಈ ಭಾಗದ ಜನಪ್ರೀಯ ನಾಯಕರೆಂದೇ ಜನಪ್ರೀಯತೆ ಪಡೆದ  ಶ್ರೀ ಸಿದ್ದು ಪಾಟೀಲರ ಸೇವಾ ಕಳಕಳಿಯ ಕಾರ್ಯ ಚಟುವಟಿಕೆಗಳು ಅನನ್ಯವಾಗಿವೆ. ಪ್ರಯುಕ್ತ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುವ ಮೂಲಕ ಸಿದ್ದು ಪಾಟೀಲರು ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಯಾಕೇ ಈ ಮಾತು ಈಗೇಕೆ ಹೇಳಬೇಕಾಗಿತ್ತು ಎಂದರೆ ಹುಮಾನಾಬಾದ ವಿಧಾನಸಭಾ ಮತಕ್ಷೇತ್ರದ ತಾಳಮಡಗಿ ಗ್ರಾಮದ ಬಡ ರೈತ ಗೊಂಡ ಸಮಾಜದ ಸುಭಾಷ ತಂದೆ ಬೀರಪ್ಪ ಬಾಜೋಳಗಿ ಅವರ ಆಕಳು ಹೊಲದಲ್ಲಿ ಮೇಯುವಾಗ ಹಾವು ಕಡಿದು ಸ್ಥಳದಲ್ಲೇ ಸಾವನಪ್ಪಿತ್ತು. ಆಕಳು ಮನೆಗೆ ಆದಾಯ ತರುವ ಮೂಲವಾಗಿತ್ತು. ಕಾರಣ ಆಕಳು ಸಾವನಪ್ಪಿದ ಸುದ್ದಿ ತಿಳಿದು ಸಿದ್ದು ಪಾಟೀಲರು ರೈತನ ಮೆನೆಗೆ ಬೆಟ್ಟಿ ನೀಡಿ, ಆರ್ಥಿಕ ಸಹಾಯಧನ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಮೂಲಕ ಮಾತನಾಡಿ ಸರ್ಕಾರದ ಸೌಲಭ್ಯ  ರೈತರಿಗೆ ಒದಗಿಸುವಂತೆ ಮನವಿ ಮಾಡಿಕೊಂಡರು. ರೈತರೊಂದಿಗೆ ನಾನು ಸದಾ ಇರುತ್ತೇನೆ, ನೀವೆಲ್ಲರೂ ಧೈರ್ಯವಾಗಿ ಇರಬೇಕೆಂದರು. 

ಈ ಸಂದರ್ಭದಲ್ಲಿ ಅನೇಕ ಗೊಂಡ ಸಮಾಜದ ಮುಖಂಡರು ಗ್ರಾಮ ಪಂಚಾಯತ ಸದ್ಯಸ್ಯರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಸಾರಿಗೆ ಸಂಸ್ಥೆ ಸಿಬ್ಬಂದಿಗೂ ವಕ್ಕರಿಸಿದ ಸೋಂಕು!

ಕಾರವಾರ: ಬಿಎಂಟಿಸಿ ನೌಕರರಲ್ಲಿ ಇತ್ತೀಚೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಸದ್ಯ ಸಾರಿಗೆ ಸಂಸ್ಥೆಯ ನೌಕರಸ್ಥರಿಗೂ ಇದರ…

ಎರಡನೇ ಪ್ರಿಯಕರನಿಂದ ಮೊದಲನೇ ಪ್ರಿಯಕರನ ಮೇಲಿನ ಸೇಡು ತೀರಿಸಿಕೊಂಡ ಪ್ರೇಯಸಿ!

ಶಿವಮೊಗ್ಗ : ಎರಡನೇ ಪ್ರಿಯಕರನಿಂದ ಮೊದಲ ಪ್ರಿಯಕರನನ್ನು ಪ್ರೇಯಸಿಯೇ ಕೊಲೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸಾಧಕಿ ಸುಧಾಮೂರ್ತಿಗೆ ಮುತ್ತಗಿ ಗ್ರಾಮಸ್ತರಿಂದ ಸಂಮಾನ..!

ಉತ್ತರಪ್ರಭ ಸುದ್ದಿ ಆಲಮಟ್ಟಿ:2023ರ ಪದ್ಮ ಭೂಷಣ ಪ್ರಶಸ್ತಿ ಪುರಸ್ಕರಿಸಿದ ಸಾಧಕಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ…

ವಾರಾಂತ್ಯದ ಕಫ್ರ‍್ಯೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

ಗದಗ : ರಾಜ್ಯಾದ್ಯಂತ ಸೋಂಕು ನಿಯಂತ್ರಣಕ್ಕಾಗಿ ರ‍್ಕಾರ ಜಾರಿಗೊಳಿಸಿರುವ ಮರ‍್ಗಸೂಚಿಗಳನ್ನು ಜಿಲ್ಲೆಯ ಕಂದಾಯ, ಪೊಲೀಸ್ ಹಾಗೂ…