ಉತ್ತರಪ್ರಭ ಸುದ್ದಿ

ಗದಗ: ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ರೈತರು ಶಿಂಗಟಾಲೂರ ಏತ ನೀರಾವರಿ ಎಡದಂಡೆ ಕಾಲುವೆ ಕಳಪೆ ಕಾಮಗಾರಿ ಹಾಗೂ ರೈತರ ಜಮೀನುಗಳಿಗೆ 3-4 ನಾಲ್ಕು ವರ್ಷದಿಂದ ನಷ್ಟದ ಪರಿಹಾರವನ್ನು ಒದಗಿಸಬೇಕೆಂದು, ಡೋಣಿ ಗ್ರಾಮದ ರೈತರು ಕಳೆದ 3-4ವರ್ಷದಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಯಾವುದೇ ರೀತಿಯ ಪರಿಹಾರ ಒದಗಿಸಲು ಹಿನ್ನಡೆಯಾಗಿದ್ದು ಕಾರಣದಿಂದಾಗಿ ರೈತರು 06/08/2022ರಂದು ಮಾನ್ಯ ಜಿಲ್ಲಾಡಳಿತ ಭವನದ ಮುಂದೆ ಧರಣಿ ಸತ್ಯಾಗ್ರಹ ಪ್ರಾರಂಭ ಮಾಡಿ ಇಂದಿಗೆ 11 ದಿನಗಳಾದರೂ ಅಧಿಕಾರಿಗಳು ಪರಿಹಾರ ಒದಗಿಸುವಲ್ಲಿ ವಿಫಲರಾಗಿರುವ ಕಾರಣ, ರೈತರ ವಿವಿಧ ಬೇಡಿಕೆಗಳನ್ನ ಈಡೇರಿಸಬೇಕೆಂದು ಹಾಗೂ ಶಿಂಗಟಾಲೂರ ಏತ ನೀರಾವರಿ ಎಡದಂಡೆ ಕಳಪೆಯಾಗಿದ್ದರ ಬಗ್ಗೆ ಪರಿಶೀಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತನಿಖೆ ಮಾಡಲು ಸೂಕ್ತ ನಿರ್ದೇಶನ ನೀಡಬೇಕೆಂದು ಹಾಗೂ ಕಳೆದ 3-4ವರ್ಷದಿಂದ ರೈತರ ಜಮೀನುಗಳಿಗೆ ಆದ ನಷ್ಟ ಪರಿಹಾರವನ್ನ ಶಿರ್ಘವೆ ಒದಗಿಸಿಕೊಡಬೇಕೆಂದು ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಕಳೆದ ಮೂರು ನಾಲ್ಕು ವರ್ಷದಿಂದ ರೈತರ ವಿವಿಧ ಬೇಡಿಕೆಗಳನ್ನ ಶಿರ್ಘವೇ ಈಡೇರಿಸಲು ತಾವೆ ಜವಾಬ್ದಾರಿ ತಗೆದುಕೊಂಡು ಜಮೀನುಗಳಿಗೆ ಆದ ನಷ್ಟ ಪರಿಹಾರ ಒದಿಸಿಕೊಡುತ್ತೇವೆ, ಅಂತಾ ಭರವಸೆ ನೀಡಿದರು. ಅವರ ಭರವಸೆಗೆ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದ ರೈತರು ಉಪವಾಸ ಸತ್ಯಾಗ್ರಹವನ್ನ ಹಿಂಬಪಡೆಕೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತ ಸೇನಾ ಕರ್ನಾಟಕ ಗದಗ ಜಿಲ್ಲಾ ಸಂಚಾಲಕರಾದ ಮಂಜಯ್ಯಸ್ವಾಮಿ ಅರವಟಗಿಮಠ ರೈತ ಮುಖಂಡರುಗಳಾದ ಶಂಕರಗೌಡ ಹೊಸಮನಿ, ನಾಗಲಿಂಗಯ್ಯ ಮುತ್ತಾಳಮಠ

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ: ಶಾಸಕರು ಹೇಳಿದರೆ ಅಕ್ರಮ ಮರಳು ಗಣಿಗಾರಿಕೆಗೆ ಅನುಮತಿ ಕೊಡ್ತಾರಾ ಅಧಿಕಾರಿಗಳು?

ಮರಳು ನೀತಿ ಅನ್ವಯ ಮರಳು ಗಣಿಗಾರಿಕೆಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ನೀಡಲಾಗಿದೆ. ಆದರೆ ಮರಳು ಗುತ್ತಿಗೆ ಪಡೆದ ಗುತ್ತಿಗೆದಾರರು ಎಗ್ಗಿಲ್ಲದೇ ಸಕ್ರಮದ ಹೆಸರಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದಕ್ಕೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಅವರ ಪೋಷಣೆಯೂ ಇದೆ ಎನ್ನುವ ಮಾತುಗಳು ಕೇಳಲಾರಂಭಿಸಿವೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕೊಕ್ಕರಗುಂದಿ ಬೂದಿಹಾಳ ಗ್ರಾಮದಲ್ಲಿರುವ ಕಲ್ಪವೃಕ್ಷ ಮರಳು ಗುತ್ತಿಗೆ ಪಾಯಿಂಟ್ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 1105 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 14295 ಕ್ಕೆ ಏರಿಕೆಯಾದಂತಾಗಿದೆ.

ಪದವಿ ಕಾಲೇಜು ತೆರೆಯಲು ಓಕೆ….ಪಿಯು ಕಾಲೇಜು ಮಾತ್ರ ಸದ್ಯಕ್ಕೆ ಇಲ್ಲ!

ಬೆಂಗಳೂರು : ಕಾಲೇಜುಗಳನ್ನು ಪ್ರಾರಂಭಿಸಲು ದಿನಾಂಕ ನಿಗದಿ ಪಡಿಸಲಾಗಿದ್ದು, ಪಿಯು ಕಾಲೇಜು ಸದ್ಯಕ್ಕೆ ಆರಂಭ ಆಗುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ.

ದೇಶ ಸೇವೆಗೆ ಅವಕಾಶ ನೀಡುವಂತೆ ಹೊಮ್ ಗಾರ್ಡ ನಿಂದ ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ

ರಾಯಚೂರು: ನನ್ನ ದೇಶದ ಸೈನಿಕರು ಸತ್ತಾಗಿನಿಂದ ನನಗೆ ನಿದ್ದೆ ಬರುತ್ತಿಲ್ಲ ಚೀನಾ ದೇಶದ ವಿರುದ್ಧ ಸೇಡು…