ಉತ್ತರಪ್ರಭ ಸುದ್ದಿ

ಬಸವನಬಾಗೇವಾಡಿ:

ಶಿವಾನಂದ ಪಾಟೀಲ ಎರಡೂ ಬಾರಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಸ್ಪರ್ಧಿಸಿದಾಗ ಎರಡೂ ಬಾರಿ ಸಿದ್ಧರಾಮಯ್ಯ ಆಗಮಿಸಿ ಕುರುಬ ಸಮಾಜ ಸೇರಿದಂತೆ ಎಲ್ಲಾ ಜನಾಂಗಗಳು ಪಾಟೀಲರಿಗೆ ಬೆಂಬಲಿಸಲು ಮನವಿ ಮಾಡಿದ್ದರು. ಅವರ ಮನವಿಯ ಮೇರೆಗೆ ಅಹಿಂದ ಮತಗಳು ಕ್ರೋಡಿಕೃತಗೊಂಡು ಶಿವಾನಂದ ಪಾಟೀಲ ಆರಿಸಿ ಬರಲು ಸಾಧ್ಯವಾಯಿತು.

ಆದರೆ ಈಚೆಗೆ ದಾವಣಗೆರೆಗೆ ತೆರಳಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡದ ಕಾರಣ, ಸಿದ್ಧರಾಮಯ್ಯನವರ ಅಭಿಮಾನಿಗಳು ತಾಲ್ಲೂಕಿನಾದ್ಯಂತ ಸ್ವಂತ ಖರ್ಚಿನಲ್ಲಿ ಹೋಗಬೇಕಾಯಿತು. ಇದು ಬಡ ಅಭಿಮಾನಿಗಳಿಗೆ ತೊಂದರೆಯಾಯಿತು ಎಂದು ಅವರು ಆರೋಪಿಸಿದ್ದಾರೆ.

ಬೇನಾಳ, ಅರಳದಿನ್ನಿ, ಬೀರಲದಿನ್ನಿ, ಗಣಿ, ಚಿಮ್ಮಲಗಿ, ಕುರಬರದಿನ್ನಿ, ಕವಲಗಿ ಸೇರಿದಂತೆ 20 ಕ್ಕೂ ಹೆಚ್ಚು ಗ್ರಾಮಗಳ ಸಿದ್ಧರಾಮಯ್ಯ ಅಭಿಮಾನಿಗಳಿಗೆ ತೊಂದರೆಯಾಗಿದೆ, ಈ ಬಗ್ಗೆ ಶಾಸಕರ ಆಪ್ತರಿಗೆ, ಬಸವನಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕರೆ ಮಾಡಿದರೂ ಸ್ಪಂದನೆ ದೊರೆಯಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

2018 ರಲ್ಲಿ ಅಲ್ಪ ಮತದಿಂದ ವಿಜಯಿಯಾದ ಶಿವಾನಂದ ಪಾಟೀಲರು ವಿಜಯೋತ್ಸವದಲ್ಲಿ ಬಹಿರಂಗ ಭಾಷಣದಲ್ಲಿ, ತಮಗೆ ಬೆಂಬಲ ನೀಡಿದ ಜನಾಂಗಗಳು ಹಾಗೂ ಪ್ರದೇಶಗಳ ಬಗ್ಗೆ ಹೇಳಿಕೊಂಡಿದ್ದರು. ಜಯದ ಹಿಂದೆ ಸಿದ್ಧರಾಮಯ್ಯನವರ ಅಭಿಮಾನಿಗಳು ಹಾಗೂ ತಾಲ್ಲೂಕಿನ ಇಡೀ ಹಾಲುಮತ ಸಮಾಜ ಸೇರಿ ಅಹಿಂದ ಮತದಾರರು ಇದ್ದಾರೆ, ಮುಂದಿನ ಚುನಾವಣಾ ಸಂದರ್ಭದಲ್ಲಿ ಯಾವ ಮಾನದಂಡ ಅನುಸರಿಸಬೇಕು ಎನ್ನುವುದನ್ನು ತೀರ್ಮಾನಿಸಲಾಗುವುದು ಎಂದು ಸಿದ್ಧರಾಮಯ್ಯ ಅಭಿಮಾನಿ ಯುವಕರು ತಿಳಿಸಿದ್ದಾರೆ.

