ಉತ್ತರಪ್ರಭ ಸುದ್ದಿ

ನರೇಗಲ್ಲ:ಪುರುಷನೊಂದಿಗೆ ಎಲ್ಲ ರಂಗಗಳಲ್ಲಿಯೂ ಸಾಧನೆಗೈಯುತ್ತಿರುವ ಮಹಿಳೆ ಎಂದಿಗೂ ಅಬಲೆಯಲ್ಲ, ಆಕೆ ಸಬಲೆ ಎಂದು ಶ್ರೀ ಮತಿ ಸಂಯುಕ್ತಾ ಕೆ.ಬಂಡಿ ಅಧ್ಯಕ್ಷರು ಅಕ್ಕನ ಬಳಗ ಗಜೇಂದ್ರಗಡ ಹೇಳಿದರು.

ಪಟ್ಟಣದ ಸರಕಾರಿ ಪ್ರಾಥಮಿಕ ಶಾಲೆಯ ಬಯಲಿನಲ್ಲಿ ಸಂಜೆ ನಡೆದ ಪಟ್ಟಣದ ಸಮಸ್ತ ಮಹಿಳಾ ಬಳಗದ ವತಿಯಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಮಹಿಳೆ ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತಳಾಗಿದ್ದಳು. ಆದರೆ ಈಗ ಅವಳು ಎಲ್ಲ ರಂಗಗಳಲ್ಲಿಯೂ ತನ್ನ ಸಾಧನೆಯ ಛಾಪನ್ನು ಒತ್ತಿದ್ದಾಳೆ. ಸಾಹಿತ್ಯ, ಸಂಗೀತ, ಕಲೆ, ಉದ್ಯೋಗ ಹೀಗೆ ಅನೇಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾಳೆ

ಸಂಯುಕ್ತಾ ಕೆ ಬಂಡಿ

ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದ ಡಾ:ಶ್ರೀ ಮತಿ ಸಪ್ನಾ ಕೆ.ಕಾಳೆ ಶಾಂತಿ, ಸಹನೆ, ಸಂಯಮದ ಪ್ರತಿರೂಪ ಹೆಣ್ಣು. ಅವಳಿಂದಲೆ ಈ ಜಗತ್ತಿಗೆ ಶಾಂತಿ. ದೀಪ ತನ್ನನ್ನು ತಾನು ಸುಟ್ಟುಕೊಂಡು ಇತರರಿಗೆ ಬೆಳಕು ನೀಡುವಂತೆ ಮಹಿಳೆ ತನ್ನ ಸಮರ್ಪಣೆಯ ಭಾವದೊಂದಿಗೆ ಈ ಜಗತ್ತನ್ನು ಬೆಳಕಾಗಿದ್ದಾಳೆ ಎಂದರು.

ಮಹಿಳೆ ಅಬಲೇಯಲ್ಲ ಸಬಲೇ – ಸಂಯುಕ್ತಾ ಕೆ ಬಂಡಿ

ಉಪನ್ಯಾಸಕಿ ಶ್ರೀ ಮತಿ ವೇದಾ ಕುಲಕರ್ಣಿ ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆ ಇಲ್ಲದ ಕ್ಷೇತ್ರವನ್ನು ಊಹಿಸಿಕೊಳ್ಳುವುದೆ ದುಸ್ತರವಾಗಿದೆ. ಆಟೋರಿಕ್ಷಾದಿಂದ ಅಂತರಿಕ್ಷದವರೆಗೆ ಮಹಿಳೆ ತನ್ನ ಸಾಧನೆಯ ದಾಪುಗಾಲನ್ನಿರಿಸಿದ್ದಾಳೆ. ಕೇವಲ ವರ್ಷದಲ್ಲಿ ಒಂದು ದಿನ ಈ ಆಚರಣೆ ಮಾಡಿ ಸುಮ್ಮನಿರುವುದರ ಬದಲು, ಮನೆಯಿಂದಲೆ ಮಹಿಳಾ ಸಮಾನತೆಗಾಗಿ ಹೋರಾಡಬೇಕಿದೆ. ಮಹಿಳಾ ದಿನಾಚರಣೆಯ ಆಶಯಗಳು ಕೇವಲ ಸುಶಿಕ್ಷಿತ ವರ್ಗದ ಮಹಿಳೆಯರಿಗೆ ತಲುಪಿದರೆ ಸಾಲದು. ಸಮಾಜದ ಕಟ್ಟಕಡೆಯ ಮಹಿಳೆಗೂ ಈ ಸಂದೇಶ ತಲುಪಬೇಕು. ಅವರೂ ಸಹ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತಾಗಬೇಕೆಂದರು.

ನಂತರ ಸರಿಗಮಪ ಎಂಟರ್ ಟೈನ್ಮಟ್ ಬೆಂಗಳೂರು ತಂಡದವರಿಂದ ಮನರಂಜನಾ ಕಾರ್ಯಕ್ರಮ.ಹಾಗೂ ಕಾಮಿಡಿ ಕಿಲಾಡಿಗಳಿಂದ ಕಾಮಿಡಿ ಕಾರ್ಯಕ್ರಮ ಜರುಗಿದವು.

ಈ ಸಂಧರ್ಭದಲ್ಲಿ ಅನುಸೂಯಾ ಪಾಟೀಲ. ಸಾವಿತ್ರಿ ಶಿವುನಗೌಡ.ಗೌರಮ್ಮ ಆನಂದಪ್ಪನವರ. ಪಟ್ಟಣ ಪಂಚಾಯತಿ ಅಧ್ಯಕ್ಷೆ ವಿಜಯಲಕ್ಷ್ಮಿ ನಿಂಗಪ್ಪ ಚಲವಾದಿ ಮಲ್ಲವ್ವ ಕಳಕೊಣ್ಣವರ.ಸುಜಾತಾ ಸಂಗನಾಳಮಠ.ಸಾವಿತ್ರಿ ಗಂಗರಗೊಂಡ. ಸುಮಂಗಲಾ ಕೊಟಗಿ.ಚೆನ್ನಮ್ಮ ಕಡಗದ.ಅಕ್ಹಮಹಾದೇವಿ ಪಾಟೀಲ. ಬಸಮ್ಮ ಕಣವಿ.ಅನುಸೂಯಾ ಸೋಮಗೊಂಡ. ಸುನೀತಾ ವಂಕಲಕುಂಟಿ. ವಿದ್ಯಾಗೌರಿ ಹೆಗಡೆ.ಅರ್ಚನಾ ಕುಲಕರ್ಣಿ.ಸೀಮಾ ಕೊಂಡಿ.ಅಕ್ಕಮ್ಮ ಮಣ್ಣೋಡ್ಡರ.ಜ್ಯೋತಿ ಪಾಯಪ್ಪಗೌಡ್ರ. ಸುಮಿತ್ರಾ ಕಮಲಾಪುರ.ವಿಶಾಲಾಕ್ಷಿ ಹೊಸಮನಿ.

Leave a Reply

Your email address will not be published. Required fields are marked *

You May Also Like

ಗದಗ ಹೆರಿಗೆ ಆಸ್ಪತ್ರೆಗೆ ಕೊರೊನಾ ಭಯ..!:ಗರ್ಭಿಣಿಗೆ ಸೋಕಿನ ಶಂಕೆ!

ಗದಗ: ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಗದಗ ಜಿಲ್ಲೆ ಜನರನ್ನು ಆತಂಕಕ್ಕೀಡು ಮಾಡಿದೆ.…

ಯೋಧನ ಸಮಯ ಪ್ರಜ್ಞೆಯಿಂದ ಕರುಳು ಬಳ್ಳಿ ಸೇರಿದ ಅಜ್ಜಿ..!

ಅರ್ಥವಾಗದ ಊರು, ತಿಳಿದ ಭಾಷೆಯ ಮದ್ಯೆ ಏಕಾಂಗಿಯಾದ ಅಜ್ಜಿ ತನ್ನವರಿಗಾಗಿ ಅಳುತ್ತಿದ್ದಳು. ಅಜ್ಜಿಯ ಆರ್ಥನಾದ ಅಲ್ಲಿರುವ ಯಾರ ಗಮನಕ್ಕೂ ಬರಲೇ ಇಲ್ಲ. ಕಣ್ಣೀರಿಡುತ್ತಿದ್ದ ಇಳಕಲ್ ಸೀರೆಯುಟ್ಟ ಹಿರಿಯ ಜೀವ ಕರುನಾಡಿನವಳುವೆಂದರಿತಯೋಧ ಅಜ್ಜಿಯ ಆರ್ಥನಾದಕ್ಕೆ ಧ್ವನಿಯಾಗಿದ್ದಾರೆ. ತನ್ನವರನ್ನು ಕಳೆದುಕೊಂಡ ಅಜ್ಜಿಗೆ ತನ್ನ ಬಂಧು ಬಳಗದೊಂದಿಗೆ ತಳುಕು ಹಾಕುವ ಮೂಲಕ ಜಿಲ್ಲೆಯ ಮುಂಡರಗಿ ಸೈನಿಕ ಜನರ ಮೆಚ್ಚುಗೆಯ ಜೊತೆಗೆ ಸೈ ಎನಿಸಿಕೊಂಡಿದ್ದಾರೆ.

ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವರ್ಗಾವಣೆ

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಡಿಪಿ & ಎಆರ್ (ಸರ್ವೀಸಸ್-1) ಇಲಾಖೆ ಇಂದು ಆದೇಶ ಹೊರಡಿಸಿದೆ.

ನಾಳೆ ನಡೆಯುವ ಜನಸಂಪರ್ಕ ಯಾತ್ರೆಗೆ ಬಿಎಸ್‌ವೈ, ಸಿಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿ ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೇರಿದಂತೆ ಅನೇಕ…