ಉತ್ತರಪ್ರಭ ಸುದ್ದಿ
ನಿಡಗುಂದಿ:
ಆಧುನಿಕ ಯುಗದಲ್ಲಿ ರಂಗಭೂಮಿ ಕಲಾವಿದರು ಮೂಲೆ ಗುಂಪಾದರು ಎಂಬ ಮಾತೆಲ್ಲ ಶುದ್ಧ ಸುಳ್ಳು. ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ ಕೂಡ ರಂಗಭೂಮಿ ತನ್ನ ಗತ ಪರಂಪರೆಯೊಂದಿಗೆ ವಾಸ್ತವಿಕ ಜಗತ್ತಿನ ಆವಿಷ್ಕಾರಗಳನ್ನೆಲ್ಲ ಮೈ ಗೂಡಿಸಿಕೊಂಡು ಮರುಜನ್ಮ ಪಡೆದಿದೆ ಎಂದು ಹಿರಿಯ ಅಪ್ಪಟ ಸ್ತ್ರೀ ರಂಗ ಕಲಾವಿದ ವಿಜಯಕುಮಾರ್ ಮಾನ್ವಿ ಹೇಳಿದರು. ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮಕ್ಕೆ ಆಗಮಿಸಿದ್ದ ಅವರನ್ನು ಹಾಗೂ ಮತ್ತರ‍್ವ ಹಿರಿಯ ರಂಗ ಕಲಾವಿದೆ ಕೆ.ಅಂಜನಾ ಅವರನ್ನು ಸ್ಥಳೀಯ ರಂಗಭೂಮಿ ಅಭಿಮಾನಿಗಳ ಬಳಗ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ದೂರದರ್ಶನ ಮೊಬೈಲ್ ನಡುವೆಯೂ ರಂಗಭೂಮಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿರುವಲ್ಲಿ ಇಲ್ಲಿನ ನೈಜ ಕಲೆಯೇ ಮೂಲ ಕಾರಣವಾಗಿದೆ. ಕಲಾ ಪ್ರೇಮಿಗಳೆಲ್ಲರೂ ರಂಗಭೂಮಿಯನ್ನು, ಕಲಾವಿದರನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಗೌರವಿಸುವ ಅನಿವರ‍್ಯತೆಯೂ ಇದೆ ಎಂದರು. ಸಂಗೀತ ಕಲಾವಿದ ಪ್ರಭು ಗುಡ್ಡದ ಮಾತನಾಡಿ, ಆಧುನಿಕ ವೈಭವದ ನಡುವೆಯೂ ಕಳೆದ ಎರಡು ದಶಕಗಳಿಂದ ಪುರುಷರಾಗಿದ್ದರೂ ಅಪ್ಪಟ ಸ್ತ್ರೀ ಕಲಾವಿದೆಯ ಪಾತ್ರ ನಿರ್ವಹಣೆ ಮಾಡಿ, ಜನರನ್ನು ರಂಜಿಸುತ್ತಾ ಬಂದಿರುವ ವಿಜಯಕುಮಾರ್ ಮಾನ್ವಿ ಅವರು ಒಂದು ಪವಾಡವೇ ಸರಿ ಎಂದರು.
ದೇವಾಂಗಮುನಿ ದೇವಾಂಗಮಠ, ಅಮೃತ ಯಾದವ, ವಿನೋದ ಭಜಂತ್ರಿ, ಜಗದೀಶ ಕಮತಗಿ, ರೇಖಾ ಕುಪ್ಪಸ್ತ, ಚಂದ್ರಶೇಖರ ಜಾಧವ, ರಾಜಕುಮಾರ ಬಡಿಗೇರ ಇದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 267 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು ಕೊರೊನಾ ಪಾಸಿಟಿವ್ 267 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 4063 ಕ್ಕೆ ಏರಿಕೆಯಾದಂತಾಗಿದೆ.

ದಿಶಾ ರವಿ ಪರ ಧ್ವನಿಯೆತ್ತುವ ಅಗತ್ಯವಿದೆ

ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಶಾ ರವಿ ಬಂಧನವನ್ನು ಸಾಮಾಜಿಕ ಜಾಲತಾಣದ ಮೂಲಕ ನಟಿ ರಮ್ಯಾ ವಿರೋಧಿಸಿದ್ದಾರೆ. 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಜೈಲಿನಲ್ಲಿದ್ದಾರೆ. ಇದಕ್ಕೆ ನಾವೆಲ್ಲರು ಸಾಮೂಹಿಕವಾಗಿ ಜವಾಬ್ದಾರರಾಗುತ್ತೇವೆ. ಬಹಳ ದಿನಗಳಿಂದ ಇಂತಹ ಅನ್ಯಾಯವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಮೂಂದುಡಲು ಕಾರಣವೆನು…?

ಉತ್ತರಪ್ರಭಚುನಾವಣೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದ್ದ. ಸಿದ್ದರಾಮಯ್ಯ, ಡಿಕೆಶಿ…

ಪಿ.ಎಸ್.ಐ ನೇಮಕಾತಿ ವಯೋಮಿತಿ ಹೆಚ್ಚಳ: ಗೃಹ ಸಚಿವ ಬೊಮ್ಮಾಯಿ

ಪಿ.ಎಸ್.ಐ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಈ ಕುರಿತು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.