ಈ ಹೇಳಿಕೆಗೆ ಪ್ರವೀಣ ವಾಲೀಕಾರ, ರಮೇಶ ಮಾಗಿ, ಬಸವರಾಜ ಕುರಿ, ಜಾನು ಸಿದ್ಧನಾಥ, ಯಲಗೂರೇಶ ಮೇಟಿ, ರವಿ ಕಾಳಗಿ, ನಾಗು ಹೊಸಮನಿ, ಬಸು ಹಳೇಮನಿ, ಬೀರು ಸುನಗದ ಕೂಡಾ ಈ ಹೇಳಿಕೆಗೆ ಬೆಂಬಲಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಮುಂಬೈ ಎಕ್ಸಪ್ರೆಸ್ ನಲ್ಲಿ ಬಂದಿಳಿದರು 124 ಜನ..!

ಮುಂಬೈನಲ್ಲಿದ್ದ ಜನರು ಇಂದು ಮುಂಬೈ-ಗದಗ ಎಕ್ಸಪ್ರೆಸ್ ರೈಲಿನ ಮೂಲಕ ಗದಗ ನಗರಕ್ಕೆ ಆಗಮಿಸಿದರು. ಇದರಲ್ಲಿ 124 ಜನರು ರೈಲಿನ ಮೂಲಕ ನಗರಕ್ಕೆ ಆಗಮಿಸಿದರು.

ಎಮ್.ಎಲ್.ಎ ಸಾಹೇಬರೆ ಮಾಸ್ಕ್ ಹಾಕ್ಕೊಳ್ಳಿ ಪ್ಲೀಸ್..!

ಶಾಸಕರಾಗಿ ಜನರ ಆರೋಗ್ಯದ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದರಲ್ಲ ಎನ್ನುವುದು ನಿಜವಾಗಿಯೂ ಪ್ರಶಂಸನೀಯವೇ. ಆದರೆ ಯಾವುದನ್ನು ಪಾಲನೆ ಮಾಡುವ ಕುರಿತು ಶಾಸಕರು ಮಾತನಾಡುತ್ತಿದ್ದರೋ ಅದನ್ನೇ ಶಾಸಕರು ಮರೆತಿದ್ದರು.

ಚುನಾವಣೆ ಮುಂದೂಡಲು ಸರ್ಕಾರದ ಹುನ್ನಾರ: ತಾಪಂ ರದ್ದು ವಿಚಾರಕ್ಕೆ ಶಾಸಕ ಎಚ್.ಕೆ. ಪಾಟೀಲ ಕಿಡಿ

ರಾಜ್ಯ ಸರ್ಕಾರ ತಾಲೂಕು ಪಂಚಾಯತಿಯನ್ನು ರದ್ದು ಪಡಸಲು ಮುಂದಾಗಿದ್ದು, ಸAವಿಧಾನದಲ್ಲಿ ತಿದ್ದುಪಡಿಯಾಗಿದ್ದನ್ನು ರಾಜ್ಯ ಸರಕಾರ ರದ್ದು ಪಡಿಸೋಕೆ ಬರುವದಿಲ್ಲ. ಆದರೆ ಯಾವ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ್ ಪ್ರಶ್ನಿಸಿದರು.

ಆರ್ಕಿಟೆಕ್ಟ್ ಹೇಳಿದ್ರೆ ಕೇಸರಿ ಹಾಕ್ತೀನಿ: ಬಿ ಸಿ ನಾಗೇಶ್

ಉತ್ತರಪ್ರಭ ಸುದ್ದಿ ಗದಗ: ವಿವೇಕ ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಹಚ್ಚುವ ಆರ್ಕಿಟೆಕ್ಟರ ಏನಾದರೂ ಕೇಸರಿ…