ಹಾವೇರಿ: ಮೆಣಸಿನಕಾಯಿ ಅಂದ್ರೆ ಥಟ್ ಅಂತ ನೆನಪಾಗುವುದೇ ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ. ಮೆಣಸಿನಕಾಯಿ ಬೆಳೆಯಿಂದಲೇ ಪ್ರಸಿದ್ಧಿಯಾಗಿರುವ ಬ್ಯಾಡಗಿ ಮಾರುಕಟ್ಟೆ ಇದೀಗ ಬಿಕೋ ಎನ್ನುತ್ತಿದೆ. ಕೊರೋನಾದ ಸಂಕಷ್ಟ ದಿನಗಳನ್ನು ಈಗಾಗಲೇ ಕಳೆಯುತ್ತಿದ್ದಿವೆ. ಆದರೆ ಕೊರೋನಾ ಕರಿ ಛಾಯೆ ಬಡ ಹಾಗೂ ಕೂಲಿಕಾರ್ಮಿಕರು, ರೈತರು ಅಲೆಮಾರಿಗಳು ಜೊತೆಗೆ ಒಂದು ಹೊತ್ತಿನ ಊಟಕ್ಕೆ ರಟ್ಟೆಯೊಳಗಿನ ಶಕ್ತಿಯನ್ನೆ ನಂಬಿಕೊಂಡವರನ್ನಂತು ಇನ್ನಿಲ್ಲದೆ ಕಾಡುತ್ತಿದೆ. ಹೀಗಾಗಿ ಕೊರೋನಾ ಕಾಟದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವ ರೈತರ ಸಂಕಷ್ಟದ ಬದುಕಿನ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಿಮ್ಮ ಉತ್ತರ ಪ್ರಭ ಮಾಡಿದೆ.

ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಮೆಣಸಿನಕಾಯಿ ಸೀಜನ್ ಜೋರಾಗಿಯೇ ಆರಂಭವಾಗುತ್ತದೆ. ಆದರೆ ಇನ್ನೇನು ರೈತ ಬೆಳೆದ ಬೆಳೆ ಮಾರುಕಟ್ಟೆಗೆ ಬರುತ್ತದೆ ಎನ್ನುವಷ್ಟರಲ್ಲಿ ವಕ್ಕರಿಸಿಕೊಂಡ ಕೊರೋನಾ ಮಹಾಮಾರಿಯಿಂದ ಬ್ಯಾಡಗಿ ಮಾರುಕಟ್ಟೆ ಬಂದ್ ಆಗಿದೆ. ಇದು ಮೆಣಸಿನಕಾಯಿ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಈಗಾಗಲೇ ಒಂದಲ್ಲ ಒಂದು ಕಾರಣದಿಂದ ಮೆಣಸಿನಕಾಯಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಲೇ ಇದ್ದರು. ಬೆಳೆ ಚೆನ್ನಾಗಿ ಬೆಳೆದಾಗ ಬೆಲೆಯ ಬರೆ ಬೀಳುತ್ತಿತ್ತು. ಆದರೆ ಅವರ ಬಾಳಲ್ಲೀಗ ಕೊರೋನಾ ಮತ್ತೊಂದು ಬರೆ ನೀಡಿದೆ.   

ಲಾಕ್ ಡೌನ್ ನಿಂದಾಗಿ ಮೆಣಸಿನಕಾಯಿ ಕಣಜ ಎಂದು ಕರೆಸಿಕೊಳ್ಳುವ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಗೆ ತಾತ್ಕಾಲಿಕ ಬೀಗ ಬಿದ್ದಿದೆ. ಇದರಿಂದಾಗಿ ಬ್ಯಾಡಗಿ ಮಾರುಕಟ್ಟೆಯನ್ನೆ ನಂಬಿಕೊಂಡಿದ್ದ ಮೆಣಸಿನಕಾಯಿ ಬೆಳಗಾರರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಈ ಮಾರುಕಟ್ಟೆ ಬಂದ್ ಆಗಿರುವುದರಿಂದ ಕೇವಲ ರೈತರಷ್ಟೆ ಅಲ್ಲ ವ್ಯಾಪಾರಸ್ಥರು, ಕೂಲಿಕಾರ್ಮಿಕರು ಕೂಡ ತೀವ್ರ ತೊಂದರೆಗೊಳಗಾಗಿದ್ದಾರೆ.

ಬ್ಯಾಡಗಿ ಮಾರುಕಟ್ಟೆಯಲ್ಲಿ 400ಕ್ಕೂ ಹೆಚ್ಚು ವ್ಯಾಪಾರಸ್ಥರಿದ್ದಾರೆ. ಅಂದಾಜು 25 ಸಾವಿರ ಕುಟುಂಬಗಳ ಕೂಲಿ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿದೆ. ಇನ್ನು ಹಾವೇರಿ, ಗದಗ, ಧಾರವಾಡ, ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದ ಬಹಯುತೇಕ ಜಿಲ್ಲೆಯಲ್ಲಿ ಬ್ಯಾಡಗಿ ಮೆನಸಿನ ಕಾಯೆ ಬೆಳೆಯನ್ನು ಲಕ್ಷಾಂತರ ರೈತರು ನಂಬಿಕೊಂಡಿದ್ದಾರೆ.

ಉಳ್ಳವರಿಗೆ ಮಾತ್ರ ಕೋಲ್ಡ್ ಸ್ಟೋರೇಜ್..!

ಬ್ಯಾಡಗಿ ಮೆಣಸಿನಕಾಯಿಗೆ ಬಹಳಷ್ಟು ಬೇಡಿಕೆ ಇರುವ ಕಾರಣದಿಂದ ಉತ್ತಮ ಬೆಲೆ ಸಿಗುವ ಹೊತ್ತಿನಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡಲಾಗದ ಕಾರಣ ಬಹಳಷ್ಟು ರೈತರು ಕೋಲ್ಡ್ ಸ್ಟೋರೇಜ್ ನಲ್ಲಿ ತಾವು ಬೆಳೆದ ಬೆಳೆ ಸಂಗ್ರಹಿಸಿದ್ದಾರೆ. ಆದರೆ ನೂರಾರು ಎಕರೆಯಲ್ಲಿ ಮೆಣಸಿನ ಕಾಯಿ ಬೆಳೆದ ದೊಡ್ಡ ಹಿಡುವಳಿದಾರರಿಗೆ ಮಾತ್ರ ಈ ಸೌಲಭ್ಯ ದೊರೆತಂತಾಗಿದೆ. ತುಂಡು ಭೂಮಿಯನ್ನೇ ನಂಬಿದ ಮೆಣಸಿನಕಾಯಿ ಬೆಳೆದ ರೈತನಿಗೆ ಮಾತ್ರ ಮಾರುಕಟ್ಟೆ ಆರಂಭವಾಗಿ ಉತ್ತಮ ಧಾರಣೆ ಸಿಗುವವರೆಗೆ ಬೆಳೆಯನ್ನು ಎಲ್ಲಿ ಸಂಗ್ರಹಿಸಿಡಬೇಕು ಎನ್ನುವುದು ಚಿಂತೆಗೀಡು ಮಾಡಿದೆ.

ಬ್ಯಾಡಗಿ ಮೆಣಸಿನಕಾಯಿಗೆ ಹೆಚ್ಚು ಬೇಡಿಕೆ

ಬ್ಯಾಡಗಿ ಮೆಣಸಿನಕಾಯಿಯನ್ನು ಧೀರ್ಗ ಕಾಲದವರೆಗೂ ಹಾಳಗದಂತೆ ಇಡಬಹುದು. ಬ್ಯಾಡಗಿ ಮೆಣಸಿನಕಾಯಿಯ ಖಾರ ಮಸಾಲಾ ಕಂಪನಿಗಳು ಹೆಚ್ಚು ಖರಿದಿಸುತ್ತವೆ. ನೈಸರ್ಗಿಕ ಬಣ್ಣ ತಯಾರಿಕೆಗೂ ಕೂಡ ಬ್ಯಾಡಗಿ ಮೆಣಸು ಹೆಚ್ಚು ರಫ್ತಾಗುತ್ತದೆ. ಇದರಲ್ಲಿನ ಪ್ಯಾಬ್ರಿಕ್ ಅಂಶ ನೈಸರ್ಗಿಕ ಬಣ್ಣ ತಯಾರಿಕೆಗೆ ಸೂಕ್ತವಾದುದು ಎನ್ನುವ ಅಭಿಪ್ರಾಯವಿದೆ. ಇದರಲ್ಲಿ ರುಚಿ, ಗಾಟು ನೀಡುವ ಒಲಿಯೊರೆಸಿನ್ ಅಂಶ ಅಧಿಕವಾಗಿರುತ್ತದೆ. ಹೀಗಾಗಿ ಈ ಅಂಶವನ್ನು ಪ್ರತ್ಯೇಕಿಸಿ ಸಿದ್ಧ ಆಹಾರ ಉತ್ಪನ್ನ, ಪಾನೀಯ, ಸಾಸ್, ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಎಣ್ಣೆ, ನೈಲ್ ಪಾಲಿಶ್ ಹಾಗೂ ಲಿಪ್ ಸ್ಟಿಕ್ ತಯಾರಿಸುವುದಕ್ಕೂ ಹೆಚ್ಚಾಗಿ ಬಳಸುತ್ತಾರೆ.

          ಹೀಗಾಗಿ ಮುಂದಿನ ದಿನಗಳನ್ನು ನೆನೆಸಿಕೊಂಡರೆ ಮಾರುಕಟ್ಟೆ ಬಂದ್ ನಿಂದಾಗಿ ಮೆಣಸಿನಕಾಯಿ ರೈತರು, ಕೂಲಿಕಾರ್ಮಿಕರು, ವ್ಯಾಪರಸ್ಥರ ಸ್ಥಿತಿಯ ಜೊತೆಗೆ ಇದರಿಂದ ತಯಾರಿಸುವ ಪದಾರ್ಥಗಳ ಕಂಪನಿಯ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಸಧ್ಯ ಗ್ರೀನ್ ಝೋನ್ ನಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಶಿಘ್ರ ಮೆಣಸಿನಕಾಯಿ ಮಾರುಕಟ್ಟೆ ಆರಂಭವಾಗಬಹುದಾ? ಎಂದು ಮೆಣಸಿನಕಾಯಿ ಬೆಳೆಯನ್ನೆ ನಂಬಿದ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಗೃಹ ರಕ್ಷಕ ದಳದ ಸದಸ್ಯ ಸ್ಥಾನಗಳ ನೋಂದಣಿಗೆ ಅರ್ಜಿ ಆಹ್ವಾನ

ಜಿಲ್ಲೆಯ ಗೃಹ ರಕ್ಷಕದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ 194 ಸ್ವಯಂ ಸೇವಕ ಗೃಹ ರಕ್ಷಕ ಸದಸ್ಯ ಸ್ಥಾನಗಳಿಗೆ ನೋಂದಣಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಜಿಲ್ಲೆಯ ಎಲ್ಲಾ ತಾಲೂಕಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಜಿಲ್ಲಾ ಗೃಹ ರಕ್ಷಕ ದಳದ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 9 ರಂದು ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕು.

ಕೋಟುಮಚಗಿ ಬಳಿ ಕಾರು ಪಲ್ಟಿ!: ಓರ್ವ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗದಗ ಸಮೀಪದ ಕೋಟುಮಚಗಿ ಬಳಿ ನಡೆದಿದೆ. ಬೆಳಗಿನ ಜಾವ ಅಪಘಾತ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಕಾರಿನಲ್ಲಿ ಇನ್ನು ಕೆಲವರು ಇದ್ದಿರಬಹುದೆಂದು ಸಾರ್ವಜನಿಕರಿಂದ ಸಂಶಯ ವ್ಯಕ್ತವಾಗಿದೆ.

ಕೊರೊನಾ ಚಿಕಿತ್ಸಾ ವೆಚ್ಚಕ್ಕೆ ಸಿದ್ದರಾಮಯ್ಯ ವಿರೋಧ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ @CMofKarnataka ನಿಗದಿಪಡಿಸಿರುವ ವೆಚ್ಚದ ವಿವರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ. ಒಂದು…

ಮುಳಗುಂದ ಅರ್ಬನ್ ಬ್ಯಾಂಕ ಚುನಾವಣೆ : ಅವಿರೋಧ ಆಯ್ಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ ಉಳಿದ ಅವಧಿಗೆ…