ಉತ್ತರಪ್ರಭ

ಸಿಂದಗಿ: ಅಖಿಲ ಭಾರತ ಸಂದೇಶ ವೇದಿಕೆ ಸಿಂದಗಿ ತಾಲೂಕಿನ ಘಟಕದ ವತಿಯಿಂದ ಬೇಸಿಗೆ ಕಾಲದಲ್ಲಿ ಸಿಂದಗಿನಗರದಲ್ಲಿ ಜನರಿಗೆ ಕುಡಿಯುವ ನೀರಿನ  ಸೇವೆಯನ್ನು  ನೀಡಿದ ವೇದಿಕೆ  ಕಾರ್ಯಕರ್ತರಗೆ ಸನ್ಮಾನ ಮಾಡಿ  ಪ್ರೋತ್ಸಾಹಿಸಲಾಯಿತು. ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಂದಗಿ ಪೊಲೀಸ್ ಠಾಣೆ ಪಿಎಸ್ಐ ನಿಂಗಪ್ಪ ಎಚ್ ಪೂಜಾರಿ ಸರ್ ಜನರ ಸೇವೆ ಪುಣ್ಯದ ಕಾರ್ಯ. ಜನರ ಸೇವೆ ಜನಾರ್ಧನ ಸೇವೆ. ಈ ಕಾರ್ಯ ಸಲ್ಲಿಸಿದ್ದು ಅತ್ಯಮೂಲ್ಯವಾದದ್ದು.ಇದೊಂದು ಉತ್ತಮ ಪ್ರತಿಫಲದಾಯಕ ಕೆಲಸ. ವೇದಿಕೆ ನಮ್ಮ ಠಾಣೆಯ ಆವರಣದಲ್ಲಿ ನೀರಿನ ವ್ಯವಸ್ಥೆ ಮಾಡಿತು ಇದರಿಂದ ಅನೇಕರು ಬಾಯಾರಿಕೆ ನಿಗಿಸಿ ಪ್ರಯೋಜನ ಪಡೆದರು ಎಲ್ಲಾ ಸಿಬ್ಬಂದಿ ಪರವಾಗಿ  ನಾನು ಧನ್ಯವಾದಗಳು ಹೇಳುತ್ತೇನೆ  ಮತ್ತು ಮಾನವೀಯತೆಯ ಸೇವೆಯಲ್ಲಿ ನಮ್ಮ ಬೆಂಬಲ ಸದಾ ಇರುತ್ತದೆ ಎಂದು  ಹೇಳಿದರು. ನಂತರ ಸಿಂದಗಿ ತಾಲೂಕಿನ ತಹಸೀಲ್ದಾರ್ ಅವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲಾಯಿತು ಅವರು, ತಮ್ಮ ಕಚೇರಿಯ ಹೊರಗೆ ನೀರಿನ ಅರವಟಿಗೆ ಇಡಲು ಅನುಮತಿ ನೀಡಿದ್ದರು.

ವಿವಿಧ ಗ್ರಾಮಗಳಿಂದ ತಮ್ಮ ಕೆಲಸಗಳಿಗೆ ಬರುವ ಸಾವಿರಾರು ಜನರಿಗೆ ಸೇವೆ ಒದಗಿಸಿಲು ಮತ್ತು  ಬೇಸಿಗೆಯಲ್ಲಿ  ತಾಪಂ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾಯಾರಿಕೆಆದವರ ಸೇವೆಗೆ ಅವಕಾಶ ನಿಡಿದ್ದರು, ವೇದಿಕೆಯ ಸದಸ್ಯರಿಗೆ.ಪ್ರಶ್ನೆ ಕೇಳುತ್ತಾ ಹೇಳಿದರು “ತಾವು ಹಜ್ಜಿಗೆ ಹೂಗಿ ಬಂದಿರಬಹುದು, ಏಕೆಂದರೆ ಒಬ್ಬ ಸೇವಕ ಹಜ್ಜಿಗೆ ಹೋದಾಗ, ಅವನು ಮಾನವೀಯತೆ ಸೇವೆ ಮನೋಭಾವದಿಂದ ಹಿಂದಿರುಗುತ್ತಾನೆ ಮತ್ತು ಮಾನವರೊಂದಿಗೆ ದಯೆ ಮತ್ತು ಸಹಾನುಭೂತಿಯಿಂದ ವರ್ತಿಸುತ್ತಾನೆ. “ಇಂದು ಅಣ್ಣ ತಮ್ಮಂದಿರ ಜೊತೆ ಜಗಳವಾಡುತ್ತಿದ್ದಾರೆ ಹಿಂದೆ ಎಲ್ಲರೂ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತಿದ್ದರು ಕುಟುಂಬದವರೆಲ್ಲಾ ಒಂದೇ ಮನೆಯಲ್ಲಿ ವಾಸಿಸುತಿದ್ದರು ಈಗ ಎಲ್ಲವೂ ಬದಲಾಗಿದೆ ಸಾಮಾಜಿಕ ಮಾಧ್ಯಮ (ಸೋಶಿಯಲ್ ಮೀಡಿಯಾ)  ಬಂದ ನಂತರ ಮಾನವರ ಭಾವನೆಗಳು ಅತೀ ಬೇಗ ಹೆಚ್ಚುತ್ತವೆ ಪರಸ್ಪರ ಸಂಬಂಧ ದೂರವಾಗಿವೆ ಮತ್ತು ದ್ವೇಷಕ್ಕೆ ಕಾರಣ ವಾಗುತ್ತವೆ ಪ್ರತಿ ಮನುಷ್ಯ ತನ್ನ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದಾನೆ. ಇತರರ ಹಿತವನ್ನು ಕಡೆಗಣಿಸುತ್ತಿದ್ದಾನೆ. ಇಂತಹ ಕಾಲದಲ್ಲಿ ಮಾನವೀಯತೆಯ ಸೇವೆ ಮಾಡುವುದೇ ಶ್ರೇಷ್ಠ, ಈಗ ಪ್ರಮಾಯಾಣಿಕವಾಗಿ ಕೇಲಸ ಮಾಡುವುದು. ಪ್ರವಾದಿ ಮಹಮದ್ ಪೈಗಂಬರರು ತಿಳಿಸಿಕೊಟ್ಟರು ಹಾದಿ…  ಯಾವುದೇ ಸೇವೆಯನ್ನು  ಮಾಡಲು ನಾವು ಸಿದ್ಧನಿದ್ದೆವೆ. ಮಾನವೀಯತೆಯ ಸೇವೆಯಲ್ಲಿ ಭಾಗವಹಿಸುವುದು ನಮ್ಮ ಕಾರ್ಯಕರ್ತರಿಗೆ ಸಂತೋಷದ ಸಂಗತಿಯಾಗಲಿದೆ. ಈ ಒಂದು ಸೇವೆಗೆ ಸಮಯ ನೀಡಿದ್ದಕ್ಕಾಗಿ  ನಮ್ಮ ವೇದಿಕೆ ವತಿಯಿಂದ ಮೌಲಾನಾ ದಾವುದ ನದ್ವ ಅವರು ಕೃತಜ್ಞತೆ ಸಲ್ಲಿಸಿದರು ಮೌಲಾನಾ ಕಲೀಮುಲ್ಲಾ  ಹಜರತ್ ಪಟೇಲ್ ಬಿರಾದಾರ  ಖಾರಿ ಅಬುಲ್ ಖೈರ್, ಮೌಲಾನಾ ಇಬ್ರಾಹಿಂ ದೇವರಹಿಪ್ಪರಗಿ, ಮೌಲಾನಾ ಇಬ್ರಾಹಿಂ ನದ್ವಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಕೈಗೆ ಸಿಕ್ಕ ಅಧಿಕಾರಿಗೆ ಟ್ರ‍್ಯಾಕ್ಟರ್ ನಲ್ಲಿ ರಸ್ತೆ ದರ್ಶನ: ಕೆಲವು ತಿಂಗಳಕ್ ಕಿತ್ತು ಹೋಗೈತ್ಯಂತ ದೊಡ್ಡೂರು ರಸ್ತೆ!

ಹೇಳಿ, ಹೇಳಿ ಸಾಕಾಗಿ ಹೋಯ್ತು. ಕಾಮಗಾರಿ ಮುಗಿದ್ ಒಂದ್ ತಿಂಗಳದಾಗ ಮಾಡಿದ್ ರೋಡ್ ಹಳ್ಳಾ ಹಿಡಿದೈತಿ. ಬರ್ರಿ.. ನೀವಾರಾ ನೋಡ್ ಬರ್ರಿ.., ಕೆಲ್ಸಾ ಮಾಡಿದ್ ಗುತ್ತಿಗೆದಾರರಾದ್ರು ಯಾರು? ಹಿಂಗೆಲ್ಲ ಹೇಳಿ ಅಧಿಯಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡ ಘಟನೆ ಲಕ್ಷ್ಮೇಶ್ವರದಲ್ಲಿ ನಡೆಯಿತು.

ಸರ್ಕಾರಿ ವಿವಿಗಳ ತಾತ್ಕಾಲಿಕ- ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಕುರಿತ ವಿಚಾರ ಸಂಕಿರಣ

ಕರ್ನಾಟಕದ ಸರ್ಕಾರೀ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾತ್ಕಾಲಿಕ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಮತ್ತು ವೇತನ ತಾರತಮ್ಯ ಸರಿಪಡಿಸಲು ಒತ್ತಾಯಿಸಿ ರಾಜ್ಯಮಟ್ಟದ ವಿಚಾರ ಸಂಕಿರಣ (ವೆಬಿನಾರ್) ಅನ್ನು 2020 ಆಗಸ್ಟ್ 19 ರಂದು ಬುಧವಾರ ಮಧ್ಯಾಹ್ನ 2.30 ಕ್ಕೆ (ಸಾಮಾಜಿಕ ಜಾಲತಾಣದ ಮೂಲಕ) ಆಯೋಜಿಸಲಾಗಿದೆ.

ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯಿಂದ 2020-21 ನೇ ಸಾಲಿನ ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹೊಸ ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಲಕ್ಷ್ಮೇಶ್ವರ: ಕಾಮಗಾರಿ ಮುಗಿದರೂ ಹಸ್ತಾಂತರವಾಗದ ಅಂಗನವಾಡಿ

ಬಡ ಮಕ್ಕಳ ಬದುಕಿನಲ್ಲಿ ಶಿಕ್ಷಣ ದಿವಿಗೆಯನ್ನು ಹಚ್ಚಬೇಕಾದ ಅಂಗನವಾಡಿ ಕೇಂದ್ರ ಇದ್ದು ಇಲ್ಲದಂತಾಗಿ ತಾಲೂಕಿನ ಆದರಹಳ್ಳಿ ಗ್ರಾಮದ 2ನೇ ವಾರ್ಡಿನ ಅಂಗನವಾಡಿ ಕೇಂದ್ರ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಹಲವು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ಕೊಡುತ್ತಾ ಬಂದಿದ್ದಾರೆ. ಹೊಸ ಅಂಗನವಾಡಿ ಕೇಂದ್ರ ನಿರ್ಮಾಣವಾಗಿ ಸುಮಾರು ವರ್ಷಗಳು ಕಳೆದರೂ ಇದುವರೆಗೆ ಅಂಗನವಾಡಿ ಕೇಂದ್ರವನ್ನು ಗುತ್ತಿಗೆದಾರರು ಹಸ್ತಾಂತರ ಮಾಡಿಲ್ಲ ಹಾಗೂ ಗ್ರಾ.ಪಂ.ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯೂ ಆಗಿದೆ. ಆದರೆ ಅಂಗನವಾಡಿ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದು 2 ವಾರ್ಡಿನ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೋರ ಹಾಕುತ್ತಿದ್ದಾರೆ.