ಉತ್ತರಪ್ರಭ ಸುದ್ದಿ
ನಿಡಗುಂದಿ:
ಆಧುನಿಕ ಯುಗದಲ್ಲಿ ರಂಗಭೂಮಿ ಕಲಾವಿದರು ಮೂಲೆ ಗುಂಪಾದರು ಎಂಬ ಮಾತೆಲ್ಲ ಶುದ್ಧ ಸುಳ್ಳು. ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ ಕೂಡ ರಂಗಭೂಮಿ ತನ್ನ ಗತ ಪರಂಪರೆಯೊಂದಿಗೆ ವಾಸ್ತವಿಕ ಜಗತ್ತಿನ ಆವಿಷ್ಕಾರಗಳನ್ನೆಲ್ಲ ಮೈ ಗೂಡಿಸಿಕೊಂಡು ಮರುಜನ್ಮ ಪಡೆದಿದೆ ಎಂದು ಹಿರಿಯ ಅಪ್ಪಟ ಸ್ತ್ರೀ ರಂಗ ಕಲಾವಿದ ವಿಜಯಕುಮಾರ್ ಮಾನ್ವಿ ಹೇಳಿದರು. ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮಕ್ಕೆ ಆಗಮಿಸಿದ್ದ ಅವರನ್ನು ಹಾಗೂ ಮತ್ತರ‍್ವ ಹಿರಿಯ ರಂಗ ಕಲಾವಿದೆ ಕೆ.ಅಂಜನಾ ಅವರನ್ನು ಸ್ಥಳೀಯ ರಂಗಭೂಮಿ ಅಭಿಮಾನಿಗಳ ಬಳಗ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ದೂರದರ್ಶನ ಮೊಬೈಲ್ ನಡುವೆಯೂ ರಂಗಭೂಮಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡು ಬಂದಿರುವಲ್ಲಿ ಇಲ್ಲಿನ ನೈಜ ಕಲೆಯೇ ಮೂಲ ಕಾರಣವಾಗಿದೆ. ಕಲಾ ಪ್ರೇಮಿಗಳೆಲ್ಲರೂ ರಂಗಭೂಮಿಯನ್ನು, ಕಲಾವಿದರನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಗೌರವಿಸುವ ಅನಿವರ‍್ಯತೆಯೂ ಇದೆ ಎಂದರು. ಸಂಗೀತ ಕಲಾವಿದ ಪ್ರಭು ಗುಡ್ಡದ ಮಾತನಾಡಿ, ಆಧುನಿಕ ವೈಭವದ ನಡುವೆಯೂ ಕಳೆದ ಎರಡು ದಶಕಗಳಿಂದ ಪುರುಷರಾಗಿದ್ದರೂ ಅಪ್ಪಟ ಸ್ತ್ರೀ ಕಲಾವಿದೆಯ ಪಾತ್ರ ನಿರ್ವಹಣೆ ಮಾಡಿ, ಜನರನ್ನು ರಂಜಿಸುತ್ತಾ ಬಂದಿರುವ ವಿಜಯಕುಮಾರ್ ಮಾನ್ವಿ ಅವರು ಒಂದು ಪವಾಡವೇ ಸರಿ ಎಂದರು.
ದೇವಾಂಗಮುನಿ ದೇವಾಂಗಮಠ, ಅಮೃತ ಯಾದವ, ವಿನೋದ ಭಜಂತ್ರಿ, ಜಗದೀಶ ಕಮತಗಿ, ರೇಖಾ ಕುಪ್ಪಸ್ತ, ಚಂದ್ರಶೇಖರ ಜಾಧವ, ರಾಜಕುಮಾರ ಬಡಿಗೇರ ಇದ್ದರು.

Leave a Reply

Your email address will not be published. Required fields are marked *

You May Also Like

ಶೀಘ್ರವಾಗಿ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾರಂಭಿಸಿಲು: ಮನವಿ

ಶಿರಹಟ್ಟಿ ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು, ಸ್ಥಳೀಯವಾಗಿ ಎಪಿಎಂಸಿ ಸ್ಥಾಪನೆ ಮಾಡಬೇಕೆಂದು ಮಂಗಳವಾರ ತಹಶಿಲ್ದಾರ ಮೂಲಕ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕ ಘಟಕದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ಲಾಕ್ ಡೌನ್ ಇಲ್ಲ!

ಬೆಂಗಳೂರು : ಲಾಕ್ ಡೌನ್ ತೆರವುಗೊಂಡ ನಂತರ ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಸ್ಪೋಟಗೊಂಡಿದೆ. ಹೀಗಾಗಿ…

ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ನಿನ್ನೆ ಪತ್ತೆಯಾದ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ?

ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿದೆ. ಕಳೆದ 24 ಭಾರತ ದೇಶದಲ್ಲಿ ಸೋಂಕಿತರು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ. ಕೊರೊನಾ ವಾರಿಯರ್ಸ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಇದರಿಂದ ತಿಳಿದು ಬರುತ್ತಿದೆ. ಸದ್ಯ ದೇಶದಲ್ಲಿ 9,07,883 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 67,57,132ಕ್ಕೆ ಏರಿಕೆ ಕಂಡಿದೆ. ದೇಶದಲ್ಲಿ ಇದುವರೆಗೂ 8,22,71,657 ಜನ ಕೊರೊನಾ ಟೆಸ್ಟ್ ಗೆ ಒಳಪಟ್ಟಿದ್ದಾರೆ.ಗಂಟೆಗಳಲ್ಲಿ 72,049 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಶಾರ್ಟ್ ಸರ್ಕ್ಯೂಟ್: ಭಾರತ್ ಗ್ಯಾಸ್ ವಿತರಣಾ ಕಚೇರಿಯಲ್ಲಿ ಬೆಂಕಿ!

ಶಾರ್ಟ್ ಸರ್ಕ್ಯೂಟ್ ನಿಂದ ಗ್ಯಾಸ್ ಕಚೇರಿಗೆ ಬೆಂಕಿ ಬಿದ್ದ ಘಟನೆ ಗದಗ ನಗರದಲ್ಲಿ ನಡೆದಿದೆ. ಇಲ್ಲಿನ ಭಾರತ್ ಗ್ಯಾಸ್ ಆಫೀಸಿಗೆ ಬೆಂಕಿ ಬಿದ್ದಿದ್ದು,ಯಾವುದೇ ಪ್ರಾಣ ಹಾನಿ ಸಂಭವಿಸದೇ ಭಾರಿ ಅನಾಹುತ ತಪ್ಪಿದಂತಾಗಿದೆ.