ಆಲಮಟ್ಟಿ:
ಬಿ.ಎಸ್.ಯಡಿಯೂರಪ್ಪ, ರಾಜಕಾರಣದಿಂದ ನಿವೃತ್ತಿಯಾಗಲ್ಲ, ಅವರು ಚುನಾವಣಾ ರಾಜಕೀಯದಿಂದ ಮಾತ್ರ ನಿವೃತ್ತರಾಗುತ್ತಾರೆ, ಪಕ್ಷಕ್ಕೆ ಕೋಚ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂದು ಸುರಪುರ ಶಾಸಕ ನರಸಿಂಹ (ರಾಜುಗೌಡ) ನಾಯಕ ಹೇಳಿದರು. ಆಲಮಟ್ಟಿಯಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 75 ವರ್ಷ ಪೂರೈಸಿದವರಿಗೆ ರಾಜಕಾರಣದಿಂದ ನಿವೃತ್ತಿ, ಕುಟುಂಬ ರಾಜಕಾರಣ ಎಂಬ ಬಿಜೆಪಿ ತತ್ವ ಎಲ್ಲರಿಗೂ ಅನ್ವಯಿಸುತ್ತದೆ, ಆದರೆ ಯಡಿಯೂರಪ್ಪ ಅವರ ಕುಟುಂಬಕ್ಕೆ ಇದು ಅನ್ವಯಿಸುವುದಿಲ್ಲ, ಬಿ.ಎಸ್. ವಿಜಯೇಂದ್ರ ಯುವಕರ ಐಕಾನ್ ಆಗಿದ್ದಾರೆ ಎಂದರು. ಕಾoಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಾಗಿ ನಡೆಯುತ್ತಿರುವ ಪೈಪೋಟಿ, ದಿನನಿತ್ಯದ ಗೊಂದಲ ಹೇಳಿಕೆಗಳಿಂದ ಕಾಮಿಡಿ ಶೋ ಎಂಬoತೆ ಬಿಂಬಿತವಾಗುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.


ಭದ್ರತೆ:
ಆಲಮಟ್ಟಿಯ ಎಂಡಿ ಕಚೇರಿಯಲ್ಲಿ ಮಂಗಳವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಗೆ ಭಾರಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಗೇಟ್ ಗೆ ಸ್ವತಃ ಡಿ.ವೈ.ಎಸ್. ಪಿ. ಅರುಣಕುಮಾರ ಕೋಳುರ ಹಾಗೂ ಸಿಪಿಐ ಸೋಮಶೇಖರ ಜುಟ್ಟಲ ನಿಂತೂ ಯಾರನ್ನೂ ಒಳಗಡೆ ಬಿಡಲಿಲ್ಲ. ಸಭೆಗೆ ಪತ್ರಕರ್ತರನ್ನು ಸೇರಿ ಸದಸ್ಯರಲ್ಲದ ಯಾರನ್ನೂ ಬಿಡಲಿಲ್ಲ. ಒಬ್ಬ ಡಿ.ವೈ.ಎಸ್.ಪಿ, ಇಬ್ಬರೂ ಸಿಪಿಐ, 5 ಜನ ಪಿಎಸ್ ಐ, 10 ಜನ ಎ.ಎಸ್.ಐ, 16 ಜನ ಹೆಡ್ ಕಾನ್ಸ್ ಟೇಬಲ್, 44 ಕಾನ್ಸ್ ಟೇಬಲ್, 8 ಮಹಿಳಾ ಕಾನ್ಸ್ ಟೇಬಲ್, 2 ಡಿ.ಆರ್. ವಾಹನ ಸೇರಿ ಸುಮಾರು 100 ಜನ ಪೊಲೀಸ್ ರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

Leave a Reply

Your email address will not be published. Required fields are marked *

You May Also Like

ಸೋಕ್ ಪಿಟ್ ಕಾಮಗಾರಿ ಶೀಘ್ರ ಯಶಸ್ವಿಗೊಳಿಸಿ

ಸೋಕ್ ಪಿಟ್ ಮತ್ತು ಪೌಷ್ಟಿಕ ತೋಟ ನಿರ್ಮಾಣ ಗುರಿಯನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ನರೇಗಾ ಸಿಬ್ಬಂದಿ ಶೀಘ್ರದಲ್ಲೇ ತಲುಪಲು ಪ್ರಯತ್ನಿಸಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಬಿ.ಕಲ್ಲೇಶ ಅವರು ಹೇಳಿದರು.

ಬೀದರ್ ಗೆ ಮಹಾರಾಷ್ಟ್ರ ಕಂಟಕ….ಧಾರವಾಡಕ್ಕೆ ದೆಹಲಿ ಕಂಟಕ!!

ಧಾರವಾಡ: ಬೀದರ್ ನಲ್ಲಿ ಗರ್ಭಿಣಿ ಸೇರಿದಂತೆ 6 ಜನರಲ್ಲಿ ಸೋಂಕು ಪತ್ತೆಯಾಗಿದೆ. ಧಾರವಾಡದಲ್ಲಿ ಕೂಡ ಇಂದು…

ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದ ಪ್ರಕರಣ ಏಳು ಜನರ ಅಮಾನತ್ತು…!

ಉತ್ತರಪ್ರಭ ಸುದ್ದಿಗದಗ: ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದ್ದ ಪ್ರಕರಣ. ಐವರು ಮೇಲ್ವಿಚಾರಕರು, ಇಬ್ಬರು…

ಯಲಹಂಕ ಮೇಲ್ಸೇತುವೆ ಸಾವರ್ಕರ್ ಹೆಸರು: ವಿಪಕ್ಷಗಳ ವಿರೋಧ

ಯಲಹಂಕ ಮೇಲ್ಸೇತುವೆಗೆ ವಿನಾಯಕ ದಾಮೋದರ ಸಾವರ್ಕರ್ ಹೆಸರಿಡಲು ನಿರ್ಧರಿಸಲಾಗಿದೆ. ಆದರೆ, ಇದು ವಿಪಕ್ಷಗಳ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದು, ಹೊಸ ವಿವಾದಕ್ಕೆ ನಾಂದಿ ಹಾಡಿದೆ